ದೀಪಾವಳಿಯಂದೇ ಬದುಕು ನಂದಿಸಿದ ಬೆಂಕಿ: ಹೈದರಾಬಾದ್‌ನಲ್ಲಿ ಬೆಂಕಿ ಅವಘಡಕ್ಕೆ 9 ಜನ ಬಲಿ

Published : Nov 13, 2023, 03:12 PM IST
ದೀಪಾವಳಿಯಂದೇ ಬದುಕು ನಂದಿಸಿದ ಬೆಂಕಿ: ಹೈದರಾಬಾದ್‌ನಲ್ಲಿ ಬೆಂಕಿ ಅವಘಡಕ್ಕೆ 9 ಜನ ಬಲಿ

ಸಾರಾಂಶ

ದೀಪಾವಳಿಯಂದೇ ಮುತ್ತಿನ ನಗರಿ ಹೈದರಾಬಾದ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ದುರಂತದಲ್ಲಿ 9 ಜನ ಸಾವನ್ನಪ್ಪಿದ್ದಾರೆ

ಹೈದರಾಬಾದ್‌: ದೀಪಾವಳಿಯಂದೇ ಮುತ್ತಿನ ನಗರಿ ಹೈದರಾಬಾದ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ದುರಂತದಲ್ಲಿ 9 ಜನ ಸಾವನ್ನಪ್ಪಿದ್ದಾರೆ. ಹೈದರಾಬಾದ್‌ನ ನಾಂಪಲ್ಲಿ ಸಮೀಪದ ಬಜಾರ್ ಗಾರ್ಡ್ (ಬಜಾರ್‌ಘಾಟ್‌) ಪ್ರದೇಶದಲ್ಲಿ ಜನವಸತಿಯಿದ್ದ ಐದಂತಸ್ತಿನ ಕಟ್ಟಡವೊಂದರಲ್ಲಿ ಈ ದುರಂತ ಸಂಭವಿಸಿದೆ. 

ಇಂದು ಮುಂಜಾನೆ ಐದಂತಸ್ತಿನ ಕಟ್ಟಡದ 2ನೇ ಮಹಡಿಯಲ್ಲಿ ಮೊದಲಿಗೆ ಬೆಂಕಿ ಕಾಣಿಸಿಕೊಂಡಿದೆ. 9.35ರ ಸುಮಾರಿಗೆ ಈ ಬಗ್ಗೆ ಅಗ್ನಿ ಶಾಮಕ ಇಲಾಖೆಗೆ ಕರೆ ಬಂದಿದೆ. ಕೂಡಲೇ 7 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ. ಪ್ರಾಥಮಿಕ ವರದಿಯ ಪ್ರಕಾರ, 2ನೇ ಮಹಡಿಯಲ್ಲಿ ಕೆಲವು ರಾಸಾಯನಿಕ ತುಂಬಿದ್ದ ಡ್ರಮ್‌ಗಳನ್ನು ಸ್ಟೋರ್‌ ಮಾಡಲಾಗಿತ್ತು. ಇದರಲ್ಲಿಯೇ ಬೆಂಕಿ ಕಾಣಿಸಿಕೊಂಡು ನಂತರ ಸುತ್ತಲೂ ಹರಡಿದೆ ಎಂದು ತಿಳಿದು ಬಂದಿದೆ. 

ದೀಪಾವಳಿ ಹಬ್ಬದ ದಿನವೇ ಅಗ್ನಿ ಅವಘಡ; ಫರ್ನಿಚರ್ ಶೋ ರೂಂ ಸಂಪೂರ್ಣ ಸುಟ್ಟು ಭಸ್ಮ!

ಬೆಂಕಿಯಿಂದಾಗಿ ಈ ಕಟ್ಟಡದ  3 ನಾಲ್ಕು ಹಾಗೂ 5ನೇ ಮಹಡಿಯಲ್ಲಿದ್ದ ಜನ ಅಲ್ಲಿ ಸಿಲುಕಿದ್ದರು. 2ನೇ ಮಹಡಿಯ ಬೆಂಕಿಯಿಂದ ಕಾಣಿಸಿಕೊಂಡ ಹೊಗೆ ಮೇಲಿನ ಮಹಡಿಗಳಿಗೆ ಹಬ್ಬಿತ್ತು. ನಾವು ಈಗಾಗಲೇ 10 ಜನರನ್ನು ರಕ್ಷಿಸಿದ್ದು, ರಕ್ಷಣಾ ಕಾರ್ಯ ಮುಂದುವರೆದಿದೆ ಎಂದು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. 

ಈ ಬಜಾರ್ ಗಾರ್ಡ್ ಪ್ರದೇಶವೂ ಹೈದರಾಬಾದ್‌ನ ಕೇಂದ್ರ ಸ್ಥಾನವಾಗಿದ್ದು, ಸಣ್ಣಪುಟ್ಟ ಕೈಗಾರಿಕೆಗಳನ್ನು ಹೊಂದಿದ್ದು, ಅತೀ ಹೆಚ್ಚು ಜನಸಂದಣಿ ಹೊಂದಿರುವ ಪ್ರದೇಶವಾಗಿರುವ ಜೊತೆಗೆ ಹೈದರಾಬಾದ್‌ನ ರೈಲು ನಿಲ್ದಾಣಕ್ಕೂ ಸಮೀಪದಲ್ಲಿದೆ. 

ಕಾಶ್ಮೀರದ ದಾಲ್ ಸರೋವರದಲ್ಲಿ ಅಗ್ನಿ ದುರಂತ, ಹೌಸ್ ಬೋಟ್ ಹೊತ್ತಿ ಉರಿದು 3 ಪ್ರವಾಸಿಗರು ಸಾವು!

ಹೆಚ್ಚಿನ ಅನಾಹುತವಾಗದಂತೆ ತಡೆಯಲು ಕೆಮಿಕಲ್ ತುಂಬಿದ್ದ 12 ಬ್ಯಾರಲ್  ಹಾಗೂ 38 ಜಾರ್ ಕ್ಯಾನ್‌ಗಳನ್ನು ಘಟನಾ ಸ್ಥಳದಿಂದ ತೆಗೆಯಲಾಗಿದೆ.  ಘಟನೆಯಲ್ಲಿ ಮೃತರಾದವವರನ್ನು 58 ವರ್ಷದ ಎಂಡಿ ಅಜಂ, 50 ವರ್ಷದ ರೆಹಾನಾ ಸುಲ್ತಾನ್, 26 ವರ್ಷದ ಫೈಜಾ ಸಮೀನ್, 35 ವರ್ಷದ ತಹೂರಾ ಫರೀನ್, 6 ವರ್ಷದ ತೋಬಾ, 13 ವರ್ಷದ ತರೂಬಾ, 66 ವರ್ಷದ ಎಂಡಿ ಜಾಕೀರ್ ಹುಸೇನ್, 32 ವರ್ಷದ ಹಸೀಬ್ ಉರ್ ರೆಹಮಾನ್, 55 ವರ್ಷದ ನಿಕತ್ ಸುಲ್ತಾನ್ ಎಂದು ಗುರುತಿಸಲಾಗಿದ್ದು, ಇನ್ನು ಮೂರು ಜನ ಈ ದುರಂತದಲ್ಲಿ ಗಾಯಗೊಂಡಿದ್ದಾರೆ. ಒಟ್ಟು 16 ಜನರನ್ನು ಅಗ್ನಿ ಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. 

ಘಟನಾ ಸ್ಥಳಕ್ಕೆ ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಭೇಟಿ ನೀಡಿದ್ದಾರೆ. ಹಾಗೆಯೇ ನಗರಾಭಿವೃದ್ಧಿ ಸಚಿವ ಕೆ.ಟಿ ರಾಮ್‌ರಾವ್ ಕೂಡ ಭೇಟಿ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನನ್ನ ತಂಗಿಯರಿಗಾಗಿ ಅವರನ್ನು ಬಿಟ್ಟುಬಿಡಿ: ತನ್ನ ಕೊಲ್ಲಲೆತ್ನಿಸಿದ ತಂದೆಯ ಬಿಡುಗಡೆಗೆ ಬೇಡಿದ ಬಾಲಕಿ
25 ಜನರ ಬಲಿ ಪಡೆದ ಗೋವಾ ಕ್ಲಬ್ ಬೆಂಕಿ ದುರಂತ ಸಂಭವಿಸಿದ ಕೆಲ ಗಂಟೆಗಳಲ್ಲೇ ಥೈಲ್ಯಾಂಡ್‌ಗೆ ಹಾರಿದ ಕ್ಲಬ್ ಮಾಲೀಕ