
ನೈನಿತಾಲ್ (ಉತ್ತರಾಖಂಡ)(ಆ. 13) ಆರೆಂಟು ಅಡಿ ಉದ್ದದ ಕಾಳಿಂಗ ಸರ್ಪ ನಿಮ್ಮ ಮನೆಯ ಬೆಡ್ ರೂಂ ಮಂಚದ ಕೆಳಗೆ ಬೆಚ್ಚಗೆ ಬಚ್ಚಿಟ್ಟುಕೊಂಡರೆ! ಹೌದು ಸುದ್ದಿ ಊಹೆ ಮಾಡಿಕೊಂಡರೆ ಮೈಯೆಲ್ಲ ನಡುಕ ಬರುತ್ತದೆ. ಆದರೆ ಇಂಥದ್ದೇ ಒಂದು ಘಟನೆ ನಡೆದುಹೋಗಿದೆ.
ಉತ್ತರಾಖಂಡದ ನೈನಿತಾಲ್ನ ಮನೆಯೊಂದಕ್ಕೆ ಪ್ರವೇಶ ಮಾಡಿದ್ದ ಕಾಳಿಂಗ ಸರ್ಪ ಮಂಚದ ಅಡಿಗೆ ಅಡಿ ತೆರಳಿ ಬೆಚ್ಚಗೆ ಕುಳೀತುಕೊಂಡಿದೆ. ಮನೆಯವರ ಕಣ್ಣಿಗೆ ಹೇಗೋ ಬಿದ್ದಿದೆ.
ಮಿಲನದ ಬಳಿಕ ಸಂಗಾತಿಯನ್ನೇ ತಿನ್ನುವ ಕಾಳಿಂಗ್..ಕಾರಣ?
ತಕ್ಷಣ ಅರಣ್ಯ ಇಲಾಖೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಕೂಡಲೇ ಇಲಾಖೆ ಕ್ಷಿಪ್ರ ಕಾರ್ಯ ಪಡೆ ಮನೆಗೆ ಆಗಮಿಸಿ ಹಾವನ್ನು ಹಿಡಿದಿದೆ. ಉರಗ ತಜ್ಞರೊಬ್ಬರು ಮನೆಯಲ್ಲಿ ಕಾಳಿಂಗವನ್ನು ಹಿಡಿಯುತ್ತಿರುವ ದೃಶ್ಯ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.
ಹಾವನ್ನು ಸುರಕ್ಷಿತವಾಗಿ ಕಾಡಿನೊಳಕ್ಕೆ ಬಿಟ್ಟು ಬರಲಾಗಿದೆ. ಅರಣ್ಯಾಧಿಕಾರಿ ಅಕಾಶ್ ಕುಮಾರ್ ವರ್ಮಾ ತಿಳಿಸಿದ್ದಾರೆ. ಹಾವನ್ನು ಹಿಡಿಯುವುದರಿಂದ ಹಿಡಿದು ಅರಣ್ಯಕ್ಕೆ ಬಿಟ್ಟು ಬರುವಲ್ಲಿವರೆಗಿನ ವಿಡಿಯೋ ಮಾಡಲಾಗಿದ್ದು ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ಕರ್ನಾಟಕದ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಭಾಗದಲ್ಲಿ ಕಾಳಿಂಗ ಸರ್ಪಗಳು ಹೆಚ್ಚಾಗಿ ಕಂಡುಬರುತ್ತವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ