
ನೆಲ್ಲೂರು(ಜೂ.08): ಕೊರೋನಾಕ್ಕೆ ರಾಮಬಾಣ ಎಂದು ಹೇಳಲಾಗುತ್ತಿರುವ ಆನಂದಯ್ಯನ ‘ಹಳ್ಳಿ ಮದ್ದು’ ಪಡೆಯಲು ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಕೃಷ್ಣಪಟ್ಟಣಂ ಗ್ರಾಮದಲ್ಲಿ ಮತ್ತೆ ನೂಕುನುಗ್ಗಲು ಆರಂಭವಾಗಿದೆ. ಸೋಮವಾರದಿಂದ ಔಷಧ ವಿತರಣೆಗೆ ನಿರ್ಧಾರ ಮಾಡಲಾಗಿತ್ತಾದರೂ, ಭಾನುವಾರವೇ ಭಾರೀ ಪ್ರಮಾಣದಲ್ಲಿ ಜನರು ಹಳ್ಳಿಗೆ ಆಗಮಿಸಿದ್ದರು.
ನೆರೆಯ ಜಿಲ್ಲೆಗಳಿಂದ ಭಾರೀ ಪ್ರಮಾಣದಲ್ಲಿ ಆಗಮಿಸಿದ್ದ ಜನರು ಆನಂದಯ್ಯನ ಸೋದರ ನಾಗರಾಜು ಮೂಲಕ ಔಷಧಿ ಪಡೆದುಕೊಂಡಿದ್ದಾರೆ. ಆದರೆ ಈ ವೇಳೆ ಭಾರೀ ನೂಕುನುಗ್ಗಲು ಉಂಟಾಗಿ ವಿಷಯ ಪೊಲೀಸರ ಕಿವಿಗೆ ತಲುಪಿದ್ದು, ಅವರು ಸ್ಥಳಕ್ಕೆ ಧಾವಿಸಿ ಜನರನ್ನು ಚದುರಿಸಿದ್ದಾರೆ.
ಈ ಮುನ್ನ ಮೇ 21ರಂದು ಆನಂದಯ್ಯನ ಹಳ್ಳಿ ಮದ್ದು ಪಡೆಯಲು ಜನರು ಕಷ್ಣಪಟ್ಟಣಂ ಗ್ರಾಮಕ್ಕೆ ಮುಗಿಬಿದ್ದಿದ್ದು, ಭಾರೀ ಸುದ್ದಿಯಾಗಿತ್ತು.ಆ ಬಳಿಕ ಔಷಧಿಯನ್ನು ಪರೀಕ್ಷಿಸಿದ್ದ ತಜ್ಞರ ಸಮಿತಿ ಅದರಿಂದ ಯಾವುದೇ ಅಡ್ಡ ಪರಿಣಾಮ ಇಲ್ಲ. ಕೊರೋನಾ ರೋಗಿಗಳ ಚಿಕಿತ್ಸೆಗೆ ಔಷಧವನ್ನು ಬಳಕೆ ಮಾಡಬಹುದು ಎಂದು ತಿಳಿಸಿತ್ತು. ಆದರೆ, ಜನರಿಗೆ ಔಷಧ ವಿತರಿಸಲು ಸರ್ಕಾರ ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ