ಆನಂದ​ಯ್ಯನ ಕೊರೋ​ನಾ ಔಷ​ಧಕ್ಕೆ ಮತ್ತೆ ಮುಗಿ​ಬಿದ್ದ ಜನ!

Published : Jun 08, 2021, 09:47 AM IST
ಆನಂದ​ಯ್ಯನ ಕೊರೋ​ನಾ ಔಷ​ಧಕ್ಕೆ ಮತ್ತೆ ಮುಗಿ​ಬಿದ್ದ ಜನ!

ಸಾರಾಂಶ

* ಆಂಧ್ರಪ್ರದೇಶ​ದ ನೆಲ್ಲೂರು ಜಿಲ್ಲೆಯ ಕೃಷ್ಣ​ಪ​ಟ್ಟಣಂ ಗ್ರಾಮ​ದಲ್ಲಿ ಮತ್ತೆ ನೂಕುನುಗ್ಗಲು * ಆನಂದ​ಯ್ಯನ ಕೊರೋ​ನಾ ಔಷ​ಧಕ್ಕೆ ಮತ್ತೆ ಮುಗಿ​ಬಿದ್ದ ಜನ * ನೂಕುನುಗ್ಗಲು ಉಂಟಾದ ಹಿನ್ನೆ​ಲೆ​ಯಲ್ಲಿ ಔಷಧ ವಿತ​ರ​ಣೆಗೆ ತಡೆ

ನೆಲ್ಲೂ​ರು(ಜೂ.08): ಕೊರೋ​ನಾಕ್ಕೆ ರಾಮ​ಬಾಣ ಎಂದು ಹೇಳ​ಲಾ​ಗು​ತ್ತಿ​ರುವ ಆನಂದ​ಯ್ಯ​ನ ‘ಹಳ್ಳಿ ಮದ್ದು’ ಪಡೆ​ಯ​ಲು ಆಂಧ್ರಪ್ರದೇಶ​ದ ನೆಲ್ಲೂರು ಜಿಲ್ಲೆಯ ಕೃಷ್ಣ​ಪ​ಟ್ಟಣಂ ಗ್ರಾಮ​ದಲ್ಲಿ ಮತ್ತೆ ನೂಕುನುಗ್ಗಲು ಆರಂಭವಾಗಿದೆ. ಸೋಮವಾರದಿಂದ ಔಷಧ ವಿತರಣೆಗೆ ನಿರ್ಧಾರ ಮಾಡಲಾಗಿತ್ತಾದರೂ, ಭಾನುವಾರವೇ ಭಾರೀ ಪ್ರಮಾಣದಲ್ಲಿ ಜನರು ಹಳ್ಳಿಗೆ ಆಗಮಿಸಿದ್ದರು.

ನೆರೆಯ ಜಿಲ್ಲೆಗಳಿಂದ ಭಾರೀ ಪ್ರಮಾಣದಲ್ಲಿ ಆಗಮಿಸಿದ್ದ ಜನರು ಆನಂದಯ್ಯನ ಸೋದರ ನಾಗರಾಜು ಮೂಲಕ ಔಷಧಿ ಪಡೆದುಕೊಂಡಿದ್ದಾರೆ. ಆದರೆ ಈ ವೇಳೆ ಭಾರೀ ನೂಕುನುಗ್ಗಲು ಉಂಟಾಗಿ ವಿಷಯ ಪೊಲೀಸರ ಕಿವಿಗೆ ತಲುಪಿದ್ದು, ಅವರು ಸ್ಥಳಕ್ಕೆ ಧಾವಿಸಿ ಜನರನ್ನು ಚದುರಿಸಿದ್ದಾರೆ.

ಈ ಮುನ್ನ ಮೇ 21ರಂದು ಆನಂದ​ಯ್ಯನ ಹಳ್ಳಿ ಮದ್ದು ಪಡೆ​ಯಲು ಜನರು ಕಷ್ಣ​ಪ​ಟ್ಟಣಂ ಗ್ರಾಮಕ್ಕೆ ಮುಗಿ​ಬಿ​ದ್ದಿದ್ದು, ಭಾರೀ ಸುದ್ದಿ​ಯಾ​ಗಿತ್ತು.ಆ ಬಳಿ​ಕ ಔಷ​ಧಿ​ಯನ್ನು ಪರೀ​ಕ್ಷಿ​ಸಿದ್ದ ತಜ್ಞರ ಸಮಿತಿ ಅದ​ರಿಂದ ಯಾವುದೇ ಅಡ್ಡ ಪರಿ​ಣಾಮ ಇಲ್ಲ. ಕೊರೋನಾ ರೋಗಿ​ಗಳ ಚಿಕಿ​ತ್ಸೆಗೆ ಔಷ​ಧ​ವನ್ನು ಬಳಕೆ ಮಾಡಬ​ಹುದು ಎಂದು ತಿಳಿ​ಸಿತ್ತು. ಆದರೆ, ಜನ​ರಿಗೆ ಔಷಧ ವಿತ​ರಿ​ಸಲು ಸರ್ಕಾರ ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿ​ಬಂದಿ​ದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Keralam Election Results: ಯಾರ ಪಾಲಿಗೆ ಕೇರಳಂ? ಎಡಕ್ಕೋ? ಬಲಕ್ಕೋ? ಅಥವಾ ಅತಂತ್ರವೋ?
5 State Assembly Election results 2026 Live: Keralam Election Results - ಯಾರ ಪಾಲಿಗೆ ಕೇರಳಂ? ಎಡಕ್ಕೋ? ಬಲಕ್ಕೋ? ಅಥವಾ ಅತಂತ್ರವೋ?