ಹರ್ಯಾಣ ಚುನಾವಣೆ 2024: ಕೇಂದ್ರ ಚುನಾವಣಾ ಹೇಳಿಕೆ ವಿರುದ್ಧ ಕಾಂಗ್ರೆಸ್ ಗರಂ

Published : Nov 02, 2024, 11:44 AM IST
ಹರ್ಯಾಣ ಚುನಾವಣೆ 2024: ಕೇಂದ್ರ ಚುನಾವಣಾ ಹೇಳಿಕೆ ವಿರುದ್ಧ ಕಾಂಗ್ರೆಸ್ ಗರಂ

ಸಾರಾಂಶ

ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಪಕ್ಷ ಬರೆದಿದ್ದ ಪತ್ರಕ್ಕೆ ಹರಿತ ಶಬ್ದ ಬಳಸಿ ತಿರುಗೇಟು ನೀಡಿದ್ದ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್‌ ಗರಂ ಆಗಿದೆ.

ನವದೆಹಲಿ (ನ.2): ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಪಕ್ಷ ಬರೆದಿದ್ದ ಪತ್ರಕ್ಕೆ ಹರಿತ ಶಬ್ದ ಬಳಸಿ ತಿರುಗೇಟು ನೀಡಿದ್ದ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್‌ ಗರಂ ಆಗಿದೆ. ಆಯೋಗವು ಕಾಂಗ್ರೆಸ್‌, ಅದರ ನಾಯಕರ ವಿರುದ್ಧ ದಾಳಿ ಮಾಡುತ್ತಿದೆ. ಇಂತಹ ಶಬ್ದಗಳನ್ನು ಮುಂದೆಯೂ ಬಳಸಿದರೆ ಕಾನೂನು ಕ್ರಮದ ಮೊರೆ ಹೋಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ಹರ್ಯಾಣ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಕಾಂಗ್ರೆಸ್‌ ಆಯೋಗಕ್ಕೆ ದೂರು ನೀಡಿತ್ತು. ಆದರೆ ಆರೋಪಗಳನ್ನು ನಿರಾಕರಿಸಿದ್ದ ಆಯೋಗವು, ಈ ಹಿಂದೆಯೂ ಮಾಡಿದಂತೆ ಇಡೀ ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆಯ ಬಗ್ಗೆಯೇ ಅನುಮಾನದ ಹೊಗೆಯನ್ನು ಕಾಂಗ್ರೆಸ್ ಎಬ್ಬಿಸುತ್ತಿದೆ ಎಂದು ಹೇಳಿತ್ತು.

 

ಲಡಾಖ್ ಗಡಿಯ ಡೆಮ್ಚೊಕ್ ನಲ್ಲಿ ಭಾರತೀಯ ಸೈನಿಕರ ಗಸ್ತು ಆರಂಭ

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಕಾಂಗ್ರೆಸ್ಸಿನ 9 ನಾಯಕರು ಆಯೋಗಕ್ಕೆ ಪತ್ರವೊಂದನ್ನು ಬರೆದಿದ್ದಾರೆ. ಪಕ್ಷ ಮಾಡಿರುವ ಆರೋಪವನ್ನು ಆಯೋಗ ನಿರಾಕರಿಸುತ್ತಿದೆ. ಅಲ್ಲದೆ ತನಗೇ ತಾನೇ ಕ್ಲೀನ್‌ಚಿಟ್‌ ಕೊಟ್ಟುಕೊಳ್ಳುತ್ತಿದೆ. ಪಕ್ಷ ಮಾಡಿರುವ ಆರೋಪಗಳಿಗೆ ಯಾವುದೇ ಉತ್ತರವನ್ನೂ ಆಯೋಗ ನೀಡಿಲ್ಲ. ಆಯೋಗವು ಒಂದು ವೇಳೆ ನಮ್ಮ ಮನವಿ ಸ್ವೀಕರಿಸಲು ನಿರಾಕರಿಸಿದರೆ, ನಮ್ಮ ದೂರುಗಳಿಗೆ ಸ್ಪಂದಿಸದೇ ಇದ್ದರೆ ಕೋರ್ಟ್‌ಗೆ ಹೋಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಜೈರಾಂ ರಮೇಶ್‌, ಕೆ.ಸಿ. ವೇಣುಗೋಪಾಲ್‌, ಅಶೋಕ್‌ ಗೆಹಲೋತ್‌, ಭೂಪಿಂದರ್‌ ಹೂಡಾ ಮತ್ತಿತರರು ಈ ಪತ್ರಕ್ಕೆ ಸಹಿ ಮಾಡಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದುವೆ ನಂತರ ಕಾರಿನ ಸ್ಟೇರಿಂಗ್ ಹಿಡಿದ ವಧು; ದೇವ್ರೇ ಕಾಪಾಡಪ್ಪಾ ಎಂದು ಕೈಮುಗಿದು ಕುಳಿತುಕೊಂಡ ವರ!
ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?