ನಗು ಆರೋಗ್ಯಕ್ಕೆ ಉತ್ತಮ, ಆದರೆ ಕಾರ್ಯಕ್ರಮದಲ್ಲಿ ಕಿಸಕ್ಕನೆ ನಕ್ಕ ಅಧಿಕಾರಿಗೆ ಸರ್ಕಾರದ ನೋಟಿಸ್!

Published : Nov 17, 2024, 09:56 PM IST
ನಗು ಆರೋಗ್ಯಕ್ಕೆ ಉತ್ತಮ, ಆದರೆ ಕಾರ್ಯಕ್ರಮದಲ್ಲಿ ಕಿಸಕ್ಕನೆ ನಕ್ಕ ಅಧಿಕಾರಿಗೆ ಸರ್ಕಾರದ ನೋಟಿಸ್!

ಸಾರಾಂಶ

ಅದು ಸಾರ್ವಜನಿಕ ಕಾರ್ಯಕ್ರಮ, ಹಿರಿಯ ಅಧಿಕಾರಿಗಳು ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.ಇದರ ನಡುವೆ ಕಿರಿಯ ಅಧಿಕಾರಿಯೊಬ್ಬರು ಕಿಸಕ್ಕನೆ ನಕ್ಕಿದ್ದಾರೆ. ಇಷ್ಟೇ ನೋಡಿ,  ಜಿಲ್ಲಾಧಿಕಾರಿಗಳು ಅಧಿಕಾರಿಗೆ ನೋಟಿಸ್ ನೀಡಿದ ಘಟನೆ ನಡೆದಿದೆ.  

ಭೋಪಾಲ್(ನ.17) ಆರೋಗ್ಯವಾಗಿರಬೇಕಾದರೆ ಮನಸ್ಸು ತುಂಬಿ, ಹೃದಯ ತುಂಬಿ ನಗಬೇಕು ಎಂದು ವೈದ್ಯರು ಹೇಳುತ್ತಾರೆ. ಒತ್ತಡದ ಬದುಕು, ಯಾಂತ್ರೀಕ ಬದುಕಿನಲ್ಲಿ ಮನುಷ್ಯರು ನಗುವುದನ್ನೇ ಮರೆಯುತ್ತಿದ್ದಾರೆ. ಹೀಗಾಗಿ ಬೆಳಗ್ಗೆ ಹಾಗೂ ಸಂಜೆ ನಗರ ಪ್ರದೇಶಗಳ ಹಲೆವೆಡೆ ಲಾಫಿಂಗ್ ಕ್ಲಬ್‌ಗಳು ಕಾರ್ಯನಿರ್ವಹಿಸುತ್ತಿದೆ.  ಆದರೆ ಇಲ್ಲೊಬ್ಬ ಸರ್ಕಾರಿ ಅಧಿಕಾರಿ ನಕ್ಕ ಕಾರಣಕ್ಕೆ ನೋಟಿಸ್ ಪಡೆದಿದ್ದಾರೆ.  ಸಾರ್ವಜನಿಕ ಕಾರ್ಯಕ್ರಮದಲ್ಲಿ ಯಾವುದೋ ಆಲೋಚನೆಯಲ್ಲಿ ನಕ್ಕಿದ್ದಾರೆ. ಒಂದೇ ಸಮನೆ ನಕ್ಕ ಅಧಿಕಾರಿಗೆ ಇದೀಗ ಸಂಕಷ್ಟ ಶುರುವಾಗಿದೆ. ಜಿಲ್ಲಾಧಿಕಾರಿಗಳ ಕಚೇರಿಯಿಂದ ನೋಟಿಸ್ ಬಂದಿದೆ. ಹಿರಿಯ ಅಧಿಕಾರಿಗಳು ಒಂದು ಸುತ್ತಿನ ವಾರ್ನಿಂಗ್ ನೀಡಿದ ಘಟನೆ ಮಧ್ಯ ಪ್ರದೇಶದ ಚತ್ತಾರ್‌ಪುರದಲ್ಲಿ ನಡೆದಿದೆ.

ಜಿಲ್ಲಾಧಿಕಾರಿಗಳ ಕಚೇರಿಯ ಇ ಗವರ್ನೆನ್ಸ್ ಅಸಿಸ್ಟೆಂಟ್ ಮ್ಯಾನೇಜರ್ ಕೆಕೆ ತಿವಾರಿ ನಕ್ಕ ಕಾರಣಕ್ಕೆ ನೋಟಿಸ್ ಪಡೆದಿದ್ದಾರೆ. ಸರ್ಕಾರದ ಸೂಚನೆಯಂತೆ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಹಾಗೂ ಅದಕ್ಕೆ ಪರಿಹಾರ ಸೂಚಿಸುವ ಕಾರ್ಯಕ್ರಮ ಮಧ್ಯಪ್ರದೇಶದಲ್ಲಿ ನಡೆಯುತ್ತಿದೆ. ಹೀಗೆ ಚತ್ತಾರ್‌ಪುರ್ ಜಿಲ್ಲೆಯಲ್ಲಿ ಅಕ್ಟೋಬರ್ 30 ರಂದು ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮ ಆಯೋಜಿಸಲಾಗಿತ್ತು. 

ಮದುವೆ ಮುಗಿಯುವವರೆಗೂ ಮದುಮಕ್ಕಳು ನಗುವಂತಿಲ್ಲ! ಅಪ್ಪಿ ತಪ್ಪಿ ನಕ್ಕರೆ ಸ್ಥಳದಲ್ಲೇ ಡಿವೋರ್ಸ್​

ಈ ಕಾರ್ಯಕ್ರಮಕ್ಕೆ, ಉಪ ಜಿಲ್ಲಾಧಿಕಾರಿ ಸೇರಿದಂತೆ ಹಲವು ಸರ್ಕಾರಿ ಅಧಿಕಾರಿಗಳು ಭಾಗವಹಿಸಿದ್ದರು. ಸಾರ್ವಜನಿಕರು ತಮ್ಮ ಅಹವಾಲು, ಕುಂದು ಕೊರತೆ, ಸಮಸ್ಯೆಗಳ ಪಟ್ಟಿ ಹಿಡಿದು ಆಗಮಿಸಿದ್ದರು. ಇ ಗವರ್ನೆನ್ಸ್ ಅಧಿಕಾರಿಗಳಿಗೆ ಇಲ್ಲಿ ಹೆಚ್ಚಿನ ಕೆಲಸ. ಅಹವಾಲುಗಳನ್ನು ವೆಬ್‌ಸೈಟ್‌ನಲ್ಲಿ ದಾಖಲಿಸಿಕೊಳ್ಳುವುದು ಸೇರಿದಂತೆ ಹಲವು ಕೆಲಸಗಳನ್ನು ಸ್ಥಳದಲ್ಲೇ ಮಾಡಬೇಕು.  ಹೀಗೆ ಸಾರ್ವಜನಿಕರು ಅಹವಾಲು ಸ್ವೀಕರಿಸುತ್ತಿರುವ ವೇಳೆ ಅಧಿಕಾರಿ ಕೆಕೆ ತಿವಾರಿ ಕಿಸಕ್ಕನೆ ನಕ್ಕಿದ್ದಾರೆ. ಇವರ ನಗು ಸ್ವಲ್ಪ ಜೋರಾಗಿದೆ. ಎಲ್ಲರೂ ಇವರನ್ನೇ ನೋಡುವಷ್ಟರ ಮಟ್ಟಿಗೆ ನಕ್ಕಿದ್ದಾರೆ.

ಇದು ಉಪ ಜಿಲ್ಲಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಸಾರ್ವಜನಿಕ ಕಾರ್ಯಕ್ರಮದಲ್ಲಿ ಅಧಿಕಾರಿ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ, ಕರ್ತವ್ಯದಲ್ಲಿ ಲೋಪ ಎಸಗಿದ್ದಾರೆ, ಇತರರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಸೇರಿದಂತೆ ಹಲವು ಆರೋಪಗಳನ್ನು ಕೆಕೆ ತಿವಾರಿ ಮೇಲೆ ಹೊರಿಸಿ  ಜಿಲ್ಲಾಧಿಕಾರಿಗಳು ನೋಟಿಸ್ ನೀಡಿದ್ದಾರೆ. 

ಇತ್ತ ಉಪ ಜಿಲ್ಲಾಧಿಕಾರಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.ನೋಟಿಸ್ ಹೇಗೆ ಹೋಗಿದೆ ಅನ್ನೋದು ಗೊತ್ತಿಲ್ಲ. ಈ ಕುರಿತು ವರದಿ ಕೇಳಿದ್ದೇನೆ ಎಂದು ಮಿಲಿಂದ್ ನಾಗದೇವ್ ಹೇಳಿದ್ದಾರೆ. ಇತ್ತ ಕೆಕೆ ತಿವಾರಿ ಕೂಡ ಘಟನೆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಶೋಕಾಸ್ ನೋಟಿಸ್‌ಗೆ ಈಗಾಗಲೇ ಉತ್ತರಿಸಿದ್ದೇನೆ ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್