ಒಂದೇ ಕರೆ, ದೇಶದ ಯಾವುದೇ ಮೂಲೆಯಲ್ಲಿದ್ದರೂ ಹಿರಿಯ ನಾಗರಿಕರಿಗೆ ಸಿಗಲಿದೆ ಸಹಾಯ!

Published : Sep 28, 2021, 05:21 PM IST
ಒಂದೇ ಕರೆ, ದೇಶದ ಯಾವುದೇ ಮೂಲೆಯಲ್ಲಿದ್ದರೂ ಹಿರಿಯ ನಾಗರಿಕರಿಗೆ ಸಿಗಲಿದೆ ಸಹಾಯ!

ಸಾರಾಂಶ

* ಹಿರಿಯ ನಾಗರಿಕರಿಗೆ ಸರ್ಕಾರದಿಂದ ಹೊಸ ಸೌಲಭ್ಯ * ಹಿರಿಯ ನಾಗರಿಕರ ಸಮಸ್ಯೆಗಳನ್ನು ಪರಿಹರಿಸಲು ಹೊಸ ಮಾರ್ಗ * ದೇಶದ ಯಾವುದೇ ಮೂಲೆಯಲ್ಲಿದ್ದರೂ ಹಿರಿಯ ನಾಗರಿಕರಿಗೆ ಸಿಗಲಿದೆ ಸಹಾಯ

ನವದೆಹಲಿ(ಸೆ.28):ಹಿರಿಯ ನಾಗರಿಕರಿಗೆ(senior citizens) ಸಹಾಯ ಮಾಡಲು ಸಹಾಯವಾಣಿ ಆರಂಭಿಸಲಾಗಿದೆ. ಅಖಿಲ ಭಾರತ ಮಟ್ಟದ ಈ ಟೋಲ್ ಫ್ರೀ ಸಹಾಯವಾಣಿಯ(Helpline) ಮೂಲಕ ಹಿರಿಯ ನಾಗರಿಕರ ಸಮಸ್ಯೆಗಳನ್ನು ಪರಿಹರಿಸಲಾಗುತ್ತಿದೆ. 'ಎಲ್ಡರ್ ಲೈನ್'(Elder Line) ನಿಂದ ಹಿಡಿದು ಪಿಂಚಣಿ ಸಮಸ್ಯೆಗಳು, ಹಿರಿಯರ ಕಾನೂನು ಸಮಸ್ಯೆಗಳ ಕುರಿತು ಉಚಿತ ಮಾಹಿತಿ ಮತ್ತು ಮಾರ್ಗದರ್ಶನ ನೀಡಲಾಗುತ್ತಿದೆ. ಇದು ಅವರಿಗೆ ಯಾರಾದರೂ ದುರ್ವ್ಯವಹಾರ ನಡೆಸಿದಾಗ ಅಥವಾ ಮೋಸ ಮಾಡಿದಾಗ ಭಾವನಾತ್ಮಕವಾಗಿ ಸಹಾಯ ಮಾಡುತ್ತದೆ.

ಸಹಾಯಕ್ಕಾಗಿ ಈ ಸಹಾಯವಾಣಿಗೆ ಸಂಪರ್ಕಿಸಿ

ಹಿರಿಯ ನಾಗರಿಕರಿಗಾಗಿ ಆರಂಭಿಸಿರುವ ಈ ಸಹಾಯವಾಣಿಗೆ, ದೇಶದ ಯಾವುದೇ ಮೂಲೆಯಿಂದ ಕರೆ ಮಾಡಿಯೂ ಸಹಾಯ ಪಡೆಯಬಹುದು. ಅಖಿಲ ಭಾರತ ಟೋಲ್-ಫ್ರೀ ಸಹಾಯವಾಣಿ -14567 ಗೆ ಕರೆ ಮಾಡುವ ಮೂಲಕ ಹಿರಿಯರು ತಮ್ಮ ಯಾವುದೇ ಸಮಸ್ಯೆಗಳಿಗೆ ಪರಿಹಾರವನ್ನು ಕೇಳಬಹುದು.

2050 ರ ವೇಳೆಗೆ, ದೇಶದ ಜನಸಂಖ್ಯೆಯ ಶೇ. 20 ಜನರು ಹಿರಿಯ ನಾಗರಿಕರಾಗಿರುತ್ತಾರೆ

ಒಂದು ವರದಿಯ ಪ್ರಕಾರ, ಮುಂದಿನ 2050 ರ ವೇಳೆಗೆ, ದೇಶದ ಹಿರಿಯ ನಾಗರಿಕರ ಜನಸಂಖ್ಯೆಯು ಸುಮಾರು ಶೇ. 20 ರಷ್ಟು ಇರುತ್ತದೆ. ಅಂದರೆ, ಈ ಜನಸಂಖ್ಯೆಯು 300 ಮಿಲಿಯನ್ ಗಿಂತ ಹೆಚ್ಚು ಇರುವ ಸಾಧ್ಯತೆಯಿದೆ. ದೇಶದ ಹಿರಿಯ ನಾಗರಿಕರ ಈ ಜನಸಂಖ್ಯೆಯು ಅನೇಕ ದೇಶಗಳ ಜನಸಂಖ್ಯೆಗಿಂತ ಹೆಚ್ಚಾಗಿದೆ. ಈ ವಯಸ್ಸಿನ ಜನರು ವಿವಿಧ ಮಾನಸಿಕ, ಭಾವನಾತ್ಮಕ, ಆರ್ಥಿಕ, ಕಾನೂನು ಮತ್ತು ದೈಹಿಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಕೊರೋನಾ ಸೋಂಕು ಈ ಸಮಸ್ಯೆಗಳನ್ನು ಇನ್ನಷ್ಟು ಹೆಚ್ಚಿಸಿದೆ.

ಟಾಟಾ ಟ್ರಸ್ಟ್‌ ಕ್ರಮದ ಫಲವಾಗಿ ಎಲ್ಡರ್ ಲೈನ್

ಎಲ್ಡರ್ ಲೈನ್ ಟಾಟಾ ಟ್ರಸ್ಟ್ ಇಟ್ಟ ಹೆಜ್ಜೆಯ ಫಲಿತಾಂಶವಾಗಿದೆ. ಟಾಟಾ ಟ್ರಸ್ಟ್‌ 2017 ರಲ್ಲಿ ವಯಸ್ಸಾದವರಿಗಾಗಿ ಈ ಸಹಾಯವಾಣಿಯನ್ನು ತೆಲಂಗಾಣ ಸರ್ಕಾರದ ಸಹಯೋಗದೊಂದಿಗೆ ಹೈದರಾಬಾದ್‌ನ ವಿಜಯ ವಾಹಿನಿ ಚಾರಿಟಬಲ್ ಫೌಂಡೇಶನ್ ಮೂಲಕ ಆರಂಭಿಸಿತು. ಅಲ್ಲಿಂದ ಈವರೆಗೆ 17 ರಾಜ್ಯಗಳು ತಮ್ಮದೇ ಆದ ಎಲ್ಡರ್ ಲೈನ್ ಅನ್ನು ತೆರೆದಿದ್ದು, ಇದನ್ನು ಟಾಟಾ ಟ್ರಸ್ಟ್‌ಗಳ ಸಹಯೋಗದೊಂದಿಗೆ ನಿರ್ವಹಿಸಲಾಗುತ್ತಿದೆ.

ನಾಲ್ಕು ತಿಂಗಳಲ್ಲಿ ಎರಡು ಲಕ್ಷ ಕರೆಗಳು

ಹಿರಿಯ ಸಹಾಯವಾಣಿಗೆ ಕಳೆದ 4 ತಿಂಗಳಲ್ಲಿ 2 ಲಕ್ಷ ಕರೆಗಳು ಬಂದಿವೆ. 30,000 ಕ್ಕೂ ಹೆಚ್ಚು ಹಿರಿಯ ನಾಗರಿಕರಿಗೆ ಸಹಾಯ ಮಾಡಲಾಗಿದೆ. ಇವುಗಳಲ್ಲಿ, ಸುಮಾರು ಶೇ. 40ರಷ್ಟು ಕರೆಗಳು ಲಸಿಕೆ ಮತ್ತು ಅದಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಅಗತ್ಯ ಮಾರ್ಗದರ್ಶನ ಪಡೆಯಲು ಮತ್ತು ಸುಮಾರು ಶೇ 23 ರಷ್ಟು ಕರೆಗಳು ಪಿಂಚಣಿಗೆ ಸಂಬಂಧಿಸಿವೆ. ಇನ್ನೊಂದು ಪ್ರಕರಣದಲ್ಲಿ ಪಿಂಚಣಿ ಸಿಗದೆ ಈ ಸಹಾಯವಾಣಿಗೆ ಕರೆ ಮಾಡಿದ್ದರು ಹಾಗೂ ಎಲ್ಡರ್ ಲೈನ್ ತಂಡದಿಂದ ಸಹಾಯ ಕೋರಿದ್ದರು. ತಂಡವು ಸಂಬಂಧಪಟ್ಟ ಪಿಂಚಣಿ ಅಧಿಕಾರಿಯನ್ನು ಸಂಪರ್ಕಿಸಿತು. ಹಿರಿಯ ನಾಗರಿಕರ ಪಿಂಚಣಿಯನ್ನು ತಕ್ಷಣವೇ ಅವರ ಖಾತೆಗೆ ವರ್ಗಾಯಿಸಲಾಯಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಅಮೆರಿಕ ತೆರಿಗೆ ದಾಳಿಗೆ ಒಳಗಾದ ದೇಶಗಳಿಂದ ಮಾದರಿಯಾದ ಚೀನಾ; ಟ್ರಂಪ್‌ಗೆ ಶಾಕ್ ನೀಡಿ ದಾಖಲೆ ಬರೆದ ಡ್ರ್ಯಾಗನ್
ವಂದೇ ಮಾತರಂ ಚರ್ಚೆ ವೇಳೆ ಶಾ ವರ್ಸಸ್‌ ಖರ್ಗೆ