ರೈತರಿಗೆ ನೆರವಾಗಲು ಕೇಂದ್ರದ ಮಹತ್ವದ ನಿರ್ಧಾರ!

Published : Sep 09, 2021, 05:39 PM ISTUpdated : Sep 10, 2021, 04:29 PM IST
ರೈತರಿಗೆ ನೆರವಾಗಲು ಕೇಂದ್ರದ ಮಹತ್ವದ ನಿರ್ಧಾರ!

ಸಾರಾಂಶ

* ಕೇಂದ್ರ ಸಂಪು​ಟದ ಮಹ​ತ್ವದ ನಿರ್ಧಾ​ರ * ಗೋಧಿ, ಸಾಸಿವೆ ಸೇರಿ 5 ಬೆಳೆ ಬೆಂಬಲ ದರ ಏರಿಕೆ

 

ನವದೆಹಲಿ: ನೂತನ ಕೃಷಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆಯೇ, ಕೇಂದ್ರ ಸಚಿವ ಸಂಪು​ಟ, ಗೋಧಿ, ಸಾಸಿವೆ ಕಾಳು, ಸೂರ್ಯಕಾಂತಿ, ಬಾರ್ಲಿ, ಕಡಲೆ ಕಾಳುಗಳ ಕನಿಷ್ಠ ಬೆಂಬಲ ಬೆಲೆಯನ್ನು ಬುಧವಾರ ಏರಿಕೆ ಮಾಡುವ ನಿರ್ಧಾರ ಕೈಗೊಂಡಿ​ದೆ.

ಪ್ರತಿ ಕ್ಷಿಂಟಲ್‌ ಗೋಧಿಯ ಬೆಂಬಲ ದರವನ್ನು 40 ರು. ಏರಿಕೆ ಮಾಡಲಾಗಿದ್ದು, 1,975 ರು. ಇದ್ದ ಬೆಂಬಲ ದರ 2,015 ರು.ಗೆ ಏರಿಕೆ ಆಗಿದೆ. ಅದೇ ರೀತಿ ಸಾಸಿವೆ ಕಾಳಿನ ಬೆಂಬಲ ದರವನ್ನು ಪ್ರತಿ ಕ್ವಿಂಟಲ್‌ಗೆ 400 ರು. ಏರಿಕೆ ಮಾಡಲಾಗಿದ್ದು, 4,650 ರು. ನಿಂದ 5,050 ರು.ಗೆ ಹೆಚ್ಚಳಗೊಂಡಿದೆ.

ಬಾರ್ಲಿಯ ಬೆಂಬಲ ಖರೀದಿ ದರವನ್ನು ಪ್ರತಿ ಕ್ವಿಂಟಲ್‌ಗೆ 35 ರು. ಏರಿಕೆ ಮಾಡಲಾಗಿದ್ದು, 1,600 ರು.ನಿಂದ 1,635 ರು.ಗೆ ಹೆಚ್ಚಳಗೊಂಡಿದೆ. ಕಡಲೆ ಕಾಳಿನ ಬೆಂಬಲ ದರ ಪ್ರತಿ ಕ್ವಿಂಟಲ್‌ಗೆ 130 ರು. ಏರಿಕೆ ಮಾಡಲಾಗಿದ್ದು, 5,100 ರು. ನಿಂದ 5,230 ರು.ಗೆ ಏರಿಕೆ ಆಗಿದೆ. ಸೂರ್ಯಕಾಂತಿ ಬೀಜದ ಬೆಂಬಲ ದರ 114 ರು. ಹೆಚ್ಚಳವಾಗಿದ್ದು, 5,327 ರು. ಬದಲು 5,441 ರು.ನಲ್ಲಿ ಖರೀದಿಸಲಾಗುತ್ತದೆ ಎಂದು ಸರ್ಕಾರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಮಿತಿಯ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ರೈತರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಪ್ರತಿ ವರ್ಷ ಬೆಂಬಲ ದರಗಳನ್ನು ಪರಿಷ್ಕರಿಸುತ್ತಿದೆ. ಪ್ರಸ್ತುತ ಸರ್ಕಾರ ಮುಂಗಾರು ಮತ್ತು ಹಿಂಗಾರಿನಲ್ಲಿ ಬೆಳೆಯುವ 23 ಬೆಳೆಗಳಿಗೆ ಬೆಂಬಲ ದರವನ್ನು ನಿಗದಿ ಮಾಡಿದೆ.

ಎಷ್ಟುಏರಿ​ಕೆ? (ಕ್ವಿಂಟ​ಲ್‌​ಗೆ​)

ಬೆಳೆ| ​ಪ​ರಿ​ಷ್ಕೃತ ದರ ​|ಏ​ರಿಕೆ ಪ್ರಮಾ​ಣ

ಗೋಧಿ 2,015 ರು. (40 ರು.)

ಸಾಸಿವೆ ಕಾಳು 5,050 ರು. (400 ರು.)

ಸೂರ್ಯಕಾಂತಿ 5,441 ರು. (114 ರು.)

ಬಾರ್ಲಿ 1,635 ರು. (35 ರು.)

ಕಡಲೆ ಕಾಳು 5,230 ರು. (130 ರು.)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
Viral Video: ಮಾಜಿ ಸಿಜೆಐ ಬಿಆರ್‌ ಗವಾಯಿಗೆ ಶೂ ಎಸೆದಿದ್ದ ವಕೀಲ ರಾಕೇಶ್‌ ಕಿಶೋರ್‌ಗೆ ಕೋರ್ಟ್‌ನಲ್ಲೇ ಚಪ್ಪಲಿಯಿಂದ ಹಲ್ಲೆ!