
ನವದೆಹಲಿ(ಏ.07): ‘ಕೊರೋನಾ ವೈರಸ್ನಿಂದ ಲಾಕ್ಡೌನ್ ಘೋಷಣೆಯಾಗಿರುವ ಕಾರಣ ತೊಂದರೆಗೆ ಒಳಗಾದವರಿಗೆ ‘ನಿಮ್ಮ ಜತೆಗೆ ನಾವಿದ್ದೇವೆ’ ಎಂಬ ಸಂದೇಶವನ್ನು ರವಾನಿಸಬೇಕು. ಪ್ರತಿ ಬಿಜೆಪಿ ಕಾರ್ಯಕರ್ತರು ಪಕ್ಷದ ಸಂಸ್ಥಾಪನಾ ದಿನವಾದ ಸೋಮವಾರ ಒಂದು ಹೊತ್ತಿನ ಊಟ ಬಿಟ್ಟು ಈ ಸಂದೇಶವನ್ನು ನೀಡಬೇಕು’ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಕರೆ ನೀಡಿದ್ದಾರೆ.
"
ಈ ನಡುವೆ, ನಡ್ಡಾ ನೀಡಿದ ಕರೆಗಳನ್ನು ಪಾಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರೂ ಟ್ವೀಟರ್ನಲ್ಲಿ ಕೋರಿದ್ದಾರೆ.
ಬಿಜೆಪಿ ಕಾರ್ಯಕರ್ತರಿಗೆ 5 ಟಾಸ್ಕ್ ನೀಡಿದ ಮೋದಿ!
ನಡ್ಡಾ ಕರೆಗಳು:
ಅಗತ್ಯ ಇದ್ದವರಿಗೆ ಬಿಜೆಪಿ ಕಾರ್ಯಕರ್ತರು ಆಹಾರ ಪೊಟ್ಟಣ ವಿತರಿಸಬೇಕು.
ತುರ್ತು ಸಂದರ್ಭದಲ್ಲಿ ಕೆಲಸ ಮಾಡುತ್ತಿರುವರಿಗೆ ಪ್ರೇರಣೆ ನೀಡಲು ಜನರಿಂದ ಸಹಿ ಸಂಗ್ರಹ ಮಾಡಬೇಕು.
ಸಾಮಾಜಿಕ ಅಂತರ ಕಾಯ್ದುಕೊಂಡು ಕಾರ್ಯನಿರ್ವಹಿಸಬೇಕು.
ಸೋಮವಾರದ ಪಕ್ಷದ ಸಂಸ್ಥಾಪನಾ ದಿನ ಬಿಜೆಪಿ ಕಾರ್ಯಕರ್ತರು ಒಪ್ಪತ್ತು ಊಟ ಬಿಡಬೇಕು.
ಲಾಕ್ಡೌನ್ನಿಂದ ಹಸಿದವರಿಗೆ ಈ ಮೂಲಕ ಸಾಂತ್ವನ ಹೇಳಬೇಕು.
ಎಲ್ಲ ಬಿಜೆಪಿ ಕಾರ್ಯರ್ಕರು ಪ್ರತಿಯೊಬ್ಬರಿಗೆ ಮನೆಯಲ್ಲೇ ತಯಾರಿಸಿದ 2 ಮಾಸ್ಕ್ ವಿತರಿಸಬೇಕು.
ಮಾಸ್ಕ್ ಸಿದ್ಧಪಡಿಸುವಿಕೆ ಹಾಗೂ ಹಂಚಿಕೆಯ ವಿಡಿಯೋ ಬಿಡುಗಡೆ ಮಾಡಬೇಕು. ಪಿಎಂ ಕೇರ್ಸ್ ನಿಧಿಗೆ ಇತರರು 100 ರು. ದೇಣಿಗೆ ನೀಡುವಂತೆ ಪ್ರೇರೇಪಿಸಬೇಕು ಎಂದು ನಡ್ಡಾ ಕೇಳಿಕೊಂಡಿದ್ದಾರೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ