ಹೈದರಾಬಾದ್‌ನಲ್ಲಿ ಫ್ಲೈಓವರ್‌ ಕೆಳಗೆ ಬಾಕಿಯಾದ ಗಣೇಶ: ಮುಂಬೈನಲ್ಲಿ ಲಾಲ್‌ಬಾಗ್ಚ ರಾಜನ ಅನಾವರಣ

Published : Aug 25, 2025, 02:42 PM IST
Ganesh Idol Gets Stuck Under Flyover in Hyderabad

ಸಾರಾಂಶ

ಗಣೇಶನ ಹಬ್ಬಕ್ಕೆ ಕ್ಷಣಗಣೆ ಆರಂಭವಾಗಿದೆ. ಹೈದರಾಬಾದ್‌ನಲ್ಲಿ ಗಣೇಶನ ಮೂರ್ತಿಯನ್ನು ಲಾರಿಯಲ್ಲಿ ಸಾಗಿಸುವಾಗ ಫ್ಲೈಒವರ್‌ಗೆ ಸಿಲುಕಿದ ಘಟನೆ ನಡೆದಿದೆ. ಈ ಘಟನೆಯಿಂದಾಗಿ ಟ್ರಾಫಿಕ್ ಜಾಮ್ ಉಂಟಾಯಿತು. ಮುಂಬೈನಲ್ಲಿ ಲಾಲ್‌ಬಾಗ್ಚ ರಾಜ ಮತ್ತು ಧಾರಾವಿಯ ವಿಶಿಷ್ಟ ಗಣೇಶ ಮೂರ್ತಿಯ ಅನಾವರಣ ಆಗಿದೆ.

ಗಣೇಶ ಹಬ್ಬಕ್ಕೆ ಕೇವಲ ಇನ್ನೇನೂ ಎರಡು ದಿನವೂ ಇಲ್ಲ. ಹೀಗಿರುವಾಗ ಎಲ್ಲೆಡೆ ಗಣೇಶನನ್ನು ತಂದು ಕೂರಿಸುವುದಕ್ಕೆ ಸಿದ್ಧತೆ ಭರದಿಂದ ಸಾಗಿದೆ. ಜನ ಗಣೇಶನ ಪ್ರತಿಮೆ ಮಾಡುವ ಪ್ರದೇಶಕ್ಕೆ ತೆರಳಿ ತಮ್ಮ ಇಷ್ಟದ ಗಣೇಶನನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ದೇಶದ ಪ್ರಮುಖ ನಗರಗಳಲ್ಲಿ ಅದರಲ್ಲೂ ಮುಂಬೈ ಹಾಗೂ ಹೈದರಾಬಾದ್‌ನಲ್ಲಿ ಗಣೇಶ ಹಬ್ಬದ ಸಂಭ್ರಮವೇ ಬೇರೆ ಪ್ರತಿ ಗಲ್ಲಿಗಳಲ್ಲೂ ಇಲ್ಲಿ ಗಣೇಶನನ್ನು ಕುರಿಸುತ್ತಾರೆ. ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಈ ಸಂಭ್ರಮದಲ್ಲಿ ಭಾಗಿಯಾಗುತ್ತಾರೆ. ಬೆಂಗಳೂರಿನ ಗಣೇಶನ ಹಬ್ಬನ ಕೂರಿಸುವ ಉತ್ಸವ ಕಡಿಮೆಯೇನಲ್ಲ. ಇಲ್ಲಿಯೂ ಈಗಾಗಲೇ ಪುಟ್ಟ ಮಕ್ಕಳು ಗಲ್ಲಿ ಗಲ್ಲಿಗಳಲ್ಲಿ ಗಣೇಶ ಕೂರಿಸುವುದಕ್ಕೆ ಹಣ ಸಂಗ್ರಹಿಸುವುದನ್ನು ನೋಡಬಹುದು. ಹೀಗಿರುವಾಗ ಇಲ್ಲೊಂದು ಕಡೆ ಗಣೇಶನನ್ನು ಲಾರಿಯಲ್ಲಿ ಹತ್ತಿಸಿ ಕರೆದೊಯ್ಯುತ್ತಿದ್ದ ವೇಳೆ ಗಣೇಶನ ಮೂರ್ತಿಯ ಎತ್ತರದಿಂದಾಗಿ ಫ್ಲೈಒವರ್‌ ಕೆಳಗೆಯೇ ಗಣೇಶನ ಪ್ರತಿಮೆ ಸಿಲುಕಿಕೊಂಡು ಹೊರಬಾರಲಾಗದೇ ಸಂಕಷ್ಟಕ್ಕೀಡಾದಂತಹ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಈ ಘಟನೆಯಿಂದ ಅಲ್ಲಿ ಭಾರಿ ಟ್ರಾಫಿಕ್ ಜಾಮ್‌ಗೆ ಕಾರಣವಾಯ್ತು. ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೈದರಾಬಾದ್‌ನ ಪಂಜಗುಟ್ಟ ಫ್ಲೈಒವರ್ ಕೆಳಗೆ ಈ ಘಟನೆ ನಡೆದಿದೆ.

ಗಣೇಶನನ್ನು ಹೊತ್ತೊಯ್ಯುತ್ತಿದ್ದ ಲಾರಿ ಪಂಜಗುಟ್ಟ ಇಂಟರ್‌ಸೆಕ್ಷನ್ ಬಳಿಯ ಫ್ಲೈಒವರ್‌ನಲ್ಲಿ ಸಿಲುಕಿಕೊಂಡಿದೆ. ಗಣೇಶನನ್ನು ಸಾಗಿಸುತ್ತಿದ್ದ ಈ ಲಾರಿ ಖೈರತಾಬಾದ್‌ನಿಂದ ಅಮೀರ್‌ಪೇಟ್‌ನತ್ತ ಸಾಗುತ್ತಿದ್ದಾಗ ಫ್ಲೈಒವರ್ ಕೆಳಗೆ ಸಿಲುಕಿದೆ. ಗಣೇಶನ ಪ್ರತಿಮೆಯ ಎತ್ತರದಿಂದಾಗಿ ಗಣೇಶ ಫ್ಲೈಒವರ್ ದಾಟಿ ಹೋಗುವುದಕ್ಕೆ ಸಾಧ್ಯವಿರಲಿಲ್ಲ. ಹೀಗಾಗಿ ಲಾರಿ ರಸ್ತೆ ಮಧ್ಯೆ ಸಿಲುಕಿದ್ದರಿಂದ ಭಾರಿ ಟ್ರಾಫಿಕ್ ಜಾಮ್‌ಗೆ ಕಾರಣವಾಯ್ತು. ನಂತರ ನಿಧಾನವಾಗಿ ಲಾರಿಯನ್ನು ಅಲ್ಲಿಂದ ಬಿಡಿಸಿ ಬಂಜಾರ ಹಿಲ್ಸ್‌ನತ್ತ ಕಳುಹಿಸಲಾಯ್ತು.

 

 

ಮುಂಬೈನಲ್ಲಿ ಲಾಲ್‌ಬಾಗ್ಚ ರಾಜನ ಅನಾವರಣ:

ಇತ್ತ ಮುಂಬೈನಲ್ಲಿ ಪ್ರಸಿದ್ಧವಾಗಿರುವ ಲಾಲ್‌ಬೌಚ ರಾಜ ಗಣೇಶನ ಈ ಬಾರಿಯ ಪ್ರತಿಮೆಯನ್ನು ಅನಾವರಣ ಮಾಡಲಾಗಿದೆ. ಮುಂಬೈನ ಲಾಲ್‌ಬೌಚ ಅಥವಾ ಲಾಲ್‌ಬಾಗ್ಚ ರಾಜ ಎಂದು ಕರೆಯಲ್ಪಡುವ ಈ ಅಪ್ರತಿಮ ಗಣೇಶ ವಿಗ್ರಹವು ಪ್ರತಿವರ್ಷವೂ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತಲೇ ಇದೆ. ನಿನ್ನೆ ಈ ಲಾಲ್‌ಬಾಗ್ಚ ರಾಜ ಗಣೇಶನ ವಿಗ್ರಹವನ್ನು ಅನಾವರಣಗೊಳಿಸಲಾಗಿದ್ದು, ಇಂದಿನಿಂದ ಸೆಪ್ಟೆಂಬರ್ 2ರವರೆಗೆ 10 ದಿನಗಳ ಕಾಲ ಇಲ್ಲಿ ಗಣೇಶ ಸಾರ್ವಜನಿಕರಿಗೆ ದರ್ಶನ ನೀಡಲಿದ್ದಾನೆ. ಪೂಜ್ಯ ಲಾಲ್‌ಬೌಚ ರಾಜ ವಿಗ್ರಹವನ್ನು ಎಂಟು ದಶಕಗಳಿಗೂ ಹೆಚ್ಚು ಕಾಲದಿಂದ ಕಾಂಬ್ಳಿ ಕುಟುಂಬವು ನಿರ್ವಹಿಸುತ್ತಿದೆ. 1934 ರಲ್ಲಿ ಪುಟ್ಲಬಾಯಿ ಚಾಲ್‌ನಲ್ಲಿ ಲಾಲ್‌ಬೌಚ ರಾಜ ಸಾರ್ವಜನಿಕ ಗಣೇಶೋತ್ಸವ ಮಂಡಳಿಯಿಂದ ಸ್ಥಾಪಿಸಲ್ಪಟ್ಟ ಈ ಗಣೇಶ ಪೆಂಡಲ್ ಭಾರತದ ಅತ್ಯಂತ ಪ್ರಮುಖ ಗಣೇಶೋತ್ಸವ ಸ್ಥಳಗಳಲ್ಲಿ ಒಂದಾಗಿ ಬೆಳೆದಿದೆ. ವರ್ಷಗಳಲ್ಲಿ ಲಾಲ್‌ಬೌಚ ರಾಜ ಮುಂಬೈನ ಅತ್ಯಂತ ಪ್ರಸಿದ್ಧ ಗಣಪತಿಯಾಗಿ ಖ್ಯಾತಿ ಗಳಿಸಿದ್ದು, ಈ ಗಣೇಶ ಭಕ್ತರ ಅಭಿಲಾಸೆಗಳನ್ನು ಪೂರೈಸುವ ದೇವರು ಎಂದು ಜನ ನಂಬುತ್ತಾರೆ.

ಭಕ್ತರಿಗೆ, ಲಾಲ್‌ಬೌಚ ರಾಜನ ದರ್ಶನವು ಕೇವಲ ಆಚರಣೆಯಲ್ಲ, ಬದಲಾಗಿ ಆಧ್ಯಾತ್ಮಿಕ ಅನುಭವವಾಗಿದೆ. ಭಾರತದಾದ್ಯಂತ ಮತ್ತು ವಿದೇಶಗಳಿಂದಲೂ ಜನರು ಈ ವಿಗ್ರಹವನ್ನು ವೀಕ್ಷಿಸಲು ಮತ್ತು ಆರೋಗ್ಯ, ಸಮೃದ್ಧಿ ಮತ್ತು ಶಾಂತಿಗಾಗಿ ಆಶೀರ್ವಾದ ಪಡೆಯಲು ಮುಂಬೈಗೆ ಆಗಮಿಸುತ್ತಾರೆ. ಲಾಲ್‌ಬೌಚ ರಾಜ 2025 ರ ಮೊದಲ ನೋಟ ಬಹಿರಂಗಗೊಳ್ಳುವುದರೊಂದಿಗೆ, ಹಬ್ಬದ ಉತ್ಸಾಹವು ಈಗಾಗಲೇ ನಗರವನ್ನು ಆವರಿಸಿಕೊಂಡಿದ್ದು, ಭವ್ಯ ಆಚರಣೆಗಳಿಗೆ ವೇದಿಕೆಯನ್ನು ಸಿದ್ಧಪಡಿಸಿದೆ.

 

 

ಮುಂಬೈನ ಧಾರಾವಿಯ ಗಣೇಶ

ಹಾಗೆಯೇ ಮುಂಬೈನ ಧಾರಾವಿಯಲ್ಲಿ ಕಮಲದ ಮೇಲೆ ಕುಳಿತಿರುವ ವಿಶಿಷ್ಟ ಗಣೇಶ ಮೂರ್ತಿಯನ್ನು ಕೂರಿಸಲಾಗಿದೆ. ಉತ್ಸವಕ್ಕೂ ಮುನ್ನ ಅನಾವರಣಗೊಳಿಸಲಾದ ಅನೇಕ ಆಕರ್ಷಕ ಮೂರ್ತಿಗಳಲ್ಲಿ, ಧಾರಾವಿಯ ಗಣೇಶ ಮೂರ್ತಿಯೂ ಒಂದು. ಈ ಬಾರಿ ಗಣೇಶನನ್ನು ಕಮಲದ ದಳದ ಮಧ್ಯೆ ಕೂರಿಸಿದಂತೆ ನಿರ್ಮಿಸಲಾಗಿದ್ದು, ಇಡೀ ವಿಗ್ರಹವನ್ನು ತಾವರೆಯ ಒಂದೇ ದಂಡಿನ ಮೇಲೆ ನಿಲ್ಲುವಂತೆ ರಚಿಸಲಾಗಿದೆ. ಕೃಷ್ಣಲ್ ಆರ್ಟ್ಸ್‌ನ ಶಿಲ್ಪಿ ಅರುಣ್ ದತ್ತೆ ಈ ಗಾಳಿಯಲ್ಲಿ ತೇಲುತ್ತಿರುವಂತೆ ಕಾಣುವ ಕಮಲದ ಮೇಲೆ ಧಾರಾವಿ ಚಾ ವಿಘ್ನಹರ್ತ ವಿಗ್ರಹವನ್ನು ನಿರ್ಮಿಸಿದ್ದಾರೆ.

 

 

ಮುಂಬೈನಲ್ಲಿ ಗಣೇಶೋತ್ಸವ

ಮುಂಬೈ ಗಣೇಶ ಚತುರ್ಥಿ ಹಬ್ಬದ ಆಚರಣೆಯ ರಾಜ್ಯದಲ್ಲಿ ಸಾರ್ವಜನಿಕವಾಗಿ ಆಚರಿಸುವ ಪ್ರಮುಖ ಹಬ್ಬವಾಗಿದೆ ಇಲ್ಲಿ ಸುಮಾರು 14,000 ಗಣೇಶ ಮಂಡಲಗಳಿದ್ದು, ಅವುಗಳಲ್ಲಿ 8,000 ನೋಂದಣಿಯಾಗಿವೆ. ಬೃಹನ್ಮುಂಬೈ ಸಾರ್ವಜನಿಕ ಸಮನ್ವಯ ಸಮಿತಿಯು ನಾಗರಿಕ ಸಂಸ್ಥೆಗಳು ಮತ್ತು ಪೊಲೀಸರೊಂದಿಗೆ ಸಮನ್ವಯದೊಂದಿಗೆ ಪ್ರತಿ ವರ್ಷ ಈ ಮಂಟಪಗಳ ಸುಗಮ ಕಾರ್ಯನಿರ್ವಹಣೆಯನ್ನು ನೋಡಿಕೊಳ್ಳುತ್ತದೆ. ಅದರ ಸಾಂಸ್ಕೃತಿಕ ಮಹತ್ವವನ್ನು ಗುರುತಿಸಿ, ಮಹಾರಾಷ್ಟ್ರ ಸರ್ಕಾರವು ಗಣೇಶೋತ್ಸವಕ್ಕೆ 'ರಾಜ್ಯ ಉತ್ಸವ' ಸ್ಥಾನಮಾನವನ್ನು ನೀಡಿದೆ.

ಇದನ್ನೂ ಓದಿ: ಮಧ್ಯ ಆಗಸದಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿಯನ್ನುಏರ್ ಇಂಡಿಯಾ ಕ್ಯಾಬಿನ್ ಸಿಬ್ಬಂದಿ ನಿರ್ವಹಿಸಿದ ರೀತಿಗೆ ಪ್ರಯಾಣಿಕನಿಂದ ಭಾರಿ ಶ್ಲಾಘನೆ

ಇದನ್ನೂ ಓದಿ: ಅಕ್ಕನ ಪ್ರೀತಿಸ್ತಿದ್ದವನ ಕೊಂದ ತಮ್ಮ: ಮತ್ತೊಂದೆಡೆ ಗರ್ಭಿಣಿ ಪತ್ನಿಯ ಕೊಂದು ಶವ ಪೀಸ್ ಪೀಸ್ ಮಾಡಿ ನದಿಗೆಸೆದ ಗಂಡ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ