West Bengal Kalita Majhi: ಮನೆ ಮನೆ ಮುಸುರೆ ತಿಕ್ಕುತ್ತಿದ್ದ ಕಲಿತಾ ಮಾಝಿ ಈಗ ಬಂಗಾಳ ಸಚಿವೆ!

Kannadaprabha News   | Kannada Prabha
Published : Jun 02, 2026, 07:26 AM IST
From Domestic worker to Bengal Minister The Inspiring Journey of Kalita Majhi

ಸಾರಾಂಶ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಸಂಪುಟ ವಿಸ್ತರಣೆಯಾಗಿದ್ದು, 35 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮಾಜಿ ಕ್ರಿಕೆಟಿಗ ಅಶೋಕ್‌ ದಿಂಡಾ ಹಾಗೂ ಈ ಹಿಂದೆ ಮನೆಗೆಲಸ ಮಾಡುತ್ತಿದ್ದ ಕಲಿತಾ ಮಾಝಿ ಅವರು ಸಚಿವರಾಗಿರುವುದು ವಿಶೇಷ.

  • ಸುವೇಂದು ಸಂಪುಟ ವಿಸ್ತರಣೆ: 35 ಸಚಿವರ ಶಪಥ
  • ಮಾಜಿ ಕ್ರಿಕೆಟಿಗ ಅಶೋಕ್‌ ದಿಂಡಾಗೂ ಮಂತ್ರಿಗಿರಿ

ಕೋಲ್ಕತಾ (ಜೂ.2): ಪಶ್ಚಿಮ ಬಂಗಾಳ(West Bengal)ದ ಮುಖ್ಯಮಂತ್ರಿಯಾಗಿ ಬಿಜೆಪಿಯ ಸುವೇಂದು ಅಧಿಕಾರಿ(Suvendu adhikari) ಅಧಿಕಾರ ವಹಿಸಿಕೊಂಡ 3 ವಾರ ಬಳಿಕ ಇದೀಗ ಸಂಪುಟ ವಿಸ್ತರಣೆ ಆಗಿದ್ದು, ಪಕ್ಷದ 35 ಶಾಸಕರು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಇವರಲ್ಲಿ ಈ ಹಿಂದೆ ಅನ್ಯರ ಮನೆಗಳ ಮುಸುರೆ ತಿಕ್ಕಿ ಜೀವನ ನಡೆಸುತ್ತಿದ್ದ ಹಾಗೂ ಇತ್ತೀಚೆಗೆ ಶಾಸಕಿ ಆಗಿ ಆಯ್ಕೆ ಆಗಿದ್ದ ಕಲಿತಾ ಮಾಝಿ(Kalita majhi) ಅವರೂ ಇದ್ದಾರೆ. ಮಾಜಿ ಕ್ರಿಕೆಟಿಗ ಅಶೋಕ್‌ ದಿಂಡಾ ಕೂಡ ಸಚಿವ ಸ್ಥಾನ ಪಡೆದಿದ್ದಾರೆ.

ಕೋಲ್ಕತಾದ ಲೋಕಭವನದಲ್ಲಿಯ ಕಾರ್ಯಕ್ರಮದಲ್ಲಿ ರಾಜ್ಯಪಾಲ ಆರ್‌.ಎನ್‌.ರವಿ ಪ್ರಮಾಣ ಬೋಧಿಸಿದರು. ಕೆಲವರು ಸಂಪುಟ ಸಚಿವರಾಗಿ ಪ್ರಮಾಣ ಸ್ವೀಕರಿಸಿದರೆ ಇನ್ನು ಕೆಲವರು ರಾಜ್ಯ ಸಚಿವರಾಗಿ ಪ್ರಮಾಣ ಪಡೆದರು. ಈ ಮೂಲಕ ಮಂತ್ರಿಮಂಡಲ ಸಾಮರ್ಥ್ಯ 41ಕ್ಕೆ ಏರಿಕೆಯಾಗಿದೆ. ಈಗ ಸುವೇಂದು ಸರ್ಕಾರ ವಿಧಾನಸಭೆಯಲ್ಲಿ 294 ಸದಸ್ಯ ಬಲ ಹೊಂದಿದೆ.

ಇತ್ತೀಚಿನ ಚುನಾವಣೆಯಲ್ಲಿ ಬಜೆಪಿ ಗೆಲುವಿನ ಬಳಿಕ ಪಶ್ಚಿಮ ಬಂಗಾಳ ಮುಖ್ಯಮಂತ್ರಿಯಾಗಿ ಸುವೇಂದು ಮೇ 3ಕ್ಕೆ ಪ್ರಮಾಣ ಸ್ವೀಕರಿಸಿದ್ದರು.

2021ರಲ್ಲೂ ಸ್ಪರ್ಧಿಸಿದ್ದ ಕಲಿತಾ:

ರಾಜಕೀಯ ಪ್ರವೇಶಕ್ಕೂ ಮುನ್ನ ಮುಸುರೆ ತಿಕ್ಕುತ್ತಿದ್ದ ಕಲಿತಾ, ಈ ಹಿಂದಿನ 2021ರ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. ಇದೀಗ ಮತ್ತೆ ಪೂರ್ವ ಬರ್ಧಮಾನ್‌ ಜಿಲ್ಲೆಯ ಆಸುಗ್ರಾಮ ಕ್ಷೇತ್ರದಿಂದ ಪಕ್ಷದ ಟಿಕೆಟ್‌ ಪಡೆದು ಗೆದ್ದಿದ್ದರು. ಅವರ ಪತಿ ಪ್ಲಂಬರ್‌ ಆಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: West Bengal Kalita Majhi - ಮನೆ ಮನೆ ಮುಸುರೆ ತಿಕ್ಕುತ್ತಿದ್ದ ಕಲಿತಾ ಮಾಝಿ ಈಗ ಬಂಗಾಳ ಸಚಿವೆ!
ಅಭಿಷೇಕ್ ಬಳಿಕ ಮತ್ತೋರ್ವ ಸಂಸದ ಕಲ್ಯಾಣ್ ಬ್ಯಾನರ್ಜಿ ಮೇಲೆ ಹಲ್ಲೆ, ಬಂಧಿತರಲ್ಲಿ ಟಿಎಂಸಿ ಬೆಂಬಲಿಗರೇ!