
ದೆಹಲಿ (ಜೂ.08) ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಟಿಎಂಸಿ ಸೋತು ಸುಣ್ಣವಾಗಿದ್ದು ಮಾತ್ರವಲ್ಲ, ಇದೀಗ ಪಕ್ಷವೇ ಒಡೆದು ಹೋಳಾಗಿದೆ. ಬಂಡಾಯಕ ನಾಯಕರ ಸಂಖ್ಯೆ ಹೆಚ್ಚಾಗುತ್ತಿದೆ. ಮಮತಾ ಬ್ಯಾನರ್ಜಿ ಜೊತೆ ನಾಯಕರೇ ಇಲ್ಲದಾಗಿದೆ. ಇದೀಗ ಮಮತಾ ಬ್ಯಾನರ್ಜಿ ಇಂಡಿಯಾ ಒಕ್ಕೂಟ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಇದೇ ವೇಳೆ 10 ಟಿಎಂಸಿ ಬಂಡಾಯ ಸಂಸದರು ನೇರವಾಗಿ ದೆಹಲಿಗೆ ಆಗಮಿಸಿ ಬಿಜೆಪಿ ನಾಯಕರ ಭೇಟಿಯಾಗಿದ್ದಾರೆ. ಮಮತಾ ಬ್ಯಾನರ್ಜಿ ದೆಹಲಿಯಲ್ಲಿರುವಾಗಲೇ ಟಿಎಂಸಿ ನಾಯಕರು ಬಿಜೆಪಿ ನಾಯಕರ ಭೇಟಿ ಮಾಡಿರುವುದು ಮಮತಾ ಕೆರಳಿಸಿದ್ದು ಮಾತ್ರವಲ್ಲ, ಪಾರ್ಟಿಯಲ್ಲಿ ಯಾರು ಉಳಿದಿಕೊಳ್ಳುತ್ತಾರೆ ಅನ್ನೋ ಪ್ರಶ್ನೆ ಎದುರಾಗಿದೆ.
ಟಿಎಂಸಿ ಸಂಸದರಾದ ಶತಾಬ್ದಿ ರಾಯ್, ಕಕೋಲಿ ಘೋಷ್ ದಾಸ್ತಿದಾರ್, ಅಬು ತೆಹರ್ ಖಾನ್, ಖಲಿಯೂರ್ ರೆಹಮಾನ್, ಅಸಿತ್ ಕುಮಾರ್ ಮಲ್, ಅರೂಪ್ ಚಕ್ರಬೊರ್ತಿ, ಕಲಿಪಜ ಸೊರೆನ್, ಜಗದೀಶ್ ಚಂದ್ರ ಬುಮ್ರಾ ಬಸುನಿಯಾ, ಪ್ರಸೂನ್ ಬ್ಯಾನರ್ಜಿ, ಶರ್ಮಲಿ ಸರ್ಕಾರ್ ಸೇರಿದಂತೆ 10 ಸಂಸದರು ಬಿಜೆಪಿ ನಾಯಕರ ಭೇಟಿಯಾಗಿದ್ದಾರೆ.
ಟಿಎಂಸಿ ಪಕ್ಷದಿಂದ ಹೊರಬಂದ ಶಾಸಕ ಸುಕೇಂದ್ ಶೇಖರ್ ಕೂಡ ಉಪಸ್ಥಿತರಿದ್ದರು. 10 ಸಂಸದರ ಜೊತೆ ಅಕ್ರಝಮಾನ್ ಕ್ಷೇತ್ರದ ಶಾಸಕನ ನಡೆ ತೀವ್ರ ಕುತೂಹಲ ಕೆರಳಿಸಿದೆ. 10 ಸಂಸದರು ಹಾಗೂ ಟಿಎಂಸಿ ಬಂಡಾಯ ನಾಯಕರಿಂದ ಬಿಜೆಪಿ ಸಂಪರ್ಕಿಸಿದ ನಾಯಕರ ಪೈಕಿ ಮುಸ್ಲಿಮ್ ಸಮುದಾಯದ ನಾಯಕರು ಸೇರಿದ್ದಾರೆ. ಇದು ತೀವ್ರ ಕುತೂಹಲ ಕೆರಳಿಸಿದೆ. ಕಾರಣ ಮುಸ್ಲಿಮ್ ನಾಯಕರು ತಮ್ಮ ಜೊತೆ ನಿಲ್ಲುತ್ತಾರೆ ಎಂದು ಮಮತಾ ಬ್ಯಾನರ್ಜಿ ಎಂದುಕೊಂಡಿದ್ದರು. ಆದರೆ ಮುಸ್ಲಿಮ್ ನಾಯಕರು ಮಮತಾಗೆ ಕೈಕೊಡುತ್ತಿರುವ ಬೆಳವಣಿಗೆ ನಡೆಯುತ್ತಿದೆ.
20 ಸಂಸದರ ನಮ್ಮ ಘಟಕ ಬೇರೆಯಾಗುತ್ತೇವೆ. ಬಳಿಕ ಎನ್ಡಿಎಗೆ ಬೆಂಬಲ ನೀಡುತ್ತೇವೆ. ನಮ್ಮ ಮುಖ್ಯ ಸಚೇತಕ ಶತಾಬ್ದಿ ರಾಯ್ ನಮ್ಮ ಉಪ ನಾಯಕ ಎಂದು ಕಕೋಲಿ ಘೋಷ್ ದಸ್ತಿದಾರ್ ಹೇಳಿದ್ದಾರೆ. ಟಿಎಂಸಿ ಕೆಲವೇ ದಿನಗಳಲ್ಲಿ ಖಾಲಿಯಾಗುವ ಸಾಧ್ಯತೆ ಕಾಣಿಸುತ್ತಿದೆ. ಮಮತಾ ಜೊತೆ ಸಂಬಂಧಿ ಅಭಿಷೇಕ್ ಬ್ಯಾನರ್ಜಿ ಹೊರತು ಇನ್ಯಾರುವ ಉಳಿಯುವ ಸಾಧ್ಯತೆ ಇಲ್ಲ ಎಂದೇ ವಿಶ್ಲೇಷಿಸಲಾಗುತ್ತಿದೆ.
ಇತ್ತ ಮಮತಾ ಬ್ಯಾನರ್ಜಿ ಇಂಡಿಯಾ ಒಕ್ಕೂಟ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಇಂಡಿಯಾ ಒಕ್ಕೂಟದಿಂದಲೂ ಹಲವು ಪಕ್ಷಗಳು ದೂರ ಉಳಿದಿದೆ. ಡಿಎಂಕೆ, ಟಿವಿಕೆ ಸೇರಿದಂತೆ ಹಲವು ಮಿತ್ರ ಪಕ್ಷಗಳು ಇಂಡಿಯಾ ಒಕ್ಕೂಟ ಸಭೆಗೆ ಗೈರಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ