ಕೇರಳದ ರಾಜಕೀಯವೇ ವಿಚಿತ್ರ: ಶಾಸಕ ರಾಜೀವ್‌ ಚಂದ್ರಶೇಖರ್‌ ಬಣ್ಣನೆ

Published : Jun 08, 2026, 07:09 AM IST
Rajeev Chandrasekhar

ಸಾರಾಂಶ

ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್, ಶಾಸಕರಾಗಿ ತಮ್ಮ ಮೊದಲ ವಿಧಾನಸಭೆ ಅಧಿವೇಶನದ ಅನುಭವವನ್ನು ಹಂಚಿಕೊಂಡಿದ್ದಾರೆ. ಕೇರಳದ ರಾಜಕೀಯ ಸಂಸ್ಕೃತಿಯು ಜನಸಾಮಾನ್ಯರ ನೈಜ ಸಮಸ್ಯೆಗಳಿಂದ ಸಂಪರ್ಕ ಕಡಿದುಕೊಂಡಿದ್ದು, ಅನಗತ್ಯ ವಿವಾದಗಳಲ್ಲೇ ಮುಳುಗಿದೆ ಎಂದು ಅವರು ಟೀಕಿಸಿದ್ದಾರೆ. 18 ವರ್ಷಗಳ ಸಂಸದೀಯ ಅನುಭವದ ನಂತರವೂ, ಇಲ್ಲಿನ ರಾಜಕೀಯ ತನಗೆ ವಿಚಿತ್ರವೆನಿಸಿದೆ ಎಂದು ಅವರು ಹೇಳಿದ್ದಾರೆ.

ತಿರುವನಂತಪುರಂ: ‘ಕೇರಳದ ರಾಜಕೀಯ ಸಂಸ್ಕೃತಿಯೇ ವಿಚಿತ್ರ. ಜನಸಾಮಾನ್ಯರ ಕಷ್ಟಗಳಿಗೆ ಬದಲಾಗಿ, ಇಲ್ಲಿನ ರಾಜಕೀಯ ಪಕ್ಷಗಳು ಅನಗತ್ಯ ವಿವಾದಗಳನ್ನು ಸೃಷ್ಟಿಸುತ್ತವೆ. ನಾನು ಸಂಸತ್ತಿನಲ್ಲಿ 18 ವರ್ಷ ಇದ್ದು ಎಲ್ಲವನ್ನೂ ನೋಡಿದ್ದೇನೆ ಎಂದು ಭಾವಿಸಿದ್ದೆ. ಆದರೆ ನಾನು ಏನನ್ನೂ ನೋಡಿಲ್ಲ ಎಂದು ಈಗ ಅರಿವಾಯಿತು’ ಎಂದು ಕೇರಳ ಬಿಜೆಪಿ ಅಧ್ಯಕ್ಷ, ಶಾಸಕ ರಾಜೀವ್‌ ಚಂದ್ರಶೇಖರ್‌ ಭಾನುವಾರ ಹೇಳಿದ್ದಾರೆ.

ಫೇಸ್ಬುಕ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘ಜೂ.1ರಂದು ಮೊದಲ ಬಾರಿ ಶಾಸಕನಾಗಿ ವಿಧಾನಸಭೆ ಪ್ರವೇಶಿಸಿದೆ. ನಾನು ಸಂಸತ್ತಿನಲ್ಲಿ 18 ವರ್ಷಗಳ ಕಾಲ ರಾಜಕೀಯ ಮತ್ತು ಸಂಸದೀಯ ಕಾರ್ಯಚಟುವಟಿಕೆಗಳಲ್ಲಿ ಬಹುತೇಕ ಎಲ್ಲವನ್ನೂ ನೋಡಿದ್ದೇನೆ ಎಂದು ಭಾವಿಸಿದ್ದೆ. ಆದರೆ ಈಗ ನಾನು ಏನನ್ನೂ ನೋಡಿಲ್ಲ ಎಂದು ಅರಿವಾಯಿತು. ಇತ್ತೀಚಿನ ವಿಧಾನಸಭಾ ಅಧಿವೇಶನವು ಹಲವಾರು ಕಾರಣಗಳಿಂದ ಗಮನಾರ್ಹವಾಗಿತ್ತು. ಅದರಲ್ಲಿ ಎದ್ದು ಕಂಡ ಅಂಶವೆಂದರೆ, ಸಮಾಜದ ನಿಜವಾದ ಕಾಳಜಿಗಳಿಂದ ಸಂಪರ್ಕ ಕಡಿತಗೊಂಡ ರಾಜಕೀಯ ಸಂಸ್ಕೃತಿ’ ಎಂದು ಬರೆದುಕೊಂಡಿದ್ದಾರೆ.

ಯಾವುದೇ ಸಂಬಂಧವಿಲ್ಲದ ವಿಚಿತ್ರ ರೀತಿಯ ರಾಜಕೀಯ

‘ನನಗೆ ವಿಚಿತ್ರವೆನಿಸಿದ್ದು ಕೆಲವು ಜನರ ರಾಜಕೀಯ. ಇದು ಸಮಾಜ ಎದುರಿಸುತ್ತಿರುವ ನೈಜ ಸಮಸ್ಯೆಗಳೊಂದಿಗೆ ಯಾವುದೇ ಸಂಬಂಧವಿಲ್ಲದ ವಿಚಿತ್ರ ರೀತಿಯ ರಾಜಕೀಯ. ರಾಜಕೀಯ ನಾಯಕರು ಅಭಿವೃದ್ಧಿ, ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಯ ಚರ್ಚೆಗಳಿಗಿಂತ ಸೈದ್ಧಾಂತಿಕ ಚರ್ಚೆಗಳು ಮತ್ತು ರಾಜಕೀಯ ವಿವಾದಗಳಲ್ಲಿ ಮುಳುಗಿದ್ದಾರೆ. ಇಲ್ಲಿನ ಪರಿಸ್ಥಿತಿ ಸಂಕಟ, ಕರುಣಾಜನಕ ಮತ್ತು ಸಂಪೂರ್ಣವಾಗಿ ಬೇಜವಾಬ್ದಾರಿಯುತವಾಗಿದೆ’ ಎಂದು ವಿವರಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

3000 ಕೆಜಿ ಅವಲಕ್ಕಿ ತಯಾರಿಸಿ ವಿಶ್ವ ದಾಖಲೆ ಯತ್ನ; 400 KG ಪುಠಾಣಿ, 500 KG ಈರುಳ್ಳಿ, 300 KG ಎಣ್ಣೆ
ಜೋಜಿಲಾ ಸುರಂಗ ಕಾಮಗಾರಿ ಅಂತಿಮ ಘಟ್ಟಕ್ಕೆ; ಭಾರತದ ಮೂಲಸೌಕರ್ಯ ಇತಿಹಾಸದಲ್ಲಿ ಹೊಸ ಅಧ್ಯಾಯ