ನೂಪುರ್ ಮೇಲೆ ಕ್ರಮ ಕೈಗೊಂಡಿದ್ದು ಸರಿ, ಈಗ ಆಕೆಯ ಭದ್ರತೆಯ ಬಗ್ಗೆ ಗಮನ ನೀಡಿ : ಉಮಾಭಾರತಿ

Published : Jun 08, 2022, 10:02 PM IST
ನೂಪುರ್ ಮೇಲೆ ಕ್ರಮ ಕೈಗೊಂಡಿದ್ದು ಸರಿ, ಈಗ ಆಕೆಯ ಭದ್ರತೆಯ ಬಗ್ಗೆ ಗಮನ ನೀಡಿ : ಉಮಾಭಾರತಿ

ಸಾರಾಂಶ

ನೂಪುರ್ ಶರ್ಮ ಕುರಿತಾಗಿ ಬಿಜೆಪಿ ಪಕ್ಷ ಕ್ರಮ ಕೈಗೊಂಡಿದ್ದು ಸರಿಯಾಗಿದೆ. ನೂಪುರ್ ಶರ್ಮ ಅವರಿಂದ ತಪ್ಪಾಗಿದೆ. ಯಾಕೆಂದರೆ, ನಮ್ಮ ಪಕ್ಷದಲ್ಲಿ ಶಿಸ್ತಿನ ನಿಯಮವಿದೆ. ವಕ್ತಾರರು ಇದನ್ನು ದಾಟಿ ಹೋಗಬಾರದು. ದ್ವೇಷ ಭಾಷಣ ನಡೆಸುವಂಥ ಸ್ವಾತಂತ್ರ್ಯವನ್ನು ಪಕ್ಷ ಯಾರಿಗೂ ನೀಡಿಲ್ಲ. ಹಾಗಾಗಿ ಅವರ ವಿರುದ್ಧ ಕ್ರಮ ಕೈಗೊಂಡಿದ್ದು ಸರಿ ಎಂದು ಬಿಜೆಪಿಯ ಫೈರ್ ಬ್ರ್ಯಾಂಡ್ ಎನಿಸಿಕೊಂಡಿದ್ದ ಹಿರಿಯ ನಾಯಕಿ ಉಮಾ ಭಾರತಿ ಹೇಳಿದ್ದಾರೆ.

ಭೋಪಾಲ್ (ಜೂನ್ 8): ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾಭಾರತಿ (Former Madhya Pradesh CM Uma Bharti ) ಅವರು ಬಿಜೆಪಿಯ ಮಾಜಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ (Nupur Sharma) ಅವರ ಮೇಲಿನ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಆದರೆ, ಈಗ ಆಕೆಯ ಭದ್ರತೆಯ ಮೇಲೆ ಹೆಚ್ಚಿನ ಗಮನ ನೀಡಬೇಕು ಎಂದು ಹೇಳಿದ್ದಾರೆ. ತಮ್ಮ ಹೇಳಿಕೆಗೆ ನೂಪುರ್ ಈಗಾಗಲೇ ಕ್ಷಮೆ ಯಾಚಿಸಿದ್ದಾರೆ. ಅವರು ಹೇಳಿದ್ದು ತಪ್ಪು ಎನ್ನುವುದು ಅರ್ಥವಾಗಿದೆ. ಹಾಗೆಂದ ಮಾತ್ರಕ್ಕೆ ಆಕೆಯನ್ನು ತೋಳಗಳ ಹಿಂಡಿಗೆ ಎಸೆಯಲು ಸಾಧ್ಯವಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.

ಇನ್ನೊಂದೆಡೆ ರಾಷ್ಟ್ರೀಯ ವಕ್ತಾರರಿಗೆ (national spokesperson) ಸೂಚನೆ ನೀಡಿರುವ ಹಿರಿಯ ನಾಯಕಿ, ನಿಮ್ಮ ವಿಷಪೂರಿತ ಹೇಳಿಕೆಗಳ ಮೂಲಕ, ಬಿಜೆಪಿ ಪಕ್ಷಕ್ಕೆ ಮಸಿ ಬಳಿಯುವ ಕೆಲಸ ಮಾಡಬೇಡಿ ಎಂದಿದ್ದಾರೆ. ನೂಪುರ್ ಶರ್ಮಾ ಹೇಳಿಕೆಗೆ ಅರಬ್ ದೇಶಗಳಲ್ಲಿ (Arab countries) ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆಗಳ ಕುರಿತು ಉಮಾಭಾರತಿ, ಅರಬ್ ರಾಷ್ಟ್ರಗಳ ಪ್ರತಿಕ್ರಿಯೆಯನ್ನು ನಮ್ಮ ಕೇಂದ್ರ ಸರ್ಕಾರ ಉತ್ತಮವಾಗಿ ನಿಭಾಯಿಸುತ್ತಿದೆ ಎಂದು ಹೇಳಿದರು. ನೂಪುರ್ ಮೇಲೆ ಪಕ್ಷ ಕೈಗೊಂಡಿರುವ ಕ್ರಮದ ಕುರಿತು ಮಾತನಾಡಿದ ಅವರು, ನೂಪುರ್ ಯಾವುದೇ ತಪ್ಪು ಮಾಡಿದರೂ ಪಕ್ಷದ ನೀತಿ ಮತ್ತು ನೀತಿ, ವಕ್ತಾರರು ಅದರಿಂದ ಹೊರಬರಲು ಸಾಧ್ಯವಿಲ್ಲ. ನಮ್ಮ ಪಕ್ಷವು ಎಂದಿಗೂ ದ್ವೇಷದ ಮಾತುಗಳನ್ನು ಮಾತನಾಡುವ ಸ್ವಾತಂತ್ರ್ಯವನ್ನು ಯಾರಿಗೂ ನೀಡುವುದಿಲ್ಲ ಮತ್ತು ಆ ಕಾರಣದಿಂದಾಗಿ ಪಕ್ಷವು ತೆಗೆದುಕೊಂಡ ಕ್ರಮವು ಸಮರ್ಥನೀಯವಾಗಿದೆ.

ಆದರೆ, ನೂಪುರ್ ಶರ್ಮಾಗೆ ಡಚ್ ಸಂಸದ ಗ್ರೀಟ್ ವಿಲ್ಡರ್ಸ್ ಸಂಪೂರ್ಣ ಬೆಂಬಲ ನೀಡಿದ್ದಾರೆ. ಸತ್ಯ ಹೇಳಿರುವ ನೂಪರ್ ಶರ್ಮಾಗೆ ನನ್ನ ಬೆಂಬಲ ಎಂದಿದ್ದಾರೆ. ಇಷ್ಟೇ ಅಲ್ಲ ಭಾರತೀಯರು ನೂಪುರ್ ಶರ್ಮಾಗೆ ಬೆಂಬಲ ನೀಡಿ, ಆದರೆ ಉಗ್ರರಿಗೆ ತಲೆಬಾಗಬೇಡಿ ಎಂದು ಕಿವಿ ಮಾತು ನೀಡಿದ್ದಾರೆ.

ನೂಪುರ್ ಶರ್ಮಾಗೆ ಬರುತ್ತಿರುವ ಬೆದರಿಕೆಗಳನ್ನು ಉಲ್ಲೇಖಿಸಿದ ಉಮಾಭಾರತಿ, ಈಗ ಆತಂಕದ ವಿಷಯ ಬಂದಿರುವುದು ಆಕೆಯ ತಲೆಗೆ ಒಂದು ಕೋಟಿ ಬಹುಮಾನ, ಶೂಗಳಿಂದ ಆಕೆಯ ಫೋಟೋವನ್ನು ಪುಡಿಮಾಡಿರುವುದು ಮತ್ತು ಆಕೆಗೆ ಬೆದರಿಕೆಗಳು ಬರುತ್ತಿರುವ ರೀತಿಯನ್ನು ನೋಡುತ್ತಿದ್ದರೆ ಮಾತ್ರ, ಇದರ ಬಗ್ಗೆಯೂ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ಮುಖ್ಯ ಜನರನ್ನು ಖಂಡಿಸಬೇಕು. ಈ ನಿಟ್ಟಿನಲ್ಲಿ ಆಕೆಗೆ ಅಗತ್ಯವಿರುವಷ್ಟು ರಕ್ಷಣೆ ನೀಡಬೇಕು ಎಂದಿದ್ದಾರೆ.

ಒಂದು ಹೆಣ್ಣುಮಗಳ ಫೋಟೋಗೆ ಚಪ್ಪಲಿಯಿಂದ ಹೊಡೆಯುವುದು, ಆಕೆಯ ತಲೆ ಕಟ್ ಮಾಡಿದರೆ, ಬಹುಮಾನ ನೀಡುತ್ತೇನೆ ಎಂದು ಹೇಳುವುದು ನಾಗರೀಕ ಸಮಾಜದ ಲಕ್ಷಣವಲ್ಲ. ನನಗೆ ಈ ವಿಚಾರದ ಬಗ್ಗೆ ಹೆಚ್ಚುವ ಆತಂಕವಾಗುತ್ತಿದೆ. ಬಹುಶಃ ಕೇಂದ್ರ ಗೃಹ ಸಚಿವರು ಆಕೆಗೆ ಹೆಚ್ಚಿನ ಭದ್ರತೆ ಒದಗಿಸುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

Nupur Sharma ಉಗ್ರರಿಗೆ ತಲೆಬಾಗಬೇಡಿ, ನೂಪುರ್ ಶರ್ಮಾಗೆ ಬೆಂಬಲ ಸೂಚಿಸಿದ ಡಚ್ ಸಂಸದ!

ವಿವಾದಾತ್ಮಕ ಹೇಳಿಕೆಗಳ ಬಗ್ಗೆ ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತರು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು. ಈ ಅಧಿಕಾರ ನಮ್ಮ 50-60 ವರ್ಷಗಳ ತಪಸ್ಸಿನ ಫಲ. ಇದರ ಮೇಲೆ ನಾವು ಕಸವನ್ನು ಎಸೆಯಬಾರದು. ಉತ್ತರ ಪ್ರದೇಶದ ವಿಚಾರದಲ್ಲಿ ನಾವು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸುತ್ತಿಲ್ಲ. ಅಲ್ಲಿ ಬಹಳಷ್ಟು ತಪ್ಪುಗಳು ನಡೆಯುತ್ತಿವೆ. ಜಾತಿ ರಾಜಕಾರಣ ಅಲ್ಲಿ ಭೀಕರವಾಗಿದೆ. ಧರ್ಮದ ಆಧಾರದಲ್ಲಿ ಅಲ್ಲಿ ರಾಜಕಾರಣ ನಡೆಯುತ್ತಿದೆ. ಈಗ ಅಲ್ಲಿನ ಕೆಲವೊಂದು ನಗರದಲ್ಲಿ ದ್ವೇಷವೇ ಹೆಚ್ಚು ಮನೆಮಾಡಿದ್ದು ಅದನ್ನು ಶಾಂತ ಮಾಡಬೇಕಿದೆ ಎಂದಿದ್ದಾರೆ.

ನಮ್ಮ ಸರ್ಕಾರದ ಧರ್ಮವನ್ನು ನೆನಪಿಸಿದ್ದಕ್ಕೆ ಗಲ್ಫ್ ರಾಷ್ಟ್ರಗಳಿಗೆ ಥ್ಯಾಂಕ್ಸ್ ಎಂದ ಸ್ವರ ಭಾಸ್ಕರ್!

ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದ ಉಮಾಭಾರತಿ, ನಮ್ಮ ಪ್ರತಿಯೊಂದು ಸಮಸ್ಯೆಯನ್ನು ಪರಿಹರಿಸಿದ ಮೊದಲ ನಾಯಕ ಮೋದಿ ಎಂದು ಹೇಳಿದರು. ಪಾಕಿಸ್ತಾನದಲ್ಲಿ ಸಿಕ್ಕಿ ಬಿದ್ದಿದ್ದ ಅಭಿನಂದನ್ ಮರಳಿ ಬಂದರು, ಆರ್ಟಿಕಲ್ 370 ತೆಗೆದುಹಾಕಿದರು, ತ್ರಿವಳಿ ತಲಾಖ್ ತೆಗೆದುಹಾಕಿದರು, ದೇಶದಲ್ಲಿ ಶಾಂತಿ ನೆಲೆಸಿದೆ. ರಾಮ ಮಂದಿರ ನಿರ್ಮಾಣದಲ್ಲಿಯೂ ಶಾಂತಿ ಕಾಣುತ್ತಿದೆ. ಅವರು ಇಡೀ ಮುಸ್ಲಿಂ ರಾಷ್ಟ್ರದೊಂದಿಗೆ ಉತ್ತಮ ಸಂಬಂಧವನ್ನು ಸ್ಥಾಪಿಸಿದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಭಾರತ-ಆಫ್ರಿಕಾ ಫೈನಲ್ ಫೈಟ್ - ಟೆಸ್ಟ್ ಸೋಲಿಗೆ ಸೇಡು ತೀರಿಸಿಕೊಳ್ಳುತ್ತಾ ಟೀಂ ಇಂಡಿಯಾ?
ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌