ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್‌ ಸರಳತೆಗೆ ಶ್ಲಾಘನೆ: ವಿಡಿಯೋ ವೈರಲ್‌

By Anusha KbFirst Published May 9, 2022, 4:44 PM IST
Highlights
  • ಪದ್ಮಜಾ ಚುಂಡೂರು ಅವರಿಗೆ ನೀರು ನೀಡಿದ ನಿರ್ಮಲಾ ಸೀತರಾಮನ್‌
  • ಭಾಷಣದ ವೇಳೆ ನೀರು ಕೇಳಿದ ಎನ್‌ಎಸ್‌ಡಿಎಲ್ ವ್ಯವಸ್ಥಾಪಕ ನಿರ್ದೇಶಕಿ
  • ಸ್ವತಃ ಎದ್ದು ಹೋಗಿ ನೀರು ನೀಡಿದ ಸಚಿವೆ
     

ನವದೆಹಲಿ: ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡುತ್ತಿದ್ದ ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಲಿಮಿಟೆಡ್ (ಎನ್‌ಎಸ್‌ಡಿಎಲ್) ವ್ಯವಸ್ಥಾಪಕ ನಿರ್ದೇಶಕಿ ಪದ್ಮಜಾ ಚುಂಡೂರು (Padmaja Chunduru) ಅವರಿಗೆ ನೀರಿನ ಬಾಟಲಿಯನ್ನು ನೀಡಿದ್ದಕ್ಕಾಗಿ ಕೇಂದ್ರ ಹಣಕಾಸು ಸಚಿವೆ (Union Finance Minister) ನಿರ್ಮಲಾ ಸೀತಾರಾಮನ್ (Nirmala Sitharaman) ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ.

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ವಿಡಿಯೋದಲ್ಲಿ ಚುಂಡೂರು ವಿರಾಮ ತೆಗೆದುಕೊಂಡು ಹೋಟೆಲ್ ಸಿಬ್ಬಂದಿಗೆ ನೀರಿಗಾಗಿ ತಮ್ಮ ಭಾಷಣದ ಮಧ್ಯೆ ಸನ್ನೆ ಮಾಡುತ್ತಿರುವುದು ಕಂಡು ಬರುತ್ತದೆ. ಈ ವೇಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಆಸನದಿಂದ ಎದ್ದು ವೇದಿಕೆಯ ಉದ್ದಕ್ಕೂ ನಡೆದು ಹೋಗಿ ಡಯಾಸ್‌ ಬಳಿ ಇದ್ದ ಪದ್ಮಜಾ ಚುಂಡೂರು ಅವರಿಗೆ ನೀರಿನ ಬಾಟಲಿಯನ್ನು ನೀಡುತ್ತಾರೆ.

This graceful gesture by FM Smt. ji reflects her large heartedness, humility and core values.

A heart warming video on the internet today. pic.twitter.com/isyfx98Ve8

— Dharmendra Pradhan (@dpradhanbjp)

 

ನಂತರ, ಎನ್‌ಎಸ್‌ಡಿಎಲ್ ಎಂಡಿ ಪದ್ಮಜಾ, ಸಚಿವೆ ನಿರ್ಮಲಾ ಸೀತಾರಾಮನ್ ಅವರ ಈ ನಡೆಗೆ ಶ್ಲಾಘನೆ ವ್ಯಕ್ತಪಡಿಸಿ ಧನ್ಯವಾದಗಳನ್ನು ಅರ್ಪಿಸಿದರು. ಅಲ್ಲದೇ ಈ ವೇಳೆ ಪ್ರೇಕ್ಷಕರ ಹರ್ಷೋದ್ಗಾರಗಳ ನಡುವೆ ಅವರು ತಮ್ಮ ಭಾಷಣವನ್ನು ಪುನರಾರಂಭಿಸಿದರು. ಕಾರ್ಯಕ್ರಮದ ವಿಡಿಯೋವನ್ನು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ( Dharmendra Pradhan) ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ವಿತ್ತ ಸಚಿವೆ ನಿರ್ಮಲಾ ಜಾಗಕ್ಕೆ ಬರ್ತಾರಾ ಆರ್‌ಬಿಐ ಗೌರ್ನರ್?

ನೆಟ್ಟಿಗರು ಕೂಡ ನಿರ್ಮಲಾ ಸೀತಾರಾಮನ್ ಸರಳತೆಗೆ ಶ್ಲಾಘನೆ ವ್ಯಕ್ತಪಡಿಸಿದರು. ಸುಂದರ ಮತ್ತು ಗೌರವಾನ್ವಿತ ಹಣಕಾಸು ಮಂತ್ರಿ (finance minister). ಸಾರ್ವಜನಿಕ ಜೀವನದಲ್ಲಿ ಜನರು ಹೇಗೆ ವರ್ತಿಸಬೇಕು ಎಂಬುದಕ್ಕೆ ಅವರು ಅತ್ಯುತ್ತಮ ಉದಾಹರಣೆ. ದೇವರು ಅವರನ್ನು ಆಶೀರ್ವದಿಸಲಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ಐಟಿ ದಾಳಿ: ವಿತ್ತ ಸಚಿವೆ ಟ್ವೀಟ್‌ಗೆ ತಾಪ್ಸಿ ಪನ್ನು ಹೀಗೆ ರೀಯ್ಯಾಕ್ಟ್ ಮಾಡೋದಾ?

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಎನ್‌ಎಸ್‌ಡಿಎಲ್‌ನ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಮತ್ತು ವಿದ್ಯಾರ್ಥಿಗಳಿಗೆ ಎನ್‌ಎಸ್‌ಡಿಎಲ್ ಹೂಡಿಕೆದಾರರ ಜಾಗೃತಿ ಕಾರ್ಯಕ್ರಮ ಹಾಗೂ ಮಾರ್ಕೆಟ್ ಕಾ ಏಕಲವ್ಯ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಈ ಕಾರ್ಯಕ್ರಮದಲ್ಲಿ  ಎನ್‌ಎಸ್‌ಡಿಎಲ್‌ನ 25 ವರ್ಷಗಳ ಸುದೀರ್ಘ ಪ್ರಯಾಣವನ್ನು ನೆನಪಿಸುವ ಅಂಚೆ ಚೀಟಿ ಮತ್ತು ಕವರ್ ಅನ್ನು ಅವರು ಬಿಡುಗಡೆ ಮಾಡಿದರು.

ಮಾರ್ಕೆಟ್ ಕಾ ಏಕಲವ್ಯ ಕಾರ್ಯಕ್ರಮವೂ ಆರ್ಥಿಕ ಸಾಕ್ಷರತೆಯ ಅಗತ್ಯವಿರುವ ಅನೇಕರನ್ನು ತಲುಪುವ ಯೋಜನೆಯಾಗಿದೆ. ಮಾರುಕಟ್ಟೆಯ ಸರಿಯಾದ ವಿಧಾನದ ಬಗ್ಗೆ ತಿಳಿದುಕೊಳ್ಳಲು ಜನರು ಒಲವು ಹೊಂದಿರುವಾಗ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಮೂಲಕ ಎನ್‌ಎಸ್‌ಡಿಎಲ್ ಸರಿಯಾದ ಸಮಯಕ್ಕೆ ಸರಿಯಾದ ಕ್ರಮ ತೆಗೆದುಕೊಂಡಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ವೀರೇಂದ್ರ ಹೆಗ್ಗಡೆ ಕಾರ್ಯಕ್ಕೆ ನಿರ್ಮಲಾ ಸೀತಾರಾಮನ್ ಮೆಚ್ಚುಗೆ

ಬಡತನ ನಿರ್ಮೂಲನೆ ಸರ್ಕಾರದ ಪ್ರಥಮ ಆದ್ಯತೆಯಾಗಿದೆ. ಸ್ವಾವಲಂಬಿಗಳಾಗಿ ಕಾರ್ಯ ನಿರ್ವಹಿಸುವವರಿಗೆ ಬ್ಯಾಂಕುಗಳು ನೆರವು ನೀಡುತ್ತವೆ. ಸರ್ಕಾರದ ಯೋಜನೆಗಳಿಗೆ ಪೂರಕವಾಗಿ ವೀರೇಂದ್ರ ಹೆಗ್ಗಡೆಯವರು ನಿರ್ವಹಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ದೇವನಹಳ್ಳಿ ಸಮೀಪವಿರುವ ಕ್ಲಾರ್ಕ್ಸ್‌ ಎಕ್ಸಾಟಿಕಾ ರೆಸಾರ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಸ್ವಸಹಾಯ ಸಂಘ ಚಳುವಳಿಯಿಂದ ಸುಸ್ಥಿರ ಗುರಿಗಳನ್ನು ವಿವಿಧ ಯೋಜನೆಗಳ ಮೂಲಕ ಬಡತನ ನಿವಾರಣೆ ಬಗ್ಗೆನಾಲ್ಕು ದಿನಗಳ ಅಂತಾರಾಷ್ಟ್ರೀಯ ಮಟ್ಟದ ಸಮ್ಮೇಳನಕ್ಕೆ ಚಾಲನೆ ನೀಡಿ ನಿರ್ಮಲಾ ಸೀತಾರಾಮನ್‌ ಮಾತನಾಡಿದರು.

click me!