ನಟಿ ತಾಪ್ಸಿ, ಅನುರಾಗ್ ಕಶ್ಯ​ಪ್‌ಗೆ ಐಟಿ ಬಿಸಿ!

Published : Mar 04, 2021, 07:25 AM ISTUpdated : Mar 04, 2021, 08:05 AM IST
ನಟಿ ತಾಪ್ಸಿ, ಅನುರಾಗ್ ಕಶ್ಯ​ಪ್‌ಗೆ ಐಟಿ ಬಿಸಿ!

ಸಾರಾಂಶ

ನಟಿ ತಾಪ್ಸಿ, ಕಶ್ಯ​ಪ್‌ಗೆ ಐಟಿ ಬಿಸಿ| ಬಾಲಿವುಡ್‌ ಸ್ಟಾರ್‌ಗಳ ಮೇಲೆ ತೆರಿಗೆ ದಾಳಿ| 30 ಸ್ಥಳಗಳಲ್ಲಿ ಶೋಧ| ತೆರಿಗೆ ವಂಚನೆ ಆರೋ​ಪದಡಿ ಶೋಧ| ಕೇಂದ್ರವನ್ನು ಟೀಕಿಸಿದ್ದ ನಟರು

ಮುಂಬೈ/​ನ​ವ​ದೆ​ಹ​ಲಿ(ಮಾ.04): ತೆರಿಗೆ ವಂಚನೆ ಆರೋಪದ ಪ್ರಕ​ರ​ಣ ಸಂಬಂಧ ಬಾಲಿ​ವುಡ್‌ ನಟಿ ತಾಪ್ಸಿ ಪನ್ನು, ನಿರ್ದೇಶಕ ಅನು​ರಾಗ್‌ ಕಶ್ಯಪ್‌ ನಿವಾ​ಸ​ ಮತ್ತು ಅವರ ಕೆಲ ಉದ್ಯಮ ಸ್ನೇಹಿತರ ಮನೆ ಹಾಗೂ ಕಚೇ​ರಿ​ಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದಾರೆ. ಮುಂಬೈ ಮತ್ತು ಪುಣೆಯ 30 ಸ್ಥಳಗಳ ಮೇಲೆ ಏಕಕಾಲದಲ್ಲಿ ನಡೆದ ದಾಳಿ ವೇಳೆ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಪುಣೆಯಲ್ಲಿ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದ ಇಬ್ಬರನ್ನೂ ತೆರಿಗೆ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.

ಈ ನಡುವೆ ತೆರಿಗೆ ದಾಳಿ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಕೇಂದ್ರ ಸರ್ಕಾರದ ವಿರುದ್ಧ ಮುಕ್ತವಾಗಿ ಮಾತನಾಡಿದ್ದಕ್ಕಾಗಿ ಇಬ್ಬರ ಮೇಲೂ ದಾಳಿ ನಡೆಸಲಾಗಿದೆ. ಇದು ರಾಜಕೀಯ ಪ್ರೇರಿತ ದಾಳಿ ಎಂದು ಕಾಂಗ್ರೆಸ್‌ ಮತ್ತು ಎನ್‌ಸಿಪಿ ಟೀಕಿಸಿವೆ.

ತೆರಿಗೆ ವಂಚನೆ:

2011ರಲ್ಲಿ ಅನುರಾಗ್‌ ಕಶ್ಯಪ್‌ ಫ್ಯಾಂಟಮ್‌ ಫಿಲ್ಸ್‌್ಮ ಎಂಬ ಚಲನಚಿತ್ರ ನಿರ್ಮಾಣ ಸಂಸ್ಥೆ ಸ್ಥಾಪಿಸಿದ್ದರು. ಇದರ ಮೂಲಕ ‘ಲುಟೇರಾ’, ‘ಕ್ವೀನ್‌’, ‘ಎನ್‌ಎಚ್‌10’, ‘ಉಡ್ತಾ ಪಂಜಾಬ್‌’ ಸೇರಿದಂತೆ ಹಲವು ಚಿತ್ರ ನಿರ್ಮಿಸಿದ್ದರು. ಅವರ ಈ ಉದ್ಯಮದಲ್ಲಿ ನಿರ್ಮಾಪಕ ವಿಕ್ರಮಾದಿತ್ಯ ಮೋಟ್ವಾನೆ, ನಿರ್ಮಾಪಕ ವಿಕಾಸ್‌ ಬಹಲ್‌, ಮಧು ಮಂಟೇನಾ ಪಾಲುದಾರರಾಗಿದ್ದರು. 2018ರಲ್ಲಿ ಈ ಸಂಸ್ಥೆಯನ್ನು ಮುಚ್ಚಿ ಕಶ್ಯಪ್‌ ಬೇರೊಂದು ಚಲನಚಿತ್ರ ನಿರ್ಮಾಣ ಸಂಸ್ಥೆ ಸ್ಥಾಪಿಸಿದ್ದರು. ಆದರೆ ಈ ಚಿತ್ರಸಂಸ್ಥೆ ಭಾರೀ ಪ್ರಮಾಣದಲ್ಲಿ ತೆರಿಗೆ ವಂಚನೆ ನಡೆಸಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಆದಾಯ ತೆರಿಗೆ ಇಲಾಖೆ ಈ ಸಂಬಂಧ ಹೆಚ್ಚಿನ ಮಾಹಿತಿ ಕಲೆ ಹಾಕಲು ದಾಳಿ ನಡೆಸಿದೆ.

ಬುಧವಾರ ತಾಪ್ಸಿ ಪನ್ನು, ಅನುರಾಗ್‌ ಕಶ್ಯಪ್‌, ರಿಲ​ಯನ್ಸ್‌ ಎಂಟ​ರ್‌​ಟೇ​ನ್‌​ಮೆಂಟ್‌ ಸಮೂ​ಹದ ಸಿಇಒ ಶಿಭಾಶೀಸ್‌ ಸರ್ಕಾರ್‌, ಟ್ಯಾಲೆಂಟ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆ ಕ್ವಾನ್‌ ಮೇಲೆ ದಾಳಿ ನಡೆಸಲಾಗಿದೆ.

ಇದು ರಾಜ​ಕೀಯ ಪ್ರೇರಿ​ತ:

ನಟಿ ತಾಪ್ಸಿ ಪನ್ನು ಹಾಗೂ ಕಶ್ಯಪ್‌ ನಿವಾಸ ಮತ್ತು ಕಚೇ​ರಿ​ಗಳ ಮೇಲಿನ ಐ.ಟಿ ದಾಳಿ​ಯನ್ನು ಬಿಜೆ​ಪಿಯ ರಾಜ​ಕೀಯ ಪ್ರೇರಿತ ದಾಳಿ ಎಂದು ಮಹಾ​ರಾಷ್ಟ್ರದ ಆಡ​ಳಿ​ತಾ​ರೂಢ ಕಾಂಗ್ರೆಸ್‌ ಮತ್ತು ಎನ್‌​ಸಿಪಿ ಪಕ್ಷ​ಗಳು ದೂರಿವೆ. ಬಿಜೆ​ಪಿಯ ಜನ​ವಿ​ರೋಧಿ ನಿಲು​ವು​ಗಳ ವಿರುದ್ಧ ಧ್ವನಿ​ಯೆ​ತ್ತು​ವ​ವ​ರನ್ನು ಹಣಿಯಲು ಕೇಂದ್ರೀಯ ತನಿಖಾ ಸಂಸ್ಥೆ​ಗ​ಳಾದ ಸಿಬಿಐ, ಜಾರಿ ನಿರ್ದೇ​ಶ​ನಾ​ಲಯ, ಆದಾಯ ತೆರಿಗೆ ಇಲಾ​ಖೆ​ಗ​ಳನ್ನು ಕೇಂದ್ರ ಸರ್ಕಾರ ದುರು​ಪ​ಯೋ​ಗ​ಪ​ಡಿ​ಸಿ​ಕೊ​ಳ್ಳು​ತ್ತಿದೆ ಎಂದು ಎನ್‌​ಸಿಪಿ ನಾಯಕ ನವಾಬ್‌ ಮಲಿಕ್‌ ಅಸ​ಮಾ​ಧಾನ ವ್ಯಕ್ತ​ಪ​ಡಿ​ಸಿ​ದ್ದಾರೆ. ಸತ್ಯ ಹೇಳಿದವರ ಬಾಯಿ ಮುಚ್ಚಿಸಲು ಇದು ಕೇಂದ್ರ ಸರ್ಕಾರ ಒತ್ತಡ ಹೇರುವ ತಂತ್ರದ ಭಾಗ ಎಂದು ಕಾಂಗ್ರೆಸ್‌ ನಾಯಕ ಅಶೋಕ್‌ ಚವ್ಹಾಣ್‌ ಟೀಕಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಿಜೆಪಿ ಪ್ರತಿಭಟನೆ ಬೆನ್ನಲ್ಲೇ ಪಂಜಾಬ್ ರೈತ ಸಂಘಟನೆಗಳು ದೆಹಲಿಗೆ ನುಗ್ಗಲು ಯತ್ನ; ಶುಂಭು ಗಡಿ ಬಂದ್, ಹೈಅಲರ್ಟ್
India Latest News Live: ಸಿಜೆಪಿ ಪ್ರತಿಭಟನೆ ಬೆನ್ನಲ್ಲೇ ಪಂಜಾಬ್ ರೈತ ಸಂಘಟನೆಗಳು ದೆಹಲಿಗೆ ನುಗ್ಗಲು ಯತ್ನ; ಶುಂಭು ಗಡಿ ಬಂದ್, ಹೈಅಲರ್ಟ್