ತಿರುಪತಿ ಹೋಟೆಲ್‌ಗಳಿಗೆ ಬಾಂಬ್‌ ಬೆದರಿಕೆ, ತಮಿಳುನಾಡು ಸಿಎಂ ಭಾಗಿ ಎಂಬ ಸಂದೇಶ

By Kannadaprabha NewsFirst Published Oct 26, 2024, 8:32 AM IST
Highlights

ತಿರುಪತಿಯ 3 ಹೋಟೆಲ್‌ಗಳಿಗೆ ಬಾಂಬ್‌ ಬೆದರಿಕೆ ಇ-ಮೇಲ್‌ ಮೂಲಕ ಬಂದಿದ್ದು, ತಮಿಳುನಾಡು ಸಿಎಂ ಕೂಡ ಭಾಗಿಯಾಗಿದ್ದಾರೆ ಎಂದು ಸಂದೇಶದಲ್ಲಿ ಉಲ್ಲೇಖಿಸಲಾಗಿದೆ. ಪೊಲೀಸರು ಶೋಧ ನಡೆಸಿದ್ದು, ಹುಸಿ ಬೆದರಿಕೆ ಎಂದು ಖಚಿತಪಟ್ಟಿದೆ.

ತಿರುಪತಿ: ವಿಮಾನ ಸ್ಫೋಟದ ಸರಣಿ ಬೆದರಿಕೆ ನಡುವೆಯೇ ಇದೀಗ ಆಂಧ್ರಪ್ರದೇಶದ ತಿರುಪತಿ ದೇವಸ್ಥಾನ ಸಮೀಪದ 3 ಹೋಟೆಲ್‌ಗಳಿಗೆ ಇ-ಮೇಲ್‌ ಮೂಲಕ ಗುರುವಾರ ಬಾಂಬ್‌ ಬೆದರಿಕೆ ಒಡ್ಡಿದ ಘಟನೆ ನಡೆದಿದೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಶೋಧ ನಡೆಸಿದ್ದು ಬಳಿಕ ಇದೊಂದು ಹುಸಿ ಬೆದರಿಕೆ ಎಂದು ಖಚಿತಪಟ್ಟಿದೆ.

ಲೀಲಾ ಮಹಲ್‌, ಕಪಿಲಾ ತೀರ್ಥಂ ಹಾಗೂ ಅಲೀಪೀರಿ ಪ್ರದೇಶದ 3 ಖಾಸಗಿ ಹೋಟೆಲ್‌ಗಳಿಗೆ, ‘ಈ ಹೋಟೆಲ್‌ಗಳಲ್ಲಿ ಸುಧಾರಿತ ಇಡಿ ಸ್ಫೋಟಕಗಳನ್ನು ಪಾಕ್‌ನ ಐಎಸ್‌ಐ ಸಕ್ರಿಯಗೊಳಿಸಲಿದ್ದು, ರಾತ್ರಿ 11ರೊಳಗೆ ಜಾಗ ಖಾಲಿ ಮಾಡಿ. ತಮಿಳುನಾಡು ಸಿಎಂ ಕೂಡ ಇದರಲ್ಲಿ ಭಾಗಿಯಾಗಿದ್ದಾರೆ’ ಎಂಬ ಸಂದೇಶವನ್ನು ಅ.24ರ ಸಂಜೆ ರವಾನಿಸಲಾಗಿತ್ತು.

Latest Videos

ಮತ್ತೆ 79 ವಿಮಾನಗಳಿಗೆ ಹುಸಿಬಾಂಬ್‌ ಬೆದರಿಕೆ: ಕಿಡಿಗೇಡಿಗಳ ಕೃತ್ಯಕ್ಕೆ 600 ಕೋಟಿ ನಷ್ಟ!

ಜೊತೆಗೆ, ‘ಡಿಎಂಕೆಯ ಜಾಫರ್‌ ಸಾದಿಕ್‌ ಬಂಧನದಿಂದ ಅಂತಾರಾಷ್ಟ್ರೀಯ ಒತ್ತಡವೂ ಹೆಚ್ಚಿದ್ದು, ಈ ಪ್ರಕರಣದಲ್ಲಿ ಸಿಎಂ ಸ್ಟಾಲಿನ್‌ ಪರಿವಾರದ ಪಾತ್ರದ ಕಡೆಯಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಇಂತಹ ಸ್ಫೋಟಗಳು ಅಗತ್ಯ’ ಎಂದೂ ಬರೆಯಲಾಗಿತ್ತು. ಡಿಎಂಕೆ ನಾಯಕ ಸಾದಿಕ್‌ನನ್ನು ಮಾದಕವಸ್ತು ಸಾಗಣೆ ಪ್ರಕರಣದಲ್ಲಿ ಫೆಬ್ರವರಿಯಲ್ಲಿ ಬಂಧಿಸಲಾಗಿತ್ತು.

ವಿಮಾನಗಳಿಗೆ ಹುಸಿ ಬಾಂಬ್‌ ಬೆದರಿಕೆ : ಕಠಿಣ ಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಸೂಚನೆ

click me!