
ಶ್ರೀನಗರ(ಮೇ.23): ಕೊರೋನಾ ಲಸಿಕೆ ಹಾಕಿಸಿಕೊಂಡ 120 ವರ್ಷದ ಕಾಶ್ಮೀರಿ ವೃದ್ಧೆ ಲಸಿಕೆ ಹಾಕಿಸಿಕೊಂಡ ಮೇಲೆ ಯಾರೂ ನನ್ನನ್ನು ಅಭಿನಂದಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಜಮ್ಮುಕಾಶ್ಮೀರದ ಉಧಾಮ್ಪುರ ಜಿಲ್ಲೆಯ ದುಡು ಗ್ರಾಮದ ಧೋಲಿ ದೇವಿಗೆ 120 ವರ್ಷ.
ದುಡು ಉಪವಿಭಾಗದ ಕಟಿಯಾಸ್ನಲ್ಲಿ ವಾಸಿಸುವ ಧೋಲಿ ಈ ಬಗ್ಗೆ ಪ್ರತಿಕ್ರಿಯಿಸಿ, ವ್ಯಾಕ್ಸಿನ್ ಪಡೆಯುವುದು ಸುರಕ್ಷಿತ, ನನಗೆ ಒಳ್ಳೆಯ ಅನುಭವ ಆಯಿತು. ಹಾಗಾದ್ರೆ ಎಲ್ರೂ ಯಾಕೆ ತಗೊಳ್ಬಾರ್ದು ? ಎಂದು ಪ್ರಶ್ನಿಸಿದ್ದಾರೆ.
ಆಸ್ಪತ್ರೆಗೆ ಹೋಗಿದ್ದೆ ಎಂದು ವ್ಯಕ್ತಿಯ ಕಳ್ಳಾಟ, ಬೆಂಝ್ ಕಾರು ಸೀಜ್..!
ಮಾಸ್ಕ್ ಹಾಕ್ಕೊಂಡು ಸ್ಟ್ರೆಸ್ ಅನುಭವಿಸುತ್ತಾ, ಮನೆಯಿಂದ ಹೊರ ಬಾರದೆ, ಕೊರೋನಾ ರೂಲ್ಸ್ ಅನುಸರಿಸಿಕೊಂಡಿರುವ ಜೊತೆಗೆ ವ್ಯಾಕ್ಸೀನ್ ಪಡೆಯುವ ಅಗತ್ಯ ಎಂದಿದ್ದಾರೆ.
ಈ ಪ್ರದೇಶವನ್ನು ಕಟಿಯಾ ಎನ್ನುತ್ತಾರೆ. ಇದು ಒಂದು ಪ್ರತ್ಯೇಕ ಸ್ಥಳ. ಮುಖ್ಯ ಸ್ಥಳ ತಲುಪಲು ಒಂದು ದಿನ ಬೇಕು. 120 ವರ್ಷದ ನಮ್ಮ ತಾಯಿ ಅವರೇ ಲಸಿಕೆ ಹಾಕಿಸಿಕೊಂಡರು. ಎಲ್ಲರೂ ಕೊರೋನಾದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಆಕೆಯನ್ನು ಉದಾಹರಣೆಯನ್ನಾಗಿ ತೆಗೆದುಕೊಳ್ಳಬೇಕು. ಆಕೆ ಆರಾಮವಾಗಿದ್ದಾಳೆ, ಯಾವುದೇ ಕಾಂಪ್ಲಿಕೇಷನ್ಸ್ ಇಲ್ಲ ಎಂದು ಧೋಲಿ ದೇವಿಯ ಸಂಬಂಧಿ ಶಂಭು ರಾಮ್ ಹೇಳಿದ್ದಾರೆ.
ರಾಜ್ಯದ ಸೋಂಕಿತರಿಗೆ NRI ವೈದ್ಯರ ಫೋನ್ ಟ್ರೀಟ್ಮೆಂಟ್!
ಅಜ್ಜಿ ವ್ಯಾಕ್ಸೀನ್ ಪಡೆದು ಯಾವುದೇ ಅಡ್ಡ ಪರಿಣಾಮ ಇಲ್ಲ ಎಂದಿದ್ದಾರೆ ಎಂದು ಧೋಲಿ ಅವರ ಮೊಮ್ಮಗ ಪ್ರದೀಪ್ ಕುಮಾರ್ ಹೇಳಿದ್ದಾರೆ. 120 ವರ್ಷದ ವೃದ್ಧೆಗೆ ಲಸಿಕೆ ಪಡೆದು ಯಾವುದೇ ಸಮಸ್ಯೆಯಾಗದಿದ್ದರೆ, ಮತ್ಯಾರೂ ಭಯಪಡಬೇಕಾಗಿಲ್ಲ ಎಂದಿದ್ದಾರೆ. ಉತ್ತರ ಸೇನೆ ಕಮಾಂಡರ್ ಲೆ. ಜನರಲ್ ಯೋಗೇಶ್ ಕುಮಾರ್ ಜೋಶಿ ಜನರಿಗೆ ಪ್ರೇರಣೆಯಾಗಿದ್ದಕ್ಕೆ ಧೋಲಿಯವರನ್ನು ಅಭಿನಂದಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ