ದೆಹಲಿ ಗಡಿಯಲ್ಲಿ ಇಟ್ಟಿಗೆಯ ಕಟ್ಟಡ ನಿರ್ಮಿಸಿದ ಪ್ರತಿಭಟನಾನಿರತ ರೈತರು!

Published : Mar 13, 2021, 12:09 PM IST
ದೆಹಲಿ ಗಡಿಯಲ್ಲಿ ಇಟ್ಟಿಗೆಯ ಕಟ್ಟಡ ನಿರ್ಮಿಸಿದ ಪ್ರತಿಭಟನಾನಿರತ ರೈತರು!

ಸಾರಾಂಶ

ಕೇಂದ್ರದ ಕೃಷಿ ಕಾಯ್ದೆ ವಿರುದ್ಧ ಅನ್ನದಾನ ಹೋರಾಟ| ದೀರ್ಘ ಕಾಲದ ಹೋರಾಟಕ್ಕೆ ರೈತರು ಸಜ್ಜು| ಟ್ರಾಲಿಗಳನ್ನು ಊರಿಗೆ ಕಳುಹಿಸಿ, ಕಟ್ಟಡ ನಿರ್ಮಿಸಿದ ರೈತರು

ನವದೆಹಲಿ(ಮಾ.13): ಕೇಂದ್ರ ಸರ್ಕಾರದ ಕೃಷಿ ಕಾನೂನಿನ ವಿರುದ್ಧ ರೈತ ಪ್ರತಿಭಟನೆ ದೀರ್ಘ ಕಾಲ ನಡೆಯುವ ಮುನ್ಸೂಚನೆ ಲಭಿಸಿದೆ. ಸದ್ಯ ದೆಹಲಿಯ ಟೀಕರೀ ಬಾರ್ಡರ್‌ನಲ್ಲಿ ರೈತರು ಮನೆಗಳನ್ನು ನಿರ್ಮಿಸಲಾರಮಭಿಸಿದ್ದಾರೆ. ಅನೇಕ ಕಡೆ ಇಟ್ಟಿಗೆ ಹಾಗೂ ಸಿಮೆಂಟ್‌ ಕೂಡಾ ಬಳಸುತ್ತಿದ್ದರೆ, ಇನ್ನು ಕೆಲವೆಡೆ ಮಣ್ಣಿನಿಂದ ಇಟ್ಟಿಗೆಗಳನ್ನು ಜೊಡಿಲಾಗುತ್ತಿದೆ. ಸುಮಾರು ಹನ್ನೆರಡಕ್ಕೂ ಹೆಚ್ಚು ಮನೆಗಳು ಸದ್ಯ ತಯಾರಾಗಿವೆ. 

ಇನ್ನು ಹವಾಮಾನ ಬದಲಾಗುತ್ತಿದೆ ಹೀಗಾಗಿ ಇವುಗಳನ್ನು ನಿರ್ಮಿಸಿದ್ದೇವೆ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ತಾವಿದ್ದ ಟ್ರೋಲಿಗಳನ್ನು ಊರಿಗೆ ಕಳುಹಿಸುತ್ತಿದ್ದೇವೆ. ಹೀಗಾಗಿ ಇದನ್ನು ನಿರ್ಮಿಸಿದ್ದೇವೆ ಎಂದು ಉತ್ತರಿಸಿದ್ದಾರೆ. ಇನ್ನು ಹಲವೆಡೆ ಇಟ್ಟಿಗೆ, ಮಣ್ಣು ರಾಶಿ ಹಾಕಲಾಗಿದೆ. ಇಲ್ಲಿ ರೈತರೇ ಕೂಲಿ ಕಾರ್ಮಿಕರಂತೆ ದುಡಿಯುತ್ತಿದ್ದು, ಅವರೇ ಇದನ್ನು ನಿರ್ಮಿಸುತ್ತಿದ್ದಾರೆ. 

ಈ ಕಟ್ಟಡಗಳ ನಿರ್ಮಾಣವೇಕೆ?

ಹಳ್ಳಿಗಳಲ್ಲಿ ಗೋಧಿ ಕಟಾವಿಗೆ ಬಂದಿದೆ. ಹೀಗಾಗಿ ಅಲ್ಲಿ ಟ್ರ್ಯಾಕ್ಟರ್ ಟ್ರಾಲಿ ಅಗತ್ಯವಿದೆ. ಈವರೆಗೆ ಟ್ರೋಲಿಯಲ್ಲಿ ಉಳಿದುಕೊಂಡಿದ್ದೆವು, ಈಗ ಅದನ್ನು ಹಳ್ಳಿಗೆ ಕಳುಹಿಸಿಕೊಟ್ಟಾಗ ನಾವು ಎಲ್ಲಿ ಉಳಿದುಕೊಳ್ಳುವುದು? ಹೀಗಾಗಿ ಈ ಕಟ್ಟಡಗಳನ್ನು ನಿರ್ಮಿಸುತ್ತಿದ್ದೇವೆ ಎಂದಿದ್ದಾರೆ. ಪ್ರತಿ ಕಟ್ಟಡ ನಿರ್ಮಾಣಕ್ಕೂ ಇಪ್ಪತ್ತರಿಂದ ಮೂವತ್ತು ಸಾವಿರ ರೂಪಾಯಿ ಮೊತ್ತ ತಗುಲಬಹುದೆನ್ನಲಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದೇಶದ ಮೊದಲ ಹೈಡ್ರೋಜನ್‌ ಚಾಲಿತ ವಾಟರ್‌ ಟ್ಯಾಕ್ಸಿ ವಾರಾಣಸಿಯಲ್ಲಿ ಶುರು
ಆರೋಪ ಸಾಬೀತು : ಪಾಕ್‌ ಐಎಸ್‌ಐ ಮಾಜಿ ಮುಖ್ಯಸ್ಥ ಹಮೀದ್‌ಗೆ 14 ವರ್ಷ ಜೈಲು