
ತಿರುವನಂತಪುರಂ(ಜ.11): ಇಸ್ಲಾಂ ಧರ್ಮವನ್ನು ತೊರೆಯುವ ಮುಸ್ಲಿಮರಿಗಾಗಿ ಕೇರಳದಲ್ಲಿ ಹೊಸದಾಗಿ ಸಂಘಟನೆಯೊಂದು ಆರಂಭವಾಗಿದೆ. ಇದಕ್ಕೆ ‘ಕೇರಳದ ಮಾಜಿ ಮುಸ್ಲಿಮರು’ ಎಂದು ನಾಮಕರಣ ಮಾಡಲಾಗಿದ್ದು, ಇಸ್ಲಾಂ ಧರ್ಮದ ಆಚರಣೆಯನ್ನು ತೊರೆಯುವ ಮುಸ್ಲಿಮರಿಗೆ ಸಹಾಯ ಮಾಡಲು ಸ್ಥಾಪಿಸಲಾಗಿದೆ. ಜ.9ರಂದು ಈ ಸಂಘಟನೆಯಿಂದ ‘ಮಾಜಿ ಮುಸ್ಲಿಂ ದಿನ’ ಆಚರಣೆ ಮಾಡಲಾಗುತ್ತದೆ.
ಈ ಸಂಘಟನೆಯ ಅಧ್ಯಕ್ಷರಾಗಿರುವ ಲಿಯಾಕತ್ತಲಿ ಸಿ.ಎಂ. ಅವರು, ‘ಇದು ಭಾರತದಲ್ಲಿ ಈ ರೀತಿಯಾಗಿ ಆರಂಭವಾದ ಮೊದಲ ಸಂಘಟನೆ, ಈ ಸಂಘಟನೆಯ ಸದಸ್ಯತ್ವಕ್ಕಾಗಿ ನಾವು 10 ಜನರ ಕಾರ್ಯಕಾರಿ ಮಂಡಳಿಯನ್ನು ಸ್ಥಾಪಿಸಿದ್ದೇವೆ. ಈಗಾಗಲೇ ಇಸ್ಲಾಂ ತೊರೆದ 300 ಜನರನ್ನು ನಾವು ಗುರುತಿಸಿದ್ದೇವೆ. ಭಾರತದಲ್ಲಿ ಹಲವು ಮುಸ್ಲಿಮರು ಧರ್ಮ ತೊರೆದಿದ್ದಾರೆ. ಆದರೆ ಅದನ್ನು ಹೇಳಿಕೊಳ್ಳಲು ಭಯಪಡುತ್ತಿದ್ದಾರೆ. ಅಂತಹವರಿಗೆ ಸಹಾಯ ಮಾಡಲು ಈ ಸಂಘಟನೆ ಸ್ಥಾಪಿಸಲಾಗಿದೆ’ ಎಂದು ಹೇಳಿದ್ದಾರೆ.
2 ವರ್ಷದ ಹಿಂದೆ ಇಸ್ಲಾಂ ತೊರೆದ ಲಿಯಾಕತ್ತಲಿ, ಅಂದಿನಿಂದಲೂ ಇಸ್ಲಾಂ ತೊರೆಯುವ ಜನರಿಗೆ ಸಹಕಾರ ನೀಡುತ್ತಿದ್ದಾರೆ. ಜ.9ರಂದು ಮಾಜಿ ಮುಸ್ಲಿಂ ದಿನ ಆಚರಿಸುವ ಮೂಲಕ ಜನರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ