ಲಡಾಖ್‌ನಲ್ಲಿ ಕೆಚ್ಚೆದೆಯ ಹೋರಾಟ ನೀಡಿದ ಬಿಹಾರ್ ರಿಜಿಮೆಂಟ್‌ಗೆ ಮೋದಿ ಸಲಾಂ!

Suvarna News   | Asianet News
Published : Jun 20, 2020, 03:19 PM ISTUpdated : Jun 20, 2020, 04:03 PM IST
ಲಡಾಖ್‌ನಲ್ಲಿ ಕೆಚ್ಚೆದೆಯ ಹೋರಾಟ ನೀಡಿದ ಬಿಹಾರ್ ರಿಜಿಮೆಂಟ್‌ಗೆ ಮೋದಿ ಸಲಾಂ!

ಸಾರಾಂಶ

ಬಿಹಾರದಲ್ಲಿ ಗರೀಬ್ ಕಲ್ಯಾಣ ರೋಜ್‌ಗಾರ್ ಅಭಿಯಾನಕ್ಕೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ಭಾರತೀಯ ಸೇನೆಯಲ್ಲಿ ಬಿಹಾರ ಜನತೆಯ ಬಲಿದಾನವನ್ನು ಕೊಂಡಾಡಿದ್ದಾರೆ. ಪ್ರತಿಯೊಬ್ಬ ಬಿಹಾರಿಗೆ ಇದು ಹೆಮ್ಮೆ ಎಂದಿದ್ದಾರೆ. ಪ್ರಧಾನಿ ಮೋದಿ ಮಾತುಗಳ ವಿವರ ಇಲ್ಲಿದೆ.

ಬಿಹಾರ(ಜೂ.20): ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ರೋಜ್‌ಗಾರ್ ಅಭಿಯಾನಕ್ಕೆ ಬಿಹಾರದಲ್ಲಿ ಚಾಲನೆ ನೀಡಲಾಗಿದೆ. ಮಹತ್ವಾಂಕ್ಷಿ ಅಭಿಯಾನಕ್ಕೆ ಚಾಲನೆ ನೀಡಿದ ಮೋದಿ ಪ್ರಮುಖವಾಗಿ ಭಾರತೀಯ ಸೇನೆಯ ಬಿಹಾರ್ ರಿಜಿಮೆಂಟ್ ಕುರಿತು ಮಾತನಾಡಿದ್ದಾರೆ. ಲಡಾಖ್‍‌ನಲ್ಲಿ ಚೀನಾ ಸೇನೆ ವಿರುದ್ಧ ಭಾರತಯೀ ಸೇನೆ ದಿಟ್ಟ ಹೋರಾಟ ನೀಡಿದೆ. ಅದರಲ್ಲೂ ಸೇನೆಯ ಬಿಹಾರ್ ರಿಜಿಮೆಂಟ್ ಕೆಚ್ಚೆದೆಯ ಹೋರಾಟಕ್ಕೆ ಸಲಾಂ ಹೇಳಿದ್ದಾರೆ.

"

ಚೀನಾ ಅಡ್ಡಿ ನಡುವೆಯೂ ಗಲ್ವಾನ್‌ ಸೇತುವೆ ಪೂರ್ಣ!..

ಗಲ್ವಾನ್ ಕಣಿವೆಯಲ್ಲಿ ಬಿಹಾರ್ ರಿಜೆಮೆಂಟ್ ಹೋರಾಟ ನೀಡಿತ್ತು. ಭಾರತದ ನೆಲಕ್ಕಾಗಿ ತಮ್ಮ ಪ್ರಾಣ ಲೆಕ್ಕಿಸಿದ ಹೋರಾಟ ಮಾಡಿ ಹುತಾತ್ಮರಾಗಿದ್ದಾರೆ. ಬಿಹಾರ್ ರಿಜಿಮೆಂಟ್ ತ್ಯಾಗ, ಬಲಿದಾನಕ್ಕೆ ನಮ್ಮ ಸಲಾಂ. ಇಷ್ಟೇ ಅಲ್ಲ ಪ್ರತಿಯೊಬ್ಬ ಬಿಹಾರಿ ಕೂಡ ಬಿಹಾರ್ ರಿಜಿಮೆಂಟ್ ಕುರಿತು ಹೆಮ್ಮೆ ಪಡಬೇಕಾದ ವಿಚಾರ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

‘ಬಾಯ್ಕಾಟ್‌’ ಅಭಿಯಾನ ಯಶಸ್ವಿಯಾದ್ರೆ 5.6 ಲಕ್ಷ ಕೋಟಿ ನಷ್ಟ, ಚೀನಾಕ್ಕೆ ಬಹಿಷ್ಕಾರ ಭೀತಿ!.

ಕೊರೋನಾ ವೈರಸ್ ವಿರುದ್ಧ ಪ್ರತಿ ಹಳ್ಳಿ ಜನರು ಹೋರಾಟ ಮಾಡಿದ್ದಾರೆ. ಇದು ಇತರರಿಗೂ ಮಾದರಿಯಾಗಿದೆ. ಬಿಹಾರದ ಜನತಗೆ ತಾಳ್ಮೆ ಹಾಗೂ ಸಂಘಟಿತ ಹೋರಾಟಕ್ಕೆ ಧನ್ಯವಾದ. ಈ ವಿಶೇಷ ಗುಣದಿಂದಲೇ ಭಾರತೀಯ ಸೇನೆಯ ಬಿಹಾರ್ ರಿಜಿಮೆಂಟ್ ಕುರಿತು ಬಿಹಾರಿಗಳು ಹೆಮ್ಮ ಪಡಬೇಕು.  ವಿಶೇಷವಾಗಿ ಗರೀಬ್ ಕಲ್ಯಾಣ ರೋಜ್‌ಗಾರ್ ಸಂಕಷ್ಟದಲ್ಲಿ ಜನರಿಗೆ ನೆರವಾಗಿದೆ. ಇದೀಗ ಜನರಿಗೆ ಮತ್ತಷ್ಟು ಆರ್ಥಿಕ ಶಕ್ತಿ ನೀಡಲಿದೆ ಎಂದು ಪ್ರಧಾನಿ ಹೇಳಿದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!