ಪರಾರಿ ಆಗಿದ್ದ ಕೈದಿ, ಮೋಹನ್‌ಲಾಲ್‌-ಬಚ್ಚನ್‌ ಜತೆ ಸಿನಿಮಾದಲ್ಲಿ ನಟನೆ! 12 ವರ್ಷಗಳಲ್ಲಿ 12 ಹೆಸರು

Published : May 27, 2026, 09:00 AM IST
Amitab Mohan Lal

ಸಾರಾಂಶ

ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿಯೊಬ್ಬ, ಪರೋಲ್ ಮೇಲೆ ಪರಾರಿಯಾಗಿ 12 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ. ಈ ಅವಧಿಯಲ್ಲಿ, ಆತ ಹಲವು ಹೆಸರುಗಳನ್ನು ಬದಲಿಸಿಕೊಂಡು ಅಮಿತಾಭ್ ಬಚ್ಚನ್ ಮತ್ತು ಮೋಹನ್‌ಲಾಲ್ ಅವರಂತಹ ಖ್ಯಾತ ನಟರೊಂದಿಗೆ ಸಿನಿಮಾಗಳಲ್ಲಿ ನಟಿಸಿದ್ದ. 12 ವರ್ಷಗಳ ನಂತರ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನವದೆಹಲಿ: ಕೊಲೆ ಕೇಸಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿಯೊಬ್ಬ ಪರೋಲ್‌ ಪಡೆದು ಬಿಡುಗಡೆ ಬಳಿಕ ಪರಾರಿಯಾಗಿ ನಂತರ 12 ವರ್ಷದ ಅವಧಿಯಲ್ಲಿ 3000 ವೇದಿಕೆ ಕಾರ್ಯಕ್ರಮ ಮಾತ್ರವಲ್ಲದೇ, ಖ್ಯಾತ ನಟರಾದ ಅಮಿತಾಭ್‌ ಬಚ್ಚನ್‌, ಮೋಹನ್‌ಲಾಲ್‌ ಅವರ ಚಿತ್ರಗಳಲ್ಲೂ ನಟಿಸಿದ್ದ ರೋಚಕ ಪ್ರಕರಣವೊಂದು ಬೆಳಕಿಗೆ ಬಂದಿದೆ. ಹೀಗೆ ತೆರೆಯ ಹಿಂದೆ ನಾನಾ ಆಟವಾಡಿದ್ದ ಹೇಮಂತ್‌ ಮೋದಿ ಎಂಬಾತನನ್ನು ಪೊಲೀಸರು 12 ವರ್ಷಗಳ ಬಳಿಕ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗುಜರಾತ್‌ನ ಹೇಮಂತ್‌ ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಗೆ ಗುರಿ 2014ರಲ್ಲಿ 30 ದಿನ ಪರೋಲ್‌ ಪಡೆದಿದ್ದ. ಆ ಬಳಿಕ ಹಿಂದಿರುಗಿರಲಿಲ್ಲ. ಪೊಲೀಸರು ಎಷ್ಟೇ ಹುಡುಕಿದರೂ ಸಿಕ್ಕಿರಲಿಲ್ಲ.

ನಾನಾ ನಾಮ, ಚಿತ್ರಗಳಲ್ಲಿ ನಟನೆ

ಜೈಲಿನಿಂದ ಪರಾರಿಯಾಗಿದ್ದ 12 ವರ್ಷಗಳಲ್ಲಿ 12 ಹೆಸರು ಬದಲಿಸಿಕೊಂಡಿದ್ದ. ಹೇಮಂತ್ ನಗಿಂದಾಸ್ ಪುರುಷೋತ್ತಮದಾಸ್ ಮೋದಿ ಎಂದಿದ್ದ ಈತ ಸ್ಪಂದನ್‌ ಮೋದಿ, ಸ್ಪಂದನ್‌ ವ್ಯಾಸ್‌, ಸ್ಪಂದನ್‌ ಜೋಶಿ, ಸ್ಪಂದನ್‌ ಕುಮಾರ್‌, ಹೇಮಾಂಗ್ ವ್ಯಾಸ್‌ ಹೀಗೆ ಹಲವು ಹೆಸರುಗಳನ್ನು ಕಾಣಿಸಿಕೊಂಡಿದ್ದನು. ಅದಕ್ಕೆ ತಕ್ಕಂತೆ ವೇಷಭೂಷಣಗಳನ್ನು ಬದಲಿಸಿಕೊಂಡು ಸಿನಿಮಾಗಳಲ್ಲಿಯೂ ನಟಿಸುವ ಅವಕಾಶ ಪಡೆದಿದ್ದನು. ಅಲ್ಲದೇ ಅನುಕೂಲಕ್ಕೆ ತಕ್ಕಂತೆ ತನ್ನ ಜಾತಿಯನ್ನೂ ಬದಲಿಸಿಕೊಂಡಿದ್ದನು.

ಇದನ್ನೂ  ಓದಿ: ಈ ವರ್ಷದ ಬಹು ನಿರೀಕ್ಷಿತ ಕನ್ನಡ ಸಿನಿಮಾ; ಯಾವ ಸಿನಿಮಾಗೆ ನೀವು ಕಾಯುತ್ತಿದ್ದೀರಿ?

10ಕ್ಕೂ ಅಧಿಕ ಸಿನಿಮಾಗಳಲ್ಲಿ ನಟನೆ

ಆತ ಥಗ್ಸ್‌ ಆಫ್‌ ಹಿಂದೂಸ್ಥಾನ್‌, ಜಯೇಶ್‌ಭಾಯ್‌ ಜೋರ್ಧಾರ್‌, ಎಲ್‌- 2 ಎಂಪುರಾನ್‌ನಂತಹ ಜನಪ್ರಿಯ ಸಿನಿಮಾಗಳಲ್ಲಿ ಅಭಿನಯಿಸಿದ್ದನು. ಒಟ್ಟಾರೆ ಹಿಂದಿಯಲ್ಲಿ 6, ಮಲಯಾಳಂ 1, ಗುಜರಾತಿಯಲ್ಲಿ 10 ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದನು. ಮಾತ್ರವಲ್ಲದೇ ಟೀವಿ ಧಾರವಾಹಿ, ನಾಟಕ, ಕಿರುಚಿತ್ರ, ವೆಬ್‌ ಸಿರೀಸ್‌ , 3000 ಕ್ಕೂ ಹೆಚ್ಚು ವೇದಿಕಾ ಕಾರ್ಯಕ್ರಮಗಳಲ್ಲಿಯೂ ಕಾಣಿಸಿಕೊಂಡಿದ್ದನು. ಅಮಿತಾಭ್ ಬಚ್ಚನ್‌, ಅಮೀರ್ ಖಾನ್‌, ರಣ್‌ವೀರ್‌ ಸಿಂಗ್‌, ಮೋಹನ್‌ ಲಾಲ್‌ ಸೇರಿದಂತೆ ಖ್ಯಾತನಾಮರ ಜತೆ ನಟಿಸಿ, ಸಿಕ್ಕಿ ಬೀಳದಂತೆ ದಿನ ಕಳೆಯುತ್ತಿದ್ದನು.

ಆದರೆ ಆತನ ಕೈ ಮೇಲಿದ್ದ ಹಚ್ಚೆ ಪೊಲೀಸರಿಗೆ ಬಂಧಿಸುವಲ್ಲಿ ಸಾಕ್ಷಿಯಾಗಿತ್ತು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: 'ಲೋ ನವೀನ' ಸಿನಿಮಾ ವೀಕ್ಷಿಸಿದ ಅಶ್ವಿನಿ ಪುನೀತ್ ರಾಜ್‌ಕುಮಾರ್: ನವೀನ್ ಸಜ್ಜುಗೆ ಹೇಳಿದ ಮಾತು ವೈರಲ್!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನಿನ್ನೆ ಕೇರಳ ಪ್ರವೇಶಿಸಬೇಕಿದ್ದ ಮುಂಗಾರು ಮಾರುತ ನಾಪತ್ತೆ; ಮೇ 26ಕ್ಕೆ ಪ್ರವೇಶ ಎಂದಿದ್ದ ಇಲಾಖೆ
DK Shivakumar: ದೆಹಲಿ ಹೈವೋಲ್ಟೇಜ್ ಸಭೆ ಬಳಿಕ ಎಲ್ಲವೂ ಸಸ್ಪೆನ್ಸ್! ಸಿದ್ದು ರಾತ್ರಿಯೇ ವಾಪಸಾದ್ರೂ ಡಿಕೆಶಿ ದೆಹಲಿಯಲ್ಲೇ ಉಳಿದಿರುವುದೇಕೆ?