
ಚಾಯ್ಬಾಸಾ (ಜಾರ್ಖಂಡ): ಕಾಡಿನಿಂದ ತಪ್ಪಿಸಿಕೊಂಡು ಬಂದ ಪುಂಡಾನೆಯೊಂದು 2 ದಿನಗಳ ಅವಧಿಯಲ್ಲಿ 13 ಜನರನ್ನು ಬಲಿತೆಗೆದುಕೊಂಡು, ನಾಲ್ವರನ್ನು ಗಾಯಗೊಳಿಸಿದ ಘಟನೆ ಜಾರ್ಖಂಡದ ಪಶ್ಚಿಮ ಸಿಂಗಭೂಮ್ ಜಿಲ್ಲೆಯಲ್ಲಿ ನಡೆದಿದೆ.
‘ಆನೆ ಜ.5ರಂದು ಕೊಲ್ಹನ್ ಪ್ರದೇಶದಲ್ಲಿ ಒಂದೇ ಕುಟುಂಬದ ಮೂವರು ಸೇರಿದಂತೆ ಒಟ್ಟು 7 ಜನರ ಜೀವ ತೆಗೆದಿದೆ. ಜ.6ರಂದು ನೋವಾಮುಂಡಿ ಮತ್ತು ಹಟಗಮಾರಿಯಾ ಪ್ರದೇಶದಲ್ಲಿ 6 ಜನರನ್ನು ಬಲಿಪಡೆದುಕೊಂಡಿದೆ.
ದಾಳಿಯಿಂದಾಗಿ ಜಂಬೊ, ಚೈಬಾಸಾದ 4 ಮಂದಿ ಗಾಯಗೊಂಡಿದ್ದಾರೆ’ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಆನೆಯನ್ನು ಹಿಡಿದು ಕಾಡಿಗೆ ಬಿಡುವ ಪ್ರಯತ್ನಗಳು ನಡೆದಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ