ಮೈನಿಂಗ್‌ ದಿಗ್ಗಜ, ವೇದಾಂತ ಚೇರ್ಮನ್‌ ಅನಿಲ್‌ ಅಗರ್ವಾಲ್‌ಗೆ ಪುತ್ರ ವಿಯೋಗ, 49ನೇ ವಯಸ್ಸಿಗೆ ಸಾವು ಕಂಡ ಏಕೈಕ ಪುತ್ರ ಅಗ್ನಿವೇಶ್‌!

Published : Jan 07, 2026, 10:52 PM ISTUpdated : Jan 07, 2026, 10:57 PM IST
Anil Agarwal son Agnivesh Death

ಸಾರಾಂಶ

ವೇದಾಂತ ಅಧ್ಯಕ್ಷ ಅನಿಲ್ ಅಗರ್ವಾಲ್ ಅವರು ತಮ್ಮ ಮಗ ಅಗ್ನಿವೇಶ್ (49) ಅಮೆರಿಕದಲ್ಲಿ ಹೃದಯಾಘಾತದಿಂದ ನಿಧನರಾದರು ಎಂದು ಘೋಷಿಸಿದ್ದಾರೆ. ಇದು ತಮ್ಮ ಜೀವನದ ಅತ್ಯಂತ ಕರಾಳ ದಿನ ಎಂದು ಕರೆದಿದ್ದಾರೆ. 

ಬೆಂಗಳೂರು (ಜ.7): ದೇಶದ ಅತ್ಯಂತ ಪ್ರಮುಖ ಮೈನಿಂಗ್‌ ಕಂಪನಿ ವೇದಾಂತ ಗ್ರೂಪ್‌ನ ಅಧ್ಯಕ್ಷ ಅನಿಲ್ ಅಗರ್ವಾಲ್ ಮಂಗಳವಾರ ತಮ್ಮ ಮಗ ಅಗ್ನಿವೇಶ್ ನಿಧನವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಇದೇ ವೇಳೆ ಈ ದಿನ ತಮ್ಮ ಜೀವನದ ಅತ್ಯಂತ ಕರಾಳ ದಿನ ಎಂದು ಕರೆದಿದ್ದಾರೆ. ಅಗ್ನಿವೇಶ್‌ ಅಗರ್ವಾಲ್, ಅನಿಲ್‌ ಅಗರ್ವಾಲ್ ಅವರ ಏಕೈಕ ಪುತ್ರ. ಇವರಿಗೆ ಪ್ರಿಯಾ ಅಗರ್ವಾಲ್ ಹೆಸರಿನ ಪುತ್ರಿಯೂ ಇದ್ದಾರೆ. 49 ವರ್ಷದ ಅಗ್ನಿವೇಶ್‌ ಅಗರ್ವಾಲ್‌, ಇತ್ತೀಚೆಗೆ ಸ್ಕೀಯಿಂಗ್‌ ಅಪಘಾತಕ್ಕೆ ಒಳಗಾದ ನಂತರ ನ್ಯೂಯಾರ್ಕ್‌ನ ಮೌಂಟ್‌ ಸಿನಾಯ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದರೆ, ಮಂಗಳವಾರ ದಿಢೀರ್‌ ಕಾರ್ಡಿಯಾಕ್‌ ಅರೆಸ್ಟ್‌ ಆಗಿದ್ದರಿಂದ ಸಾವು ಕಂಡಿದ್ದಾರೆ.

"ತನ್ನ ಮಗುವಿಗೆ ವಿದಾಯ ಹೇಳಬೇಕಾದ ಪೋಷಕರ ನೋವನ್ನು ಯಾವುದೇ ಪದಗಳಿಂದ ವಿವರಿಸಲು ಸಾಧ್ಯವಿಲ್ಲ" ಎಂದು ಅಗರ್ವಾಲ್ ಬರೆದಿದ್ದಾರೆ. "ಒಬ್ಬ ಮಗ ತನ್ನ ತಂದೆಯ ಮುಂದೆ ಬಿಟ್ಟು ಸಾವು ಕಾಣಬಾರದು. ಈ ನಷ್ಟವು ನಾವು ಇನ್ನೂ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿರುವ ರೀತಿಯಲ್ಲಿ ನಮ್ಮನ್ನು ಛಿದ್ರಗೊಳಿಸಿದೆ' ಎಂದು ನೋವಿನಲ್ಲಿ ಬರೆದುಕೊಂಡಿದ್ದಾರೆ.

1976 ಜೂನ್ 3 ರಂದು ಪಾಟ್ನಾದಲ್ಲಿ ಜನಿಸಿದ ಅಗ್ನಿವೇಶ್ ಅಗರ್ವಾಲ್‌ ಮಧ್ಯಮ ವರ್ಗದ ಬಿಹಾರಿ ಕುಟುಂಬದಲ್ಲಿ ಬೆಳೆದರು, ಅಜ್ಮೀರ್‌ನ ಮೇಯೊ ಕಾಲೇಜಿನಲ್ಲಿ ಅಧ್ಯಯನ ಮಾಡಿದ ಬಳಿಕ ಫುಜೈರಾ ಗೋಲ್ಡ್ ಅನ್ನು ಸ್ಥಾಪಿಸಿದರು ಮತ್ತು ನಂತರ ಹಿಂದೂಸ್ತಾನ್ ಜಿಂಕ್‌ನ ಅಧ್ಯಕ್ಷರಾದರು. ಅವರ ಸಾಧನೆಗಳ ಹೊರತಾಗಿಯೂ ತಮ್ಮ ಮಗ "ಸರಳವಾಗಿ, ಆಳವಾದ ಮಾನವೀಯ ಗುಣಗಳನ್ನು ಹೊಂದಿದ್ದ ವ್ಯಕ್ತಿಯಾಗಿ ಬೆಳೆದಿದ್ದ' ಎಂದು ಹೇಳಿದ್ದಾರೆ.

ಇನ್ನು ಮುಂದೆ ಇನ್ನಷ್ಟು ಸರಳವಾಗಿ ಬದುಕುತ್ತೇನೆ

"ನನಗೆ ಅವನು ಕೇವಲ ನನ್ನ ಮಗನಲ್ಲ. ಅವನು ನನ್ನ ಸ್ನೇಹಿತ. ನನ್ನ ಹೆಮ್ಮೆ. ನನ್ನ ಪ್ರಪಂಚ" ಎಂದು ಅಗರ್ವಾಲ್ ಬರೆದಿದ್ದಾರೆ. ಅಗ್ನಿವೇಶ್ ಸ್ವಾವಲಂಬಿ ಭಾರತದಲ್ಲಿ ನಂಬಿಕೆ ಇಟ್ಟಿದ್ದರು ಮತ್ತು ಸಮಾಜಕ್ಕೆ ಮರಳಿ ನೀಡುವ ಕನಸನ್ನು ಹಂಚಿಕೊಂಡಿದ್ದರು ಎಂದು ಅವರು ಹೇಳಿದರು. "ನಾವು ಗಳಿಸುವುದರಲ್ಲಿ 75% ಕ್ಕಿಂತ ಹೆಚ್ಚು ಹಣವನ್ನು ಮರಳಿ ನೀಡುವುದಾಗಿ ನಾನು ಅಗ್ನಿಗೆ ಭರವಸೆ ನೀಡಿದ್ದೆ. ಇಂದು, ನಾನು ಆ ಭರವಸೆಯನ್ನು ಅಪ್‌ಡೇಟ್‌ ಮಾಡುತ್ತೇನೆ ಮತ್ತು ಇನ್ನೂ ಸರಳ ಜೀವನವನ್ನು ನಡೆಸಲು ಸಂಕಲ್ಪ ಮಾಡುತ್ತೇನೆ," ಎಂದು ಅವರು ಹೇಳಿದರು.

"ಬೇಟಾ, ನೀನು ನಮ್ಮ ಹೃದಯಗಳಲ್ಲಿ, ನಮ್ಮ ಕೆಲಸದಲ್ಲಿ ಮತ್ತು ನೀವು ಸ್ಪರ್ಶಿಸಿದ ಪ್ರತಿಯೊಂದು ಜೀವನದಲ್ಲಿಯೂ ಬದುಕುತ್ತೀರಿ. ನಾನು ನಿನ್ನ ಬೆಳಕನ್ನು ಮುಂದಕ್ಕೆ ಕೊಂಡೊಯ್ಯಲು ಪ್ರಯತ್ನಿಸುತ್ತೇನೆ" ಎಂದು ಅಗರ್ವಾಲ್ ಭಾವುಕವಾಗಿ ಬರೆದುಕೊಂಡಿದ್ದಾರೆ.

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Budget 2026: ಇತಿಹಾಸದಲ್ಲೇ ಮೊದಲು! ಫೆ.1ರ ಭಾನುವಾರದಂದೇ ಬಜೆಟ್ ಮಂಡನೆ, ಕಾರಣವೇನು ಗೊತ್ತಾ?
ವಾಶ್‌ರೂಮ್‌ನಲ್ಲಿ ರೊಮ್ಯಾನ್ಸ್‌ನಲ್ಲಿದ್ದಾಗ ಮಾಸ್ಟರ್‌ ಕೀ ಬಳಸಿ ರೂಮ್‌ಗೆ ಎಂಟ್ರಿ, ಲೀಲಾ ಪ್ಯಾಲೇಸ್‌ ವಿರುದ್ಧ ಕೇಸ್‌ ಹಾಕಿ ಗೆದ್ದ ಗ್ರಾಹಕ!