
ಕೋಲ್ಕತ್ತಾ(ಮೇ 14) ಮಾಡುವ ಕೆಲಸದಲ್ಲಿ ಶ್ರದ್ಧೆ ಇರಬೇಕು ಎಂಬುದಕ್ಕೆ ಈ ಪ್ರಕರಣವೇ ದೊಡ್ಡ ಉದಾಹರಣೆ. ಡೊಮಿನೋಸ್ ಪಿಜ್ಜಾ ಸಂಸ್ಥೆ ಈ ಪೋಟೋ ಶೇರ್ ಮಾಡಿಕೊಂಡಿದೆ. ನೀರು ತುಂಬಿರುವ ರಸ್ತೆ ಮಧ್ಯೆ ಡಿಲೆವರಿ ಬಾಯ್ ಗ್ರಾಹಕರಿಗೆ ನೀಡಬೇಕಾದ ಪಾರ್ಸಲ್ ಹಿಡಿದು ನಿಂತಿದ್ದಾರೆ.
ಡೊಮಿನೋಸ್ ಸಂಸ್ಥೆ ತನ್ನ ಸಿಬ್ಬಂದಿಯನ್ನು ಹೊಗಳಿದ್ದರೆ ಜನ ಇದನ್ನು ಕಾರ್ಮಿಕ ಶೋಷಣೆ ಎಂದು ಕರೆದಿದ್ದಾರೆ. ಧಾರಾಕಾರ ಮಳೆ ಕಾರಣಕ್ಕೆ ಕೋಲ್ಕತ್ತಾದ ಬೀದಿಯಲ್ಲಿ ನೀರು ತುಂಬಿಕೊಂಡಿತ್ತು. ಇದೆಲ್ಲದರ ನಡುವೆಯೂ ಡಿಲೆವರಿ ಬಾಯ್ ಶವೋನ್ ಘೋಷ್ ಪಾರ್ಸಲ್ ಹಿಡಿದು ನಿಂತಿದ್ದರು.
ವೆಜ್ ಬದಲು ನಾನ್ ವೆಜ್ ಕೊಟ್ಟಿದ್ದಕ್ಕೆ ಕೋಟಿ ಪರಿಹಾರ
ನಿಜವಾದ ಸೈನಿಕ ಯಾವ ಕಾರಣಕ್ಕೂ ತನ್ನ ಕರ್ತವ್ಯ ಮರೆಯುವುದಿಲ್ಲ ಎಂದು ಡೊಮಿನೋಸ್ ಬಣ್ಣಿಸಿತ್ತು. ಮಳೆಯಾದರೇನು, ಬಿಸಿಲಾದರೇನು ಎಂದು ತನ್ನ ಕರ್ತವ್ಯ ನಿಭಾಯಿಸುತ್ತಿದ್ದ ಎಂದು ಹೇಳಿತ್ತು.
ಇದರಲ್ಲಿ ಹೊಗಳಿಕೊಳ್ಳುವಂತದ್ದು ಏನೂ ಇಲ್ಲ. ಇದೊಂದು ಅಮಾನವೀಯ ವರ್ತನೆ. ಮೊದಲು ಆ ಡಿಲೆವರಿ ಬಾಯ್ ಆರೋಗ್ಯ ಮುಖ್ಯ ಎಂದು ನೆಟ್ಟಿಗರು ಕಂಪನಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
##
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ