
ನವದೆಹಲಿ(ಮಾ.25): ಕೊರೋನಾ ಹಿನ್ನೆಲೆಯಲ್ಲಿ ದೇಶಾದ್ಯಂತ ಮಾ.31ರವರೆಗೆ ಎಲ್ಲ ಬಗೆಯ ಪ್ರಯಾಣಿಕ ರೈಲು ಸಂಚಾರ ರದ್ದಾಗಿದೆ. ಹೀಗಾಗಿ ಆನ್ಲೈನ್ ಮೂಲಕ ಮುಂಗಡ ಟಿಕೆಟ್ ಕಾದಿರಿಸಿರುವವರು ಆತಂಕಪಡಬೇಕಾಗಿಲ್ಲ. ರದ್ದಾಗಿರುವ ರೈಲುಗಳಲ್ಲಿ ಟಿಕೆಟ್ ಕಾದಿರಿಸಿದ್ದವರಿಗೆ ತನ್ನಿಂತಾನೆ ಹಣ ವಾಪಸ್ ಆಗಲಿದೆ.
ಹಣ ಪಾವತಿಗೆ ಯಾವ ಖಾತೆ ಬಳಸಲಾಗಿತ್ತೋ, ಅದೇ ಖಾತೆಗೆ ಹಣ ವರ್ಗವಾಗಲಿದೆ. ಆದರೆ ಪ್ರಯಾಣಿಕರು ‘ಕ್ಯಾನ್ಸಲ್’ ಆಯ್ಕೆಯನ್ನು ಬಳಸಬಾರದು. ಹಾಗೆ ಮಾಡಿದಲ್ಲಿ, ಕಡಿಮೆ ಹಣ ರೀಫಂಡ್ ಆಗಬಹುದು ಎಂದು ರೈಲ್ವೆ ತಿಳಿಸಿದೆ.
ವಿಶ್ವದ 260 ಕೋಟಿ ಜನರಿಗೆ ಗೃಹ ಬಂಧನ
ಭಾರತದಲ್ಲೂ ಸಂಪೂರ್ಣ ಲಾಕ್ಡೌನ್ ಘೋಷಣೆ ಮಾಡುವುದರೊಂದಿಗೆ ಇಡೀ ವಿಶ್ವದ ಮೂರನೇ ಒಂದರಷ್ಟು ಅಥವಾ 260 ಕೋಟಿ ಜನರು ಈಗ ಗೃಹ ಬಂಧನಕ್ಕೆ ಒಳಗಾಗಿದ್ದಾರೆ. ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಬ್ರಿಟನ್, ಫ್ರಾನ್ಸ್, ಇಟಲಿ, ಸ್ಪೇನ್ ಸೇರಿದಂತೆ 42 ದೇಶಗಳು ಲಾಕ್ಡೌನ್ ಘೋಷಣೆ ಮಾಡಿದ್ದು ತಮ್ಮ ಗಡಿಗಳನ್ನು ಬಂದ್ ಮಾಡಿವೆ. ಲಾಕ್ಡೌನ್ ಘೋಷಿಸಿದ ದೇಶಗಳ ಸಾಲಿಗೆ ಈಗ ಭಾರತ ಮತ್ತು ನ್ಯೂಜಿಲೆಂಡ್ ದೇಶಗಳು ಹೊಸದಾಗಿ ಸೇರ್ಪಡೆ ಆಗಿವೆ. ಈ ದೇಶಗಳಲ್ಲಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. 18.9 ಕೋಟಿ ಜನರು ಇರುವ 15 ದೇಶಗಳಲ್ಲಿ ಕಫä್ರ್ಯ ಘೋಷಣೆ ಮಾಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ