
ಭೋಪಾಲ್(mA.: ಕೊರೋನಾ ತಡೆಯುವ ಸಲುವಾಗಿ ರಾಜ್ಯದಲ್ಲಿ ಸೆಕ್ಷನ್ 144ರ ಅನ್ವಯ ನಿರ್ಬಂಧಕಾಜ್ಞೆ ವಿಧಿಸಿದ್ದರೂ ಮನೆಯಿಂದ ಹೊರ ಬಂದವರಿಗೆ ಮಧ್ಯಪ್ರದೇಶ ಪೊಲೀಸರು ವಿನೂತನ ಶಿಕ್ಷೆ ವಿಧಿಸಿದ್ದಾರೆ.
‘ನಾನು ಸಮಾಜದ ಶತ್ರು, ನಾನು ಮನೆಯೊಳಗೆ ಇರುವುದಿಲ್ಲ’ ಎನ್ನುವ ಬರಹವುರುವ ಪೋಸ್ಟರ್ ಅನ್ನು ಕೈಯಲ್ಲಿ ಹಿಡಿಸಿ ಫೋಟೋ ತೆಗೆಸುತ್ತಿದ್ದಾರೆ. ಈ ಕ್ರಮದಿಂದಾದರೂ ಜನ ಮುಜುಗರಕ್ಕೊಳಗಾಗಿ ಮನೆಯಿಂದ ಹೊರಗೆ ಬಾರದಿರಲಿ ಎನ್ನುವುದು ಪೊಲೀಸರ ಆಶಯ.
ಸದ್ಯ ಭಾರತದಲ್ಲಿ ಕೊರೋನಾ ರುದ್ರ ನರ್ತನ ಆರಂಭಿಸಿದ್ದು, ಒಂಭತ್ತು ಮಂದಿಯನ್ನು ಬಲಿ ಪಡೆದಿದೆ. ನಾಲ್ನೂರಕ್ಕೂ ಅಧಿಕ ಮಂದಿಯಲ್ಲಿ ಈ ಸೋಂಕು ಕಾಣಿಸಿಕೊಂಡಿದೆ. ಸರ್ಕಾರಗಳು ಇದರ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ವಹಿಸುತ್ತಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ