ಉದ್ದಿಮೆಗಳಿಗೆ ಆಕ್ಸಿಜನ್‌ ನಿರ್ಬಂಧ 2 ದಿನದಲ್ಲಿ ತೆರವು ಸಾಧ್ಯತೆ!

Published : May 31, 2021, 09:33 AM ISTUpdated : May 31, 2021, 10:07 AM IST
ಉದ್ದಿಮೆಗಳಿಗೆ ಆಕ್ಸಿಜನ್‌ ನಿರ್ಬಂಧ 2 ದಿನದಲ್ಲಿ ತೆರವು ಸಾಧ್ಯತೆ!

ಸಾರಾಂಶ

* ದೇಶ​ದಲ್ಲಿ ಹೊಸ ಕೊರೋನಾ ಕೇಸ್‌​ಗಳ ಇಳಿಕೆ ಹಾಗೂ ರೋಗಿ​ಗ​ಳಿಗೆ ವೈದ್ಯ​ಕೀ​ಯ ಆಮ್ಲ​ಜ​ನ​ಕದ ಬೇಡಿಕೆ ಇಳಿ​ಕೆ​ * ಉದ್ದಿಮೆಗಳಿಗೆ ಆಕ್ಸಿಜನ್‌ ನಿರ್ಬಂಧ 2 ದಿನದಲ್ಲಿ ತೆರವು ಸಾಧ್ಯತೆ * ಆದ್ಯ​ತೆಯ ಮೇರೆಗೆ ಕೆಲ ಕೈಗಾ​ರಿ​ಕೋ​ದ್ಯ​ಮ​ಗ​ಳಿಗೆ ಆಮ್ಲ​ಜ​ನಕ ಬಳ​ಸಲು 2-3 ದಿನ​ಗ​ಳಲ್ಲಿ ಅವ​ಕಾಶ

ನವ​ದೆ​ಹ​ಲಿ(ಮೇ.31): ದೇಶ​ದಲ್ಲಿ ಹೊಸ ಕೊರೋನಾ ಕೇಸ್‌​ಗಳ ಇಳಿಕೆ ಹಾಗೂ ರೋಗಿ​ಗ​ಳಿಗೆ ವೈದ್ಯ​ಕೀ​ಯ ಆಮ್ಲ​ಜ​ನ​ಕದ ಬೇಡಿಕೆ ಇಳಿ​ಕೆ​ಯಾ​ಗಿ​ರುವ ಬೆನ್ನಲ್ಲೇ, ದ್ರವ​ರೂ​ಪದ ಆಮ್ಲ​ಜ​ನಕ ಬಳ​ಕೆ ಮಾಡ​ಲು ಉದ್ಯ​ಮ​ಗ​ಳಿಗೆ ಹೇರ​ಲಾ​ಗಿ​ರುವ ನಿರ್ಬಂಧ​ವನ್ನು ಕೇಂದ್ರ ಸರ್ಕಾರ ಇನ್ನೂ 2-3 ದಿನ​ಗ​ಳಲ್ಲಿ ತೆರ​ವು​ಗೊ​ಳಿ​ಸುವ ಸಾಧ್ಯ​ತೆ​ಯಿದೆ.

ಈ ಬಗ್ಗೆ ಭಾನು​ವಾ​ರ ಪ್ರತಿ​ಕ್ರಿ​ಯಿ​ಸಿದ ಹಿರಿಯ ಅಧಿ​ಕಾ​ರಿ​ಯೊ​ಬ್ಬರು, ‘ಇದೀಗ ವೈದ್ಯ​ಕೀಯ ಆಮ್ಲ​ಜ​ನ​ಕದ ಬೇಡಿಕೆ ಇಳಿ​ಕೆ​ಯಾ​ಗಿದೆ. ಈ ಹಿನ್ನೆ​ಲೆ​ಯಲ್ಲಿ ಆದ್ಯ​ತೆಯ ಮೇರೆಗೆ ಕೆಲ ಕೈಗಾ​ರಿ​ಕೋ​ದ್ಯ​ಮ​ಗ​ಳಿಗೆ ಆಮ್ಲ​ಜ​ನಕ ಬಳ​ಸಲು 2-3 ದಿನ​ಗ​ಳಲ್ಲಿ ಅವ​ಕಾಶ ಕಲ್ಪಿ​ಸ​ಲಾ​ಗು​ತ್ತ​ದೆ’ ಎಂದಿ​ದ್ದಾರೆ.

ಚೀನಾ ಲ್ಯಾಬ್‌ನಲ್ಲೇ ಕೊರೋನಾ ಹುಟ್ಟು, ಅಮೆರಿಕಾದ ಫಂಡಿಂಗ್: ಮೋಸ ಮಾಡಿದ್ದ ಡ್ರ್ಯಾಗನ್!

ದೇಶಾ​ದ್ಯಂತ ಕೊರೋನಾ ವೈರ​ಸ್‌ನ 2ನೇ ಅಲೆ ತೀವ್ರ​ವಾ​ಗಿದ್ದ ಹಿನ್ನೆ​ಲೆ​ಯಲ್ಲಿ ಉಸಿ​ರಾಟ ಸಮ​ಸ್ಯೆಗೆ ಸಿಲು​ಕು​ತ್ತಿದ್ದವ​ರಿಗೆ ತ್ವರಿ​ತ​ ಮತ್ತು ಹೆಚ್ಚು ಮಂದಿಗೆ ಆಮ್ಲ​ಜ​ನಕ ಪೂರೈ​ಸಲು ಕೇಂದ್ರ ಸರ್ಕಾರ, ವೈದ್ಯ​ಕೀ​ಯೇ​ತರ ಕಾರ​ಣ​ಕ್ಕಾಗಿ ದ್ರವ​ರೂ​ಪದ ಆಮ್ಲ​ಜ​ನ​ಕ ಬಳ​ಸ​ದಂತೆ ನಿರ್ಬಂಧ ಹೇರಿತ್ತು. ಅಲ್ಲದೆ ಆಮ್ಲ​ಜ​ನಕ ಉತ್ಪಾ​ದ​ನೆ​ಯನ್ನು ಗರಿಷ್ಠ ಮಟ್ಟಕ್ಕೆ ಹೆಚ್ಚಿ​ಸು​ವಂತೆ ಖಾಸಗಿ ಕಂಪ​ನಿ​ಗ​ಳಿಗೆ ಸೂಚಿ​ಸಿದ್ದ ಕೇಂದ್ರ ಸರ್ಕಾ​ರವು, ಅದನ್ನು ತನ್ನ ಬಳ​ಕೆಗೆ ನೀಡ​ಬೇಕು ಎಂದು ಹೇಳಿತ್ತು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!