ಡೆಲ್ಟಾ ಪ್ಲಸ್‌ಗೆ ಮತ್ತೆ 3 ಬಲಿ, ಒಟ್ಟು ಸೋಂಕಿತರ ಸಂಖ್ಯೆ 52!

Published : Jun 26, 2021, 09:57 AM ISTUpdated : Jun 26, 2021, 11:36 AM IST
ಡೆಲ್ಟಾ ಪ್ಲಸ್‌ಗೆ ಮತ್ತೆ 3 ಬಲಿ, ಒಟ್ಟು ಸೋಂಕಿತರ ಸಂಖ್ಯೆ 52!

ಸಾರಾಂಶ

ಡೆಲ್ಟಾಪ್ಲಸ್‌ಗೆ ಮತ್ತೆ 3 ಬಲಿ, ಒಟ್ಟು ಸೋಂಕಿತರ ಸಂಖ್ಯೆ 52 ಮಧ್ಯಪ್ರದೇಶದಲ್ಲಿ 2, ಮಹಾರಾಷ್ಟ್ರದಲ್ಲಿ ಒಂದು ಸಾವು ಆಸ್ಪ್ರೇ​ಲಿ​ಯಾ, ಇಸ್ರೇ​ಲ್‌​ನಲ್ಲಿ ಕೋವಿ​ಡ್‌ ನಿರ್ಬಂಧ ಮರು ಜಾರಿ

ನವದೆಹಲಿ(ಜೂ.26): 3ನೇ ಅಲೆಗೆ ಕಾರಣವಾಗಬಲ್ಲದು ಎಂಬ ಭೀತಿ ಹುಟ್ಟಿಸಿರುವ ಡೆಲ್ಟಾಪ್ಲಸ್‌ ರೂಪಾಂತರಿ ಕೊರೋನಾ ತಳಿಯ ಸೋಂಕಿತರ ಸಂಖ್ಯೆ ಮತ್ತಷ್ಟುಏರಿಕೆ ಕಂಡಿದ್ದು, ಶುಕ್ರವಾರ 52ಕ್ಕೆ ತಲುಪಿದೆ. ಜೊತೆಗೆ ಶುಕ್ರವಾರ ಒಂದೇ ದಿನ ಡೆಲ್ಟಾಪ್ಲಸ್‌ ವೈರಸ್‌ಗೆ ತುತ್ತಾಗಿದ್ದ ಮೂವರು ಸಾವನ್ನಪ್ಪಿದ್ದಾರೆ.

ಈ ಪೈಕಿ ಎರಡು ಸಾವು ಮಧ್ಯಪ್ರದೇಶದಲ್ಲಿ ಮತ್ತು 1 ಸಾವು ಮಹಾರಾಷ್ಟ್ರದಲ್ಲಿ ಸಂಭವಿಸಿದೆ. ಮಧ್ಯಪ್ರದೇಶದಲ್ಲಿ ಸಾವನ್ನಪ್ಪಿದ ಇಬ್ಬರೂ ಲಸಿಕೆ ಪಡೆದುಕೊಂಡಿರಲಿಲ್ಲ. ಇದರೊಂದಿಗೆ ಈ ರೂಪಾಂತರಿಗೆ ಬಲಿಯಾದವರ ಸಂಖ್ಯೆ 4ಕ್ಕೆ ಏರಿದೆ. ಮೊದಲ ಸಾವು ಕೂಡಾ ಮಧ್ಯಪ್ರದೇಶದಲ್ಲೇ ಸಂಭವಿಸಿತ್ತು. ಈ ವರೆಗೆ 9 ರಾಜ್ಯಗಳಲ್ಲಿ ಡೆಲ್ಟಾಪ್ಲಸ್‌ ರೂಪಾಂತರಿ ಪತ್ತೆಯಾಗಿದೆ.

ಆಸ್ಪ್ರೇ​ಲಿ​ಯಾ, ಇಸ್ರೇ​ಲ್‌​ನಲ್ಲಿ ಕೋವಿ​ಡ್‌ ನಿರ್ಬಂಧ ಮರು ಜಾರಿ

ಕೊರೊನಾ ವೈರಸ್‌ ಅನ್ನು ಯಶ​ಸ್ವಿ​ಯಾಗಿ ನಿಯಂತ್ರ​ಣಕ್ಕೆ ತಂದಿದ್ದ ಆಸ್ಪ್ರೇ​ಲಿಯಾ ಮತ್ತು ಇಸ್ರೇಲ್‌​ನಲ್ಲಿ ಈಗ ಡೆಲ್ಟಾವೈರ​ಸ್‌ನ ಭೀತಿ ಎದು​ರಾ​ಗಿದೆ. ಸಿಡ್ನಿ​ಯಲ್ಲಿ ಬೆರ​ಳೆ​ಣಿ​ಕೆ​ಯಷ್ಟುಪ್ರಕ​ರ​ಣ​ಗಳು ದಾಖ​ಲಾ​ಗು​ತ್ತಿ​ದ್ದ​ರಿಂದ ಜನ​ಜೀ​ವನ ಸಹ​ಜ​ಸ್ಥಿ​ತಿಗೆ ಮರ​ಳಿತ್ತು. ಆದ​ರೆ, ಡೆಲ್ಟಾ​ದಿಂದಾಗಿ ಕೊರೋನಾ ವೈರಸ್‌ ಹರ​ಡು​ವು​ದನ್ನು ತಪ್ಪಿ​ಸುವ ಸಲು​ವಾಗಿ ಸಿಡ್ನಿ​ಯಲ್ಲಿ ಒಂದು ವಾರ​ಗಳ ಕಾಲ ಲಾಕ್‌​ಡೌನ್‌ ಜಾರಿ ಮಾಡ​ಲಾ​ಗಿದೆ.

ಅದೇ ರೀತಿ ಪರಿ​ಣಾ​ಮ​ಕಾರಿ ಲಸಿಕೆ ನೀಡಿ​ಕೆ​ಯಿಂದಾಗಿ ಇಸ್ರೇಲ್‌ ಕೊರೋ​ನ​ವನ್ನು ಗೆದ್ದಿತ್ತು. ಹೀಗಾಗಿ ಇಸ್ರೇ​ಲ್‌​ನಲ್ಲಿ ಕೋವಿಡ್‌ ನಿರ್ಬಂಧ​ಗ​ಳನ್ನು ಸಂಪೂ​ರ್ಣ​ವಾಗಿ ಹಿಂಪ​ಡೆ​ಯ​ಲಾ​ಗಿತ್ತು. ಆದರೆ, ಡೆಲ್ಟಾಭೀತಿ​ಯಿಂದಾಗಿ ಇಸ್ರೇ​ಲ್‌​ನಲ್ಲಿ ಕೋವಿಡ್‌ ನಿರ್ಬಂಧ​ಗ​ಳನ್ನು ಪುನಃ ಜಾರಿ ಮಾಡ​ಲಾ​ಗಿದೆ. ಒಳಾಂಗಣದಲ್ಲಿ ಮಾಸ್ಕ್‌ ಧರಿಸುವುದನ್ನು ಮತ್ತೆ ಕಡ್ಡಾಯ ಮಾಡಲಾಗಿದೆ. ಇದೇ ವೇಳೆ ಫಿಜಿ ದೇಶ​ದಲ್ಲಿ ಡೆಲ್ಟಾ​ದಿಂದಾಗಿ ಮೂರನೇ ಅಲೆ ಏಳುವ ಅಪಾಯ ಎದು​ರಾ​ಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

India news live: ಇರಾನ್‌ನ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಕೋಮಾದಲ್ಲಿ - ಕೋಂ ನಗರದಲ್ಲಿ ಚಿಕಿತ್ಸೆ
Karnataka News Live: ಡಿಕೆಶಿ ಅನುಭವಿ ರಾಜಕಾರಣಿ ಆಗಿದ್ರೂ ರಾಹುಲ್ ಗಾಂಧಿಯನ್ನ ಮೆಚ್ಚಿಸಲು ಕೇಂದ್ರದ ವಿರುದ್ಧ ಟೀಕೆ - ಪ್ರಲ್ಹಾದ್ ಜೋಶಿ ಖಡಕ್ ತಿರುಗೇಟು