
ನವದೆಹಲಿ (ನ. 05): ದಿಲ್ಲಿ ಹಾಗೂ ಸುತ್ತಮುತ್ತ ವಾಯುಮಾಲಿನ್ಯ ಮಿತಿ ಮೀರಿದ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ‘ಸಮ-ಬೆಸ ಸಂಚಾರ ವ್ಯವಸ್ಥೆ’ಯನ್ನು ಮರುಜಾರಿ ಮಾಡಲಾಗಿದೆ. ನವೆಂಬರ್ 04 ರಿಂದ 15 ರವರೆಗೆ ಇದು ಜಾರಿಯಲ್ಲಿರಲಿದೆ.
ಸಮಸಂಖ್ಯೆಯ ನೋಂದಣಿ ಸಂಖ್ಯೆಯಿಂದ ಅಂತ್ಯವಾಗುವ ವಾಹನಗಳು ಸಮಸಂಖ್ಯೆಯ ದಿನಾಂಕದಂದು ಹಾಗೂ ಬೆಸಸಂಖ್ಯೆಯ ನೋಂದಣಿ ಸಂಖ್ಯೆಯಿಂದ ಅಂತ್ಯವಾಗುವ ವಾಹನಗಳು ಬೆಸಸಂಖ್ಯೆ ದಿನಾಂಕದಂದು ಸಂಚರಿಸಬೇಕು ಎಂಬುದೇ ಈ ನಿಯಮ.
ಶಿವಸೇನೆಗೆ ಸೋನಿಯಾ ಶಾಕ್; ಎನ್ ಸಿಪಿ, ಶಿವಸೇನೆ ಜತೆಗೆ ಒಪ್ಪಂದ ಸೋನಿಯಾ ಗಾಂಧಿ
ಮೊದಲ ದಿನ ಬೆಳಗ್ಗೆ 8 ಗಂಟೆಯಿಂದ ಆರಂಭವಾದ ಈ ವ್ಯವಸ್ಥೆಗೆ ದಿಲ್ಲಿಗರಿಂದ ಶೇ.100ರಷ್ಟುಪ್ರತಿಕ್ರಿಯೆ ವ್ಯಕ್ತವಾಗಿದೆ. ನ.15ರವರೆಗೆ ಮಾಲಿನ್ಯ ತಡೆಗಟ್ಟಲು ಈ ಕ್ರಮ ಜರುಗಿಸಲಾಗಿದ್ದು, ಸಹಕರಿಸಬೇಕು ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮನವಿ ಮಾಡಿದರು.
ಅಲ್ಲದೆ, ಕೇಜ್ರಿವಾಲ್ ಅವರು ಸಚಿವ ಸತ್ಯೇಂದ್ರ ಜೈನ್ ಹಾಗೂ ಗೋಪಾಲ್ ರಾಯ್ ಜತೆ ಕಾರಿನಲ್ಲಿ ಸಚಿವಾಲಯಕ್ಕೆ ತೆರಳಿದರು. ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಕಚೇರಿಗೆ ಸೈಕಲ್ನಲ್ಲಿ ಹೋದರು. ಈ ಮೂಲಕ ಮಾಲಿನ್ಯ ತಡೆಗೆ ಅಳಿಲು ಸೇವೆ ಸಲ್ಲಿಸಿದರು.
ಸಮ-ಬೆಸ ಪಾಲಿಸದ ಬಿಜೆಪಿ, ಸಂಸದನಿಗೆ 4000 ರು. ದಂಡ
ಈ ನಡುವೆ ಕೇಜ್ರಿವಾಲ್ ಅವರ ಸಮ-ಬೆಸ ವ್ಯವಸ್ಥೆಗೆ ಬಿಜೆಪಿ ಸಂಸದ ವಿಜಯ್ ಗೋಯಲ್ ಬೆಲೆ ಕೊಡದೇ ಬೆಸ ಸಂಖ್ಯೆಯಿಂದ ಅಂತ್ಯವಾಗುವ ಕಾರನ್ನು ಡ್ರೈವ್ ಮಾಡಿದರು. ಪೊಲೀಸರಿಂದ ತಾವೇ 4 ಸಾವಿರ ರು. ದಂಡ ಹಾಕಿಸಿಕೊಂಡರು. ‘ಕೇಜ್ರಿವಾಲ್ ಅವರ ಸಮ-ಬೆಸ ವ್ಯವಸ್ಥೆ ಕೇವಲ ಪ್ರಚಾರಕ್ಕಾಗಿ. ಹೀಗಾಗಿ ನಾನು ಅವರ ನಿರ್ಧಾರವನ್ನು ಈ ರೀತಿ ಪ್ರತಿಭಟಿಸಿದ್ದೇನೆ’ ಎಂದು ಹೇಳಿದರು. ಆದರೆ ‘ಬಿಜೆಪಿಯವರು ಈ ರೀತಿ ಮಾಡಿ ಬರೀ ಸ್ಟಂಟ್ ಮಾಡುತ್ತಿದ್ದಾರೆ’ ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಟೀಕಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ