ಅರವಿಂದ್ ಕೇಜ್ರಿವಾಲ್‌ರಿಂದ ರೇಖಾ ಗುಪ್ತಾ ವರೆಗೆ, ಯಾವ ನಾಯಕರ ಮೇಲೆ ಅತಿ ಹೆಚ್ಚು ದಾಳಿಯಾಗಿದೆ ಗೊತ್ತಾ?

Published : Aug 20, 2025, 09:16 PM IST
Rekha Gupta attack,

ಸಾರಾಂಶ

ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಮೇಲೆ ಹಲ್ಲೆ ನಡೆದಿದ್ದು, ಈ ಘಟನೆ ರಾಜಕೀಯ ನಾಯಕರ ಭದ್ರತೆಯ ಕುರಿತು ಚರ್ಚೆಗೆ ಗ್ರಾಸವಾಗಿದೆ. ಹಿಂದೆಯೂ ಹಲವು ನಾಯಕರ ಮೇಲೆ ಇಂತಹ ದಾಳಿಗಳು ನಡೆದಿವೆ.

ದೆಹಲಿ (ಆ.20): ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಮೇಲೆ ಬುಧವಾರ ನಡೆದ ದಾಳಿಯ ಘಟನೆ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಜನಸ್ಪಂದನದ ಕಾರ್ಯಕ್ರಮದ ವೇಳೆ ರಾಜೇಶ್ ಭಾಯ್ ಖಿಮ್ಜಿ ಎಂಬಾತ ರೇಖಾ ಗುಪ್ತಾ ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದು, ತಲೆ ಮತ್ತು ಭುಜಕ್ಕೆ ಸಣ್ಣ ಗಾಯಗಳಾಗಿವೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಕೊಲೆ ಯತ್ನ ಪ್ರಕರಣ ದಾಖಲಾಗಿದೆ.

ಈ ಘಟನೆಯನ್ನು ಬಿಜೆಪಿ, ಕಾಂಗ್ರೆಸ್, ಮತ್ತು ಆಮ್ ಆದ್ಮಿ ಪಕ್ಷ ಖಂಡಿಸಿವೆ.ಈ ದಾಳಿಯು ರಾಜಕೀಯ ನಾಯಕರ ಭದ್ರತೆಯ ಕುರಿತು ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ರೇಖಾ ಗುಪ್ತಾ ಮಾತ್ರವಲ್ಲ, ದೆಹಲಿಯಲ್ಲಿ ಇತರ ಪ್ರಮುಖ ನಾಯಕರ ಮೇಲೂ ಇಂತಹ ದಾಳಿಗಳು ನಡೆದಿವೆ. ಇವುಗಳ ಪೈಕಿ:

ಅರವಿಂದ್ ಕೇಜ್ರಿವಾಲ್: ಮಾಜಿ ಸಿಎಂ ಕೇಜ್ರಿವಾಲ್ ಮೇಲೆ ಹಲವು ಬಾರಿ ದಾಳಿಗಳು ನಡೆದಿವೆ. 2011ರಲ್ಲಿ ಲಕ್ನೋದಲ್ಲಿ ಚಪ್ಪಲಿ ಎಸೆತ, 2013ರಲ್ಲಿ ಶಾಯಿ ಎಸೆತ, 2014ರಲ್ಲಿ ಹೈದರಾಬಾದ್‌ನಲ್ಲಿ ಕಾರಿನ ಮೇಲೆ ಕಲ್ಲು ಎಸೆತ, 2016ರಲ್ಲಿ ದೆಹಲಿ ಸಚಿವಾಲಯದಲ್ಲಿ ಶೂ ಎಸೆತ, ಮತ್ತು ರೋಡ್ ಶೋನಲ್ಲಿ ಕಪಾಳಮೋಕ್ಷದ ಯತ್ನ ಸೇರಿದಂತೆ ಅನೇಕ ಘಟನೆಗಳು ದಾಖಲಾಗಿವೆ.

ಪಿ ಚಿದಂಬರಂ: 2009ರಲ್ಲಿ ಗೃಹ ಸಚಿವರಾಗಿದ್ದಾಗ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಮೇಲೆ ಶೂ ಎಸೆಯಲಾಗಿತ್ತು.

ಮನಮೋಹನ್ ಸಿಂಗ್: ಅಹಮದಾಬಾದ್‌ನ ಚುನಾವಣಾ ರ್ಯಾಲಿಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮೇಲೆ ಹಿತೇಶ್ ಎಂಬಾತ ಶೂ ಎಸೆಯಲು ಯತ್ನಿಸಿದ್ದಾನೆ, ಆದರೆ ಶೂ ವೇದಿಕೆ ತಲುಪಲಿಲ್ಲ.

ಇತರ ನಾಯಕರು: 2025ರಲ್ಲಿ ರಾಯ್ ಬರೇಲಿಯಲ್ಲಿ ಸ್ವಾಮಿ ಪ್ರಸಾದ್ ಮೌರ್ಯ ಅವರ ಮೇಲೆ ಕಪಾಳಮೋಕ್ಷ, 2014ರಲ್ಲಿ ಗಾಜಿಯಾಬಾದ್‌ನಲ್ಲಿ ಅಖಿಲೇಶ್ ಯಾದವ್ ಮೇಲೆ ಚಪ್ಪಲಿ ಎಸೆತ, ಪುಣೆಯಲ್ಲಿ ನಿತಿನ್ ಗಡ್ಕರಿ ಮೇಲೆ ಶೂ ಎಸೆತ, 2009ರಲ್ಲಿ ಕುರುಕ್ಷೇತ್ರದಲ್ಲಿ ನವೀನ್ ಜಿಂದಾಲ್ ಮೇಲೆ ಶೂ ಎಸೆತ, ಮತ್ತು 2014ರಲ್ಲಿ ಪ್ರಕಾಶ್ ಸಿಂಗ್ ಬಾದಲ್ ಮೇಲೆ ಶೂ ಎಸೆತದ ಘಟನೆಗಳು ನಡೆದಿವೆ.

ಈ ಘಟನೆಗಳು ರಾಜಕೀಯ ನಾಯಕರ ಭದ್ರತೆಯ ಕೊರತೆಯನ್ನು ಬಿಂಬಿಸುತ್ತವೆ. ರೇಖಾ ಗುಪ್ತಾ ದಾಳಿಯ ತನಿಖೆಯ ಜೊತೆಗೆ, ಇಂತಹ ಘಟನೆಗಳನ್ನು ತಡೆಗಟ್ಟಲು ಕಟ್ಟುನಿಟ್ಟಾದ ಕ್ರಮಗಳ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸೆಂಟ್ರಲ್ ಮೆಟ್ರೋ ಮತ್ತು ಹೈಕೋರ್ಟ್ ನಿಲ್ದಾಣಗಳ ನಡುವೆ ನೀಲಿ ಮಾರ್ಗದ ಸುರಂಗದಲ್ಲಿ ಹಠಾತ್ ನಿಂತ ಮೆಟ್ರೋ ರೈಲು
ರಸಗುಲ್ಲಾ ಖಾಲಿ ಆಯ್ತು ಎಂದು ಮುರಿದು ಬಿತ್ತು ಮದ್ವೆ: ಮದುವೆ ಮನೆಯಾಯ್ತು ರಣಾಂಗಣ