ಕೆಂಪುಕೋಟೆಗೆ ಹಾನಿ ಮಾಡಿದ ದೀಪ್ ಸಿಧುಗೆ ಜಾಮೀನು

By Suvarna NewsFirst Published Apr 26, 2021, 12:40 PM IST
Highlights

ಕೋರ್ಟ್ ಜಾಮೀನು ಕೊಟ್ಟ ಬೆನ್ನಲ್ಲೇ ಸಿಧು ಮತ್ತೆ ಅರೆಸ್ಟ್ | ನ್ಯಾಯಾಲಯದ ಆದೇಶಸ ಸೋಲಿಸುವ ಯತ್ನ ಇದು ಎಂದ ಕೋರ್ಟ್

ದೆಹಲಿ(ಏ.26): ಗಣರಾಜ್ಯೋತ್ಸವ ದಿನ ಗಲಭೆ ಮಾಡಿದ ಘಟನೆಗೆ ಸಂಬಂಧಿಸಿ ಎರಡನೇ ಕೇಸ್‌ನಲ್ಲಿ ಪಂಜಾಬಿ ನಟ, ಕಾರ್ಯಕರ್ತ ದೀಪ್ ಸಿಧುಗೆ ದೆಹಲಿ ನ್ಯಾಯಾಲಯ ಜಾಮೀನು ನೀಡಿದೆ. 

ರೈತರ ಪ್ರತಿಭಟನೆಯ ಸಂದರ್ಭದಲ್ಲಿ ಕೆಂಪು ಕೋಟೆಗೆ  ಉಂಟಾದ ಹಾನಿಗೆ ಸಂಬಂಧಿಸಿದಂತೆ ರಿಲೀವರ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸಾಹಿಲ್ ಗುಪ್ತಾ ಅವರು ಸಿಧುಗೆ ಜಾಮೀನು ನೀಡಿದ್ದಾರೆ.

ಟ್ರಾಕ್ಟರ್ ರ‍್ಯಾಲಿ ಹಿಂಸಾಚಾರ: ನಟ ದೀಪ್ ಸಿಧುಗೆ 14 ದಿನ ನ್ಯಾಯಾಂಗ ಬಂಧನ!

ಗಣರಾಜ್ಯೋತ್ಸವದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಿಧು ವಿರುದ್ಧ ಎರಡು ಎಫ್‌ಐಆರ್ ದಾಖಲಿಸಲಾಗಿದೆ. ಮೊದಲ ಎಫ್‌ಐಆರ್‌ನಲ್ಲಿ, ಅವನಿಗೆ ಸೆಷನ್ಸ್ ನ್ಯಾಯಾಲಯ ಜಾಮೀನು ನೀಡಿತು ಮತ್ತು ಗಂಟೆಗಳ ನಂತರ ಎರಡನೇ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಆತನನ್ನು ಕ್ರೈಂ ಬ್ರಾಂಚ್ ಬಂಧಿಸಿದೆ.

ಫೆಬ್ರವರಿ 9 ರಿಂದ ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿಡಲಾಗಿದೆ ಎಂದು ತಿಳಿದಿದ್ದರೂ, ಏಪ್ರಿಲ್ 17 ರಂದು ಮಾತ್ರ ಆತನಿಗೆ ನಿಯಮಿತ ಜಾಮೀನು ದೊರೆತಾಗ ಬಂಧಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಟ್ರಾಕ್ಟರ್ ರ‍್ಯಾಲಿ ಹಿಂಸಾಚಾರ: ನಟ ದೀಪ್ ಸಿಧುಗೆ 14 ದಿನ ನ್ಯಾಯಾಂಗ ಬಂಧನ!

ಇದು ಎಎಸ್‌ಜೆಯ ಜಾಮೀನು ಆದೇಶವನ್ನು ಸೋಲಿಸುವ ಪ್ರಯತ್ನ ಎಂದು ಇದು ಸ್ಪಷ್ಟವಾಗಿ ಕಾಣುತ್ತದೆ. ಇದು ಆರೋಪಿಗಳ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಆದ ಅವಮಾನ. ಆರ್ಟಿಕಲ್ 21 ರ ಅಡಿಯಲ್ಲಿ ಖಾತರಿಪಡಿಸಿದ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಸಿಧು 70 ದಿನಗಳಿಗೂ ಹೆಚ್ಚು ಕಾಲ ಬಂಧನದಲ್ಲಿದ್ದರು. ಭಾರತೀಯ ಸಂವಿಧಾನದ 21 ನೇ ಪರಿಚ್ಛೇದದ ಅಡಿಯಲ್ಲಿ ಸಿಧು ಹಕ್ಕುಗಳಿಗೆ ಅವಮಾನ ಆಗಿದೆ ಎಂದು ಸಿಧು ಅವರ ವಕೀಲ ಅಭಿಷೇಕ್ ಗುಪ್ತಾ ನ್ಯಾಯಾಲಯಕ್ಕೆ ತಿಳಿಸಿದ್ದರು.

ರಾಜ್ಯಕ್ಕೆ ಹಾಜರಾದ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೀವ್ ಕಾಂಬೋಜ್, ಕೆಂಪು ಕೋಟೆ ಒಂದು ಪ್ರಾಚೀನ ಸ್ಮಾರಕವಾಗಿದೆ. ಅದನ್ನು ಸಿಧು ಹಾನಿ ಮಾಡಿದ್ದಾರೆ. ವೀಡಿಯೊಗಳ ಪ್ರಕಾರ ಘಟನೆಯಲ್ಲಿ ಸಿಧು ಸಕ್ರಿಯ ಪಾತ್ರ ವಹಿಸಿದ್ದಾರೆ. ಪ್ರಕರಣವು ಸೂಕ್ಷ್ಮವಾದ ಕಾರಣ, ಜಾಮೀನು ನೀಡಬಾರದು ಎಂದಿದ್ದರು.

click me!