ಮಹಿಳೆಯನ್ನು ತಿಂದು ತೇಗಿದ್ದ ನರಭಕ್ಷಕ ಹುಲಿ ಸಾವು, ಅನುಮಾನ ಹೆಚ್ಚಿಸಿದ ಘಟನೆ

Published : Jan 27, 2025, 10:38 AM ISTUpdated : Jan 27, 2025, 11:00 AM IST
ಮಹಿಳೆಯನ್ನು ತಿಂದು ತೇಗಿದ್ದ ನರಭಕ್ಷಕ ಹುಲಿ ಸಾವು, ಅನುಮಾನ ಹೆಚ್ಚಿಸಿದ ಘಟನೆ

ಸಾರಾಂಶ

ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ದಾಳಿ ಮಾಡಿ ತಿಂದಿದ್ದ ಹುಲಿ ಮೃತಪಟ್ಟಿದೆ. ಅರಣ್ಯಾಧಿಕಾರಿಗಳ ಕಾರ್ಯಾಚರಣೆ ವೇಳೆ ಸತ್ತ ಹುಲಿ ಪತ್ತೆಯಾಗಿದೆ. ಈ ಘಟನೆ ಇದೀಗ ಕೆಲ ಅನುಮಾನಗಳಿಗೆ ಕಾರಣವಾಗಿದೆ.

ನವೆದೆಹಲಿ(ಜ.27) ಕಾಂಡಂಚಿನಲ್ಲಿರುವ ಗ್ರಾಮಗಳು ಕಳೆದ ಹಲವು ದಶಕಗಳಿಂದ ಕಾಡು ಪ್ರಾಣಿಗಳ ಜೊತೆ ಸಂಘರ್ಷ ಮಾಡುತ್ತಲೇ ಇದ್ದಾರೆ. ಇದಕ್ಕೆ ಶಾಶ್ವತ ಪರಿಹಾರಗಳು ಕಾಣುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳು ನಾಡಿಗೆ ಎಂಟ್ರಿಕೊಡುತ್ತಿರುವುದು ದಾಳಿ ಮಾಡುತ್ತಿರುವ ಪ್ರಕರಣ ಹೆಚ್ಚಾಗುತ್ತಿದೆ. ಈ ಪೈಕಿ ಕೇರಳದ ವಯನಾಡಿನ ಮನಂತವಾಡಿಯಲ್ಲಿ ಕಾಣಿಸಿಕೊಂಡಿದ್ದ ನರಭಕ್ಷಕ ಹುಲಿ ಮಹಿಳೆಯನ್ನು ಬಲಿ ಪಡೆದಿತ್ತು. ಸ್ಥಳೀಯರ ಭಾರಿ ಪ್ರತಿಭಟನೆ ಬಳಿಕ ಹುಲಿ ಕೊಲ್ಲಲು ಅರಣ್ಯಾಧಿಕಾರಿಗಳು ಮುಂದಾಗಿದ್ದರು. ಆದರೆ ಇದೀಗ ಹುಲಿ ಕಾಡಿನಲ್ಲಿ ಸತ್ತು ಬಿದ್ದಿರುವುದು ಪತ್ತೆಯಾಗಿದೆ. ದಿಢೀರ್ ಈ ಹುಲಿ ಸಾಯಲು ಕಾರಣವೇನು? ಹುಲಿ ಗುರಿಯಾಗಿಸಿ ದಾಳಿ ನಡೆದಿಯಾ ಅನ್ನೋ ಅನುಮಾನಗಳು ಹುಟ್ಟಿಕೊಂಡಿದೆ. 

ವಯನಾಡಿನ ಮನಂತವಾಡಿಯ ಪಂಚರಕೊಲ್ಲಿಯಲ್ಲಿ ಭಯಭೀತಿ ಹುಟ್ಟಿಸಿದ್ದ ನರಭಕ್ಷಕ ಹುಲಿ ಅರಣ್ಯ ಇಲಾಖೆ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಸತ್ತಿರುವುದು ಪತ್ತೆಯಾಗಿದೆ. ಅರಣ್ಯ ಸಚಿವ ಎ.ಕೆ. ಶಶೀಂದ್ರನ್ ಅವರ ಕಚೇರಿಯ ಪ್ರಕಾರ, ಇಂದು (ಜನವರಿ 27) ಬೆಳಿಗ್ಗೆ 2:30 ರ ಸುಮಾರಿಗೆ ಹುಲಿ ಕುತ್ತಿಗೆಯಲ್ಲಿ ಎರಡು ಆಳವಾದ ಗಾಯಗಳೊಂದಿಗೆ ಪತ್ತೆಯಾಗಿದೆ. ಸತ್ತ ಹುಲಿ ಇತ್ತೀಚೆಗೆ ಪಂಚರಕೊಲ್ಲಿಯಲ್ಲಿ ರಾಧಾ ಎಂಬ ಬುಡಕಟ್ಟು ಮಹಿಳೆಯನ್ನು ಕೊಂದ ಹುಲಿ ಎಂದು ಅರಣ್ಯ ಇಲಾಖೆ ದೃಢಪಡಿಸಿದೆ.

'ನಾಯಿ ಜೊತೆಗೆ ಸ್ನೇಹ ಮಾಡಿದ ಹುಲಿ'ಯ ವಿಡಿಯೋ ವೈರಲ್; ಇದು ಸಸ್ಯಾಹಾರಿ ಹುಲಿಯೇ?

ಕಾಡಿನಲ್ಲಿ ತ್ಯಾಜ್ಯವನ್ನು ಎಸೆಯುವ ಸ್ಥಳದಲ್ಲಿ ಸತ್ತ ಹುಲಿ ಪತ್ತೆಯಾಗಿದೆ. ಹುಲಿಯ ಮೇಲಿನ ಗಾಯದ ಗುರುತಿನ ಕುರಿತು ತನಿಖೆ ನಡೆಯುತ್ತಿದೆ.   ಪ್ರಾಣಿಯ ಸ್ಥಿತಿಯನ್ನು ನಿರ್ಣಯಿಸಿದ ನಂತರ, ಹುಲಿ ಬೇರೆ ಹುಲಿಯೊಂದಿಗೆ ಹೋರಾಡಿದ ನಂತರ ಸತ್ತಿರಬಹುದು ಎಂದು ಅರಣ್ಯ ಇಲಾಖೆ ಹೇಳಿದೆ.

ಜನವರಿ 24 ರಂದು, ಪಂಚರಕೊಲ್ಲಿಯಲ್ಲಿ ಹುಲಿ ದಾಳಿಯಲ್ಲಿ ಬುಡಕಟ್ಟು ಮಹಿಳೆಯೊಬ್ಬರು ಸಾವನ್ನಪ್ಪಿದ್ದರು. ತಾತ್ಕಾಲಿಕ ಅರಣ್ಯ ವೀಕ್ಷಕ ಅಪ್ಪಚ್ಚನ್ ಅವರ ಪತ್ನಿ ರಾಧಾ ಬೆಳಿಗ್ಗೆ 8:30 ರ ಸುಮಾರಿಗೆ ತೋಟದಲ್ಲಿ ಕಾಫಿ ಕೆಲಸದಲ್ಲಿ ತೊಡಗಿದ್ದಾಗ ದಾಳಿಗೆ ಒಳಗಾಗಿದ್ದರು. ನಿಯಮಿತ ತಪಾಸಣೆ ನಡೆಸುತ್ತಿದ್ದ ಥಂಡರ್‌ಬೋಲ್ಟ್ ತಂಡವು ರಾಧಾ ಅವರ ದೇಹವನ್ನು ಪತ್ತೆ ಹಚ್ಚಿತು. ಮಹಿಳೆಯ ಭಾಗಶಃ ತಿಂದ ದೇಹ ಪತ್ತೆ ಹಚ್ಚಿದ ಅಧಿಕಾರಿಗಳು ಸ್ಥಳೀಯರ ತೀವ್ರ ವಿರೋಧ ಎದುರಿಸಿದ್ದರು. ಸ್ಥಳೀಯ ನಿವಾಸಿಗಳಿಂದ ತೀವ್ರ ಪ್ರತಿಭಟನೆಗಳ ನಂತರ, ದಾಳಿಗೆ ಕಾರಣವಾದ ನರಭಕ್ಷಕ ಹುಲಿಯನ್ನು ಗುಂಡಿಕ್ಕಿ ಕೊಲ್ಲಲು ಅಧಿಕಾರಿಗಳು ಆದೇಶ ಹೊರಡಿಸಿದರು. ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ, ನರಭಕ್ಷಕ ಹುಲಿಯನ್ನು ಕೊಲ್ಲಬೇಕೆಂದು ಒತ್ತಾಯಿಸಿ ಅವರು ಹಲವಾರು ದಿನಗಳವರೆಗೆ ಪ್ರತಿಭಟನೆ ಮುಂದುವರಿದಿತ್ತು. 

ಹುಲಿ ಬಂತು ಹುಲಿ: ಶಾಲಾ-ಕಾಲೇಜು ಬಂದ್ ಮಾಡಿದ ಜಿಲ್ಲಾಡಳಿತ!
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್