
ತ್ರಿಪುರಾ(ಮೇ.12): ಲಾಕ್ಡೌನ್ನಿಂದಾಗಿ ಮನೆಗೆ ಹೋಗಲಾಗದೆ ಅದಷ್ಟೋ ಮಂದಿ ಪರದಾಡುತ್ತಿದ್ದಾರೆ. ಅಂಥದ್ದರಲ್ಲಿ ತ್ರಿಪುರಾದ ಗೋವಿಂದ ದೇವನಾಥ್ ಎಂಬ ಕೂಲಿ ಕಾರ್ಮಿಕ ಬರೋಬ್ಬರಿ 30 ಸಾವಿರ ರು. ಖರ್ಚು ಮಾಡಿ ಕಾರೊಂದನ್ನು ಬಾಡಿಗೆ ಪಡೆದು ಮನೆಗೆ ತೆರಳುವಲ್ಲಿ ಯಶಸ್ವಿಯಾಗಿದ್ದಾನೆ.
ದೇಶದಲ್ಲಿ 70000 ಗಡಿ ದಾಟಿದ ಸೋಂಕು, ಒಂದೇ ದಿನ ದಾಖಲೆಯ 174 ಸಾವು!
ಆದರೆ, ಮನೆ ಮಂದಿಯೇ ಆತನನ್ನು ಮನೆಯ ಒಳಗೆ ಬಿಟ್ಟುಕೊಂಡಿಲ್ಲ! ತನಗೆ ಕೊರೋನಾ ಇಲ್ಲ ಎಂದು ದೇವನಾಥ್ ಹೇಳಿದರೂ ಹೆಂಡತಿ, ಮಕ್ಕಳು ನಂಬುತ್ತಲೇ ಇಲ್ಲ. ಹೀಗಾಗಿ ತಾನು ಎಲ್ಲಿ ಉಳಿದುಕೊಳ್ಳುವುದು ಎಂದು ತಿಳಿಯದೆ ದೇವನಾಥ್ ಮಾಧ್ಯಮಗಳ ಮುಂದೆ ತನ್ನ ಅಳಲನ್ನು ತೋಡಿಕೊಂಡಿದ್ದಾನೆ.
ಲಾಕ್ಡೌನ್ ಘೋಷಣೆಗೂ ಮುನ್ನ ಅಸ್ಸಾಂನ ತನ್ನ ಮಾವನ ಮನೆಗೆ ತೆರಳಿದ್ದ ದೇವನಾಥ್ ಲಾಕ್ಡೌನ್ ತೆರವಾಗುವುದನ್ನೇ ಕಾಯುತ್ತಿದ್ದ. ಆದರೆ, ಈಗ ಮನೆಗೆ ಬಂದರೂ ಪ್ರಯೋಜನ ಆಗಿಲ್ಲ.
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ