
ನಾಗ್ಪುರ: ಸೈಬರ್ ಅಪರಾಧಗಳ ಸಂಖ್ಯೆ ಇತ್ತೀಚೆಗೆ ಹೆಚ್ಚಾಗಿದ್ದು, ಕೂತಲ್ಲಿಂದಲೇ ಕಳ್ಳರು ನಿಮ್ಮ ಖಾತೆಯಲ್ಲಿದ್ದ ಹಣವನ್ನು ಗುಳುಂ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿದೆ.
ಹಾಗೆಯೇ ಈಗ ನಾಗಪುರದಲ್ಲಿ 29 ವರ್ಷದ ಯುವಕನೋರ್ವ ತನ್ನ ವಾಟ್ಸಾಪ್ಗೆ ಬಂದ ಲಿಂಕೊಂದನ್ನು ಕ್ಲಿಕ್ ಮಾಡಿದ್ದು ಪರಿಣಾಮ ತನ್ನ ಖಾತೆಯಲ್ಲಿದ್ದ 6.16 ಲಕ್ಷ ನಗದನ್ನು ಕಳೆದುಕೊಂಡು ಸಂಕಷ್ಟಕ್ಕಿಡಾಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮೋಸಕ್ಕೊಳಗಾದ ಯುವಕ ನಾಗಪುರದ ಖಮ್ಲಾ ಪ್ರದೇಶದ ನಿವಾಸಿಯಾಗಿದ್ದು, ಈತನಿಗೆ ಕಳೆದ ತಿಂಗಳು ವಾಟ್ಸಾಪ್ನಲ್ಲಿ ಕರೆಯೊಂದು ಬಂದಿತ್ತು. ಕರೆ ಮಾಡಿದ ಮಹಿಳೆ ತಾನು ವಾಟ್ಸಾಪ್ಗೆ ಒಂದು ಲಿಂಕ್ ಕಳುಹಿಸಿದ್ದು, ಆ ಲಿಂಕ್ನಲ್ಲಿರುವ ಸಂಸ್ಥೆಯ ಬಗ್ಗೆ ಮಾಹಿತಿಯನ್ನು ಪರಿಶೀಲಿಸುವಂತೆ (verify) ಹೇಳಿದ್ದರು. ಅದರಂತೆ ಈತ ಆ ಲಿಂಕ್ ಮೇಲೆ ಕ್ಲಿಕ್ ಮಾಡಿದ್ದ, ಇದಾಗಿ ಕ್ಷಣದಲ್ಲಿ ಆತನ ಬ್ಯಾಂಕ್ ಖಾತೆಯಲ್ಲಿದ್ದ 6.16 ಲಕ್ಷ ರೂಪಾಯಿ ಡೆಬಿಟ್ ಆಗಿತ್ತು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿದ್ದು, ಸೈಬರ್ ಕಳ್ಳರಿಗೆ ಬಲೆ ಬೀಸಿದ್ದಾರೆ.
ಹಣ ರೀಫಂಡ್ ಹೇಗೆ ಎಂದು ಗೂಗಲ್ ಮಾಡಿ 5 ಲಕ್ಷ ಕಳಕೊಂಡ ಯುವಕ
ಹಾಗೆಯೇ ಯುವಕನೋರ್ವ ಆನ್ಲೈನ್ ವಂಚನೆಗೊಳಗಾಗಿ ಬರೋಬ್ಬರಿ 5 ಲಕ್ಷ ರೂಪಾಯಿಯನ್ನು ಕಳೆದುಕೊಂಡಿದ್ದಾನೆ. ಮಹಾರಾಷ್ಟ್ರದ ಥಾಣೆಯ ಯುವಕನೋರ್ವ ಆಫ್ರಿಕಾದ ದೇಶವೊಂದಕ್ಕೆ ಪ್ರವಾಸ ಹೋಗಲು ಟಿಕೆಟ್ ಬುಕ್ ಮಾಡಿ ನಂತರ ಪ್ರವಾಸ ಕ್ಯಾನ್ಸಲ್ ಮಾಡಿದ್ದಾನೆ. ಪ್ರವಾಸ ಕ್ಯಾನ್ಸಲ್ ಆದ ಹಿನ್ನೆಲೆಯಲ್ಲಿ ಬುಕ್ ಮಾಡಿದ ವಿಮಾನ ಟಿಕೆಟ್ಗಳನ್ನು ಕೂಡ ಕ್ಯಾನ್ಸಲ್ ಮಾಡಿದ್ದು, ಇದರಿಂದ ಆತನಿಗೆ ಹಣ ರೀಫಂಡ್ ಆಗಬೇಕಿತ್ತು. ಆದರೆ ರೀಫಂಡ್ ಮಾಡಿಸಿಕೊಳ್ಳುವುದು ಹೇಗೆ ಎಂದು ಗೂಗಲ್ನಲ್ಲಿ ಆತ ಹುಡುಕಾಟ ನಡೆಸಿದ್ದಾನೆ. ಈ ವೇಳೆ ಸಿಕ್ಕ ಸರ್ಚ್ ರಿಸಲ್ಟ್ ಬಳಸಿಕೊಂಡು ಆತ ರೀಫಂಡ್ಗೆ ಯತ್ನಿಸಿದ್ದು, ಮತ್ತೆ 5 ಲಕ್ಷ ರೂಪಾಯಿಯನ್ನು ಕಳೆದುಕೊಂಡಿದ್ದಾನೆ.
ಪ್ಲೀಸ್, ಇಂಥ ಆಮಿಷಗಳಿಗೆ ಬಲಿಯಾಗ್ಬೇಡಿ; ಪಾರ್ಟ್ ಟೈಮ್ ಜಾಬ್ ಲಿಂಕ್ ಕ್ಲಿಕ್ ಮಾಡಿ 7.23ಲಕ್ಷ ಕಳೆದುಕೊಂಡ ಯುವತಿ
ಆತ ನೀಡಿದ ದೂರಿನಲ್ಲಿ ಯುವಕ ಹಾಗೂ ಆತನ ಸ್ನೇಹಿತ ಕೀನ್ಯಾ (Kenya) ದೇಶದ ರಾಜಧಾನಿ ನೈರೋಬಿಗೆ ತೆರಳಲು ಯೋಜನೆ ರೂಪಿಸಿದ್ದರು. ನೈರೋಬಿಯ (Nairobi) ಮಂಬಸಾ (Mombasa) ನಗರಕ್ಕೆ ಭೇಟಿ ನೀಡಲು ನಿರ್ಧರಿಸಿ ಏಪ್ರಿಲ್ 29 ಹಾಗೂ ಮೇ 5 ರ ಟಿಕೆಟ್ ಬುಕ್ ಮಾಡಿದ್ದಾರೆ. ಇದಕ್ಕಾಗಿ 1.46 ಲಕ್ಷ ರೂಪಾಯಿಯನ್ನು ಅವರು ಪಾವತಿಸಿದ್ದಾರೆ. ಆದರೆ ನಂತರ ಇವರ ಯೋಜನೆ ಬದಲಾಗಿದ್ದು, ಟಿಕೆಟ್ ಕ್ಯಾನ್ಸಲ್ ಮಾಡಲು ನಿರ್ಧರಿಸಿ ಟಿಕೆಟ್ ಹಣ ರೀಫಂಡ್ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ. ಅದರಂತೆ ವೆಬ್ಸೈಟೊಂದರಲ್ಲಿ ಇದ್ದ ಫಾರ್ಮ್ನ್ನು ಏಪ್ರಿಲ್ 11 ರಂದು ಇವರು ತುಂಬಿದ್ದಾರೆ.
ಆದರೆ ಏರ್ಲೈನ್ಸ್ನ ಸಹಾಯವಾಣಿ ಸಂಖ್ಯೆ ಕೈಗೆ ಸಿಗದ ಹಿನ್ನೆಲೆಯಲ್ಲಿ ಅವರು ಗೂಗಲ್ನಲ್ಲಿ ಸರ್ಚ್ ಮಾಡಿದ್ದು, ಅಲ್ಲಿದ್ದ ನಂಬರ್ ನೋಡಿದ್ದಾರೆ. ಈ ವೇಳೆ ದೂರವಾಣಿಯಲ್ಲಿ ಆ ಬದಿಯಿಂದ ಮಾತನಾಡಿದವರು ರೀಫಂಡ್ ಮಾಡುವುದಕ್ಕಾಗಿ ನಮ್ಮ ತಾಂತ್ರಿಕ ತಂಡ (technical team) ನಿಮ್ಮನ್ನು ಸಂಪರ್ಕ ಮಾಡಲಿದೆ ಎಂದು ಹೇಳಿದ್ದಾರೆ.
67 ಕೋಟಿ ಜನರ ದತ್ತಾಂಶ ಕದ್ದು ಮಾರಾಟ: ಸೈಬರ್ ಕಳ್ಳನ ಬಂಧನ
ಇದಾದ ಬಳಿಕ ದೂರುದಾರಿಗೆ ಕರೆಯೊಂದು ಬಂದಿದ್ದು, 1.28 ಲಕ್ಷವನ್ನು ಮರಳಿಸುವುದಾಗಿ ಹೇಳಿದ್ದಾರೆ. ಅಲ್ಲದೇ ಇದಕ್ಕಾಗಿ ಆಪ್ (app) ವೊಂದನ್ನು ಡೌನ್ಲೋಡ್ ಮಾಡುವಂತೆ ಹೇಳಿದ್ದಾರೆ. ಆದರಂತೆ ದೂರುದಾರರು ಆಪ್ ಡೌನ್ಲೋಡ್ ಮಾಡಿದ್ದು ಇದಾದ ಬಳಿಕ ಫೋನ್ನ ಸಂಪೂರ್ಣ ಆಕ್ಸೆಸ್ ಅನ್ನು ಸೈಬರ್ ಕಳ್ಳರು ಪಡೆದಿದ್ದು, ಆತನ ಖಾತೆಯಲ್ಲಿದ್ದ 4.8 ಲಕ್ಷವನ್ನು ಕಬಳಿಸಿದ್ದಾರೆ. ದೂರುದಾರರ ದೂರಿನ ಮೇರೆಗೆ ಛಿತಲ್ಸರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ