ಕೊರೋನಾ ಮಹಾಮಾರಿ : ಎಚ್ಚರ.. ರಾಜಧಾನಿಗೆ ಕಾದಿದೆ 3ನೇ ಅಲೆ ಭೀತಿ

Kannadaprabha News   | Asianet News
Published : Oct 30, 2020, 07:11 AM ISTUpdated : Oct 30, 2020, 08:47 AM IST
ಕೊರೋನಾ ಮಹಾಮಾರಿ : ಎಚ್ಚರ.. ರಾಜಧಾನಿಗೆ ಕಾದಿದೆ 3ನೇ ಅಲೆ ಭೀತಿ

ಸಾರಾಂಶ

ದೇಶದಲ್ಲಿ ಚಳಿಗಾಲ ಆರಂಭವಾಗಿದ್ದು ಇದೀಗ ಮತ್ತೊಂದು ಸುತ್ತು ಮಹಾಮಾರಿ ಅಟ್ಟಹಾಸ ಮೆರೆಯಲು ಸಜ್ಜಾಗಿದೆ. ಮತ್ತೆ ಭಾರೀ ಸಂಖ್ಯೆಯಲ್ಲಿ ಕೇಸುಗಳು ಕಂಡು ಬಂದಿದೆ

ನವದೆಹಲಿ (ಅ.30) : ದೆಹಲಿಯಲ್ಲಿ ಸತತ 2ನೇ ದಿನವಾದ ಗುರುವಾರ ಕೂಡಾ 5000ಕ್ಕಿಂತ ಹೆಚ್ಚು ಕೊರೋನಾ ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ರಾಜಧಾನಿಯಲ್ಲಿ ಕೊರೋನಾದ ಮೂರನೇ ಅಲೆಯ ಭೀತಿ ಎದುರಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ದೆಹಲಿಯ ಆರೋಗ್ಯ ಖಾತೆ ಸಚಿವ ಸತ್ಯೇಂದ್ರ ಜೈನ್‌, ‘3ನೇ ಅಲೆ ಎದ್ದಿದೆ ಎಂಬುದನ್ನು ಈಗಲೇ ಹೇಳಲು ಆಗದು. ಇನ್ನೂ 1 ವಾರ ಕಾಯಬೇಕು. 

ಮಾಸ್ಕ್ ನಿಯಮಕ್ಕೆ ಲಾಜಿಕ್ಕೆ ಇಲ್ಲ

ಆದರೆ ನಾವು ಈಗಾಗಲೇ ಆ ಹಂತ ಪ್ರವೇಶಿಸಿರುವ ಸಾಧ್ಯತೆ ಇದೆ’ ಎಂದು ಹೇಳಿದ್ದಾರೆ. ದೆಹಲಿಯಲ್ಲಿ ಬುಧವಾರ 5,600 ಹೊಸ ಕೇಸು ದಾಖಲಾಗಿತ್ತು. ಹೊಸ ಪ್ರಕರಣಗಳ ಸಂಖ್ಯೆ 5000 ಗಡಿ ದಾಟಿದ್ದು ಇದೇ ಮೊದಲು. 

ಅದರ ಬೆನ್ನಲ್ಲೇ ಗುರುವಾರ ಮತ್ತೆ 5739 ಹೊಸ ಕೇಸು ದಾಖಲಾಗಿವೆ. ಸತತ 2ನೇ ದಿನವೂ 5000ಕ್ಕಿಂತ ಹೆಚ್ಚು ಹೊಸ ಕೇಸು ದಾಖಲಾದ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಆತಂಕ ಶುರುವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

UIDAI Rules: ಯಾವುದೇ ಹೋಟೆಲ್‌ನಲ್ಲಿ ಆಧಾರ್ ಕಾರ್ಡ್ ಫೋಟೋಕಾಪಿ ನೀಡೋ ಅಗತ್ಯವಿಲ್ಲ: ಈ ಹೊಸ ನಿಯಮ ತಿಳ್ಕೊಳ್ಳಿ
ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು