
ಮೋದಿ ಸರ್ಕಾರ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಾಗಿನಿಂದ ಆರ್ಟಿಕಲ್ 370 ತಿದ್ದುಪಡಿ, ನಾಗರಿಕ ಕಾಯ್ದೆ ತಿದ್ದುಪಡಿ ಹೀಗೆ ಯಾವುದೇ ವಿವಾದಾತ್ಮಕ ವಿಷಯದಲ್ಲಿ ಸರ್ಕಾರದ ಮುಖ ಆಗಿದ್ದವರು ಛೋಟಾ ಭಾಯಿ ಅಮಿತ್ ಶಾ.
ಆದರೆ ಕೊರೋನಾ ಬಂದಿದ್ದೇ ಬಂದಿದ್ದು ಒಮ್ಮೆಲೇ ಅಮಿತ್ ಶಾ ತೆರೆಯ ಹಿಂದೆ ಸರಿದು ಕೆಲಸ ಮಾಡುತ್ತಿದ್ದರೆ, ಏಕ್ದಂ ಮೋದಿ ಮಾತ್ರ ತೆರೆಯ ಮುಂದೆ ಬಂದಿದ್ದಾರೆ. ಜನತಾ ಕರ್ಫ್ಯೂ ಇರಲಿ, ಲಾಕ್ಡೌನ್ ಇರಲಿ, ಡಾಕ್ಟರ್ ಹಾಗೂ ನರ್ಸ್ ಸೇರಿದಂತೆ ಕೊರೋನಾ ಸಾಹಸಿಗಳ ಜೊತೆ ನೇರ ಸಂವಾದ ನಡೆಸುವುದಿರಲಿ ಎಲ್ಲ ಸಂದರ್ಭದಲ್ಲೂ ಕಾಣಿಸಿಕೊಳ್ಳುತ್ತಿರುವವರು ಸ್ವಯಂ ಮೋದಿ ಅವರೇ.
21 ದಿನದ ಲಾಕ್ಔಟ್ ನಂತರ ಮುಂದೇನು? ಮೋದಿ ಮುಂದಿನ ಅಸ್ತ್ರವೇನು?
ಹಾಗೆ ನೋಡಿದರೆ ಅಮಿತ್ ಶಾ ಹಗಲು-ರಾತ್ರಿ ಕೆಲಸ ಮಾಡುತ್ತಾ ಮುಖ್ಯಮಂತ್ರಿಗಳು ಮತ್ತು ರಾಜ್ಯಪಾಲರ ಜೊತೆ ಸಂಪರ್ಕದಲ್ಲಿದ್ದಾರೆ. ಆದರೆ ಮಾಧ್ಯಮಗಳ ಮುಂದೆ ಬರುತ್ತಿಲ್ಲ. ಇದಕ್ಕೆ ಕಾರಣ ಮೋದಿ ಅವರಿಗೆ ಇರುವ ಮನೆಯ ಹಿರಿಯಣ್ಣನ ಇಮೇಜ್. ಶಾ ಅವರನ್ನು ಇಷ್ಟಪಡುವವರು ಕಟ್ಟಾಬಿಜೆಪಿ ಮತದಾರರು. ಹೀಗಾಗಿ ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗಲೇಬೇಕಾದ ಇಂದಿನ ಸ್ಥಿತಿಯಲ್ಲಿ ಮೋದಿ ಅವರೇ ಹೆಚ್ಚು ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಸಫಲರಾಗಲಿ, ವಿಫಲರಾಗಲಿ ಇಬ್ಬರೂ ತಂತ್ರ ಹೆಣೆದೇ ಯುದ್ಧಕ್ಕೆ ಹೊರಡುತ್ತಾರೆ ಅನ್ನೋದೇನೋ ನಿಜ.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿದಿ
ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ