ಕೊರೋನಾ ನಿವಾರಣೆಗೆ, 4 ಆಯುರ್ವೇದ ಔಷಧಗಳ ಕ್ಲಿನಿಕಲ್‌ ಪ್ರಯೋಗ!

Published : May 12, 2020, 12:01 PM ISTUpdated : May 12, 2020, 04:44 PM IST
ಕೊರೋನಾ ನಿವಾರಣೆಗೆ, 4 ಆಯುರ್ವೇದ ಔಷಧಗಳ ಕ್ಲಿನಿಕಲ್‌ ಪ್ರಯೋಗ!

ಸಾರಾಂಶ

ಆಯುರ್ವೇದ ಗಿಡಮೂಲಿಕೆಗಳಾದ ಅಶ್ವಗಂಧ, ಯಷ್ಟಿಮಧು, ಗುಡುಚಿ ಪೀಪ್ಲಿ ಹಾಗೂ ಆಯುಷ್‌-64 ಮಾತ್ರೆ| ಕೊರೋನಾ: 4 ಆಯುರ್ವೇದ ಔಷಧಗಳ ಕ್ಲಿನಿಕಲ್‌ ಪ್ರಯೋಗ| ಆಯುಷ್‌ ಸಚಿವಾಲಯ ಹಸಿರು ನಿಶಾನೆ| 

ನವದೆಹಲಿ(ಮೇ.12): ಆಯುರ್ವೇದ ಗಿಡಮೂಲಿಕೆಗಳಾದ ಅಶ್ವಗಂಧ, ಯಷ್ಟಿಮಧು, ಗುಡುಚಿ ಪೀಪ್ಲಿ ಹಾಗೂ ಆಯುಷ್‌-64 ಮಾತ್ರೆಗಳನ್ನು ಕೊರೋನಾ ವೈರಸ್‌ ನಿಯಂತ್ರಣಕ್ಕಾಗಿ ಕ್ಲಿನಿಕಲ್‌ ಪ್ರಯೋಗಕ್ಕೆ ಒಳಪಡಿಸಲು ಆಯುಷ್‌ ಸಚಿವಾಲಯ ಹಸಿರು ನಿಶಾನೆ ತೋರಿಸಿದೆ.

ಈ ಉತ್ಪನ್ನಗಳನ್ನು ಕೊರೋನಾಗೆ ನಿರೋಧಕವಾಗಿ ಅಥವಾ ಇರುವ ಔಷಧಿಗಳಿಗೆ ಮತ್ತಷ್ಟುಪೂರಕವಾಗಿ ಬಳಸುವ ಬಗ್ಗೆ ಪ್ರಯೋಗ ನಡೆಯಲಿದೆ ಎಂದು ಆಯುಷ್‌ ಸಚಿವಾಲಯ ತಿಳಿಸಿದೆ.

ದೇಶವನ್ನುದ್ದೇಶಿಸಿ ರಾತ್ರಿ 8 ಗಂಟೆಗೆ ಪ್ರಧಾನಿ ಮೋದಿ ಮಾತು!

‘ಸಂಜೀವಿನಿ ಆ್ಯಪ್‌ ಸಹಾಯದಿಂದ ಹೈ ರಿಸ್ಕ್‌ ವಲಯಗಳಲ್ಲಿ ಕೆಲಸ ಮಾಡುತ್ತಿರುವ ಆರೋಗ್ಯ ಕಾರ್ಯಕರ್ತರು ಹಾಗೂ ಇತರ ಸಿಬ್ಬಂದಿಗಳ ಮೂಲಕ ಈ ಕ್ಲಿನಿಕಲ್‌ ಪ್ರಯೋಗ ನಡೆಸಲಾಗುತ್ತದೆ. ಸಂಜೀವಿನಿ ಆ್ಯಪ್‌ ಮೂಲಕ 50 ಲಕ್ಷ ಜನರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ’ ಎಂದು ಆಯುಷ್‌ ಸಚಿವಾಲಯ ತಿಳಿಸಿದೆ.

‘ನಮ್ಮ ಸಾಂಪ್ರದಾಯಿಕ ಜ್ಞಾನ ತುಂಬಾ ಶ್ರೀಮಂತವಾಗಿದೆ. ಇದು ಕೊರೋನಾ ನಿಯಂತ್ರಣಕ್ಕೆ ಪರಿಣಾಮಕಾರಿ ಕೆಲಸ ಮಾಡುವ ಸಾಧ್ಯತೆ ಇದೆ’ ಎಂದು ಅದು ವಿಶ್ವಾಸ ವ್ಯಕ್ತಪಡಿಸಿದೆ.

30,000 ಖರ್ಚು ಮಾಡಿ ಮನೆಗೆ ಬಂದವನ ಹೊರಗಟ್ಟಿದ ಕುಟುಂಬ!

4 ಔಷಧದ ಮಹತ್ವ:

ಅಶ್ವಗಂಧವು ಸಕ್ಕರೆ ಅಂಶದ ನಿಯಂತ್ರಣ, ಒತ್ತಡ ಹಾಗೂ ಖಿನ್ನತೆ ನಿಯಂತ್ರಣಕ್ಕೆ ಸಹಕಾರಿ. ಯಷ್ಟಿಮಧು ಅಲ್ಸರ್‌ ನಿರೋಧಕ, ಕೆಮ್ಮು-ನೆಗಡಿ ನಿಯಂತ್ರಕವಾಗಿ ಕೆಲಸ ಮಾಡುತ್ತದೆ. ಗುಡುಚಿ ಪೀಪ್ಲಿ ಜ್ಞಾಪಕ ಶಕ್ತಿ ವೃದ್ಧಿಸುತ್ತದೆ. ಒತ್ತಡ ನಿಯಂತ್ರಣಕ್ಕೂ ಇದು ಸಹಕರಿಸುತ್ತದೆ. ಇನ್ನು ಆಯುಷ್‌-64 ಮಲೇರಿಯಾ ನಿರೋಧಕ ಔಷಧಿಯಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

15 ವರ್ಷಗಳಿಂದ ನಾಪತ್ತೆ: ವಿಡಿಯೋ ವೈರಲ್ ಬಳಿಕ ಮರಳಿ ಕುಟುಂಬ ಸೇರಿದ ಮಾಜಿ ಯೋಧ
ಪೌರತ್ವ ಸಿಗುವ ಮುನ್ನವೇ ವೋಟರ್‌ ಲಿಸ್ಟ್‌ನಲ್ಲಿ ಹೆಸರು, ಸೋನಿಯಾ ಗಾಂಧಿಗೆ ನೋಟಿಸ್‌ ಕೊಟ್ಟ ದೆಹಲಿ ಕೋರ್ಟ್!