ಕರ್ನಾಟಕದಲ್ಲಿ ಕೊರೋನಾ ಆಗಸ್ಟ್‌ನಲ್ಲಿ ತಾರಕಕ್ಕೆ, ಬಳಿಕ ಇಳಿಮುಖ: ವರದಿ

Published : Jul 12, 2020, 10:37 AM ISTUpdated : Jul 12, 2020, 11:00 AM IST
ಕರ್ನಾಟಕದಲ್ಲಿ ಕೊರೋನಾ ಆಗಸ್ಟ್‌ನಲ್ಲಿ ತಾರಕಕ್ಕೆ, ಬಳಿಕ ಇಳಿಮುಖ: ವರದಿ

ಸಾರಾಂಶ

ಕರ್ನಾಟಕದಲ್ಲಿ ಕೊರೋನಾ ಆಗಸ್ಟ್‌ನಲ್ಲಿ ತಾರಕಕ್ಕೆ: ವರದಿ| ಸೆಪ್ಟೆಂಬರ್‌ನಲ್ಲಿ ಸೋಂಕು ಇಳಿಮುಖ

ನವದೆಹಲಿ: ದೇಶ ಹಾಗೂ ಕರ್ನಾಟಕದಲ್ಲಿ ಕೊರೋನಾ ವೈರಸ್‌ ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಿರುವಂತೆಯೇ, ಸಕ್ರಿಯ ಪ್ರಕರಣಗಳ ಸಂಖ್ಯೆ ಇನ್ನಷ್ಟುಹೆಚ್ಚಿ ಸೆಪ್ಟೆಂಬರ್‌ ಅಂತ್ಯದ ವೇಳೆಗೆ ಪರಿಸ್ಥಿತಿ ನಿಯಂತ್ರಣಕ್ಕೆ ಬರಬಹುದು ಎಂದು ‘ಟೈಮ್ಸ್‌ ನೌ-ಪ್ರೊಟಿವಿಟಿ’ ಜಂಟಿ ಅಧ್ಯಯನ ಸಮೀಕ್ಷೆ ಹೇಳಿದೆ.

ಕಳ್ಳರನ್ನು ಕಂಡರೇ ಪೊಲೀಸರಿಗೆ ಭಯ, ಆರೋಪಿಗಳಿಂದ ಬರುತ್ತಿದೆ ಕೊರೋನಾ!

ಕರ್ನಾಟಕದಲ್ಲಿ ಶುಕ್ರವಾರದ ವೇಳೆಗೆ ಸಕ್ರಿಯ ಸೋಂಕಿತರ ಸಂಖ್ಯೆ 19,035 ಇದ್ದು, ಇದರ ಸಂಖ್ಯೆ ಆಗಸ್ಟ್‌ 4ಕ್ಕೆ 53,546ಕ್ಕೆ ಏರಬಹುದು. ಇದು ಅತ್ಯಂತ ಗರಿಷ್ಠ ಮಟ್ಟ. ಬಳಿಕ ಸೆಪ್ಟೆಂಬರ್‌ 25ಕ್ಕೆ ಸೋಂಕಿನ ಪ್ರಮಾಣ ತಗ್ಗಬಹುದು ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ.

ಸರ್ಕಾರದ ವಿರುದ್ಧ ‘ಲೆಕ್ಕ ಕೊಡಿ’ ಅಭಿಯಾನ: ಸಿದ್ದರಾಮಯ್ಯರಿಂದ 100 ಸೆಕೆಂಡಲ್ಲಿ 6 ಪ್ರಶ್ನೆ!

ಇನ್ನು ಕರ್ನಾಟಕದಲ್ಲೇ ಸೋಂಕು ಅಧಿಕ ಪ್ರಮಾಣದಲ್ಲಿರುವ ಬೆಂಗಳೂರನ್ನು ಕೊರೋನಾ ಸದ್ಯಕ್ಕೆ ಬಿಡುವ ಲಕ್ಷಣ ಇಲ್ಲ. ಆಗಸ್ಟ್‌ 10ರ ವೇಳೆಗೆ ಬೆಂಗಳೂರು ಒಂದರಲ್ಲೇ ಅತ್ಯಂತ ಗರಿಷ್ಠ 33,772 ಸಕ್ರಿಯ ಸೋಂಕಿತರು ಇರಬಹುದು. ಸಕ್ರಿಯ ಸೋಂಕಿತರ ಸಂಖ್ಯೆ ಸೆಪ್ಟೆಂಬರ್‌ 25ರ ವೇಳೆಗೆ ನಿಯಂತ್ರಣಕ್ಕೆ ಬರಬಹುದು ಎಂದು ಜಂಟಿ ಅಧ್ಯಯನ ಅಂದಾಜು ಮಾಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರಸಗುಲ್ಲಾ ಖಾಲಿ ಆಯ್ತು ಎಂದು ಮುರಿದು ಬಿತ್ತು ಮದ್ವೆ: ಮದುವೆ ಮನೆಯಾಯ್ತು ರಣಾಂಗಣ
ಮೋದಿ-ಪುಟಿನ್ ಆರ್ಮರ್ಡ್ ಬದಲು ಸಾಮಾನ್ಯ ಟೊಯೋಟಾ ಫಾರ್ಚೂನ್ ಕಾರಿನಲ್ಲಿ ಪ್ರಯಾಣಿಸಿದ್ದೇಕೆ?