ಭಾರತದ ಸಂವಿಧಾನ ಶೋಷಣೆ, ಲೂಟಿಕೋರರ ಪರ: ಕೇರಳ ಸಚಿವ

Published : Jul 06, 2022, 09:27 AM IST
ಭಾರತದ ಸಂವಿಧಾನ ಶೋಷಣೆ, ಲೂಟಿಕೋರರ ಪರ: ಕೇರಳ ಸಚಿವ

ಸಾರಾಂಶ

* ಸಚಿವ ಸಜಿ ಚೆರಿಯನ್‌ ವಿವಾದಾತ್ಮಕ ಭಾಷಣ * ಭಾರತದ ಸಂವಿಧಾನ ಶೋಷಣೆ, ಲೂಟಿಕೋರರ ಪರ: ಕೇರಳ ಸಚಿವ * ಸಜಿ ವಜಾಕ್ಕೆ ವಿಪಕ್ಷ ಕಾಂಗ್ರೆಸ್‌, ಬಿಜೆಪಿ ಆಗ್ರಹ

ಪಟ್ಟಣಂತಿಟ್ಟ(ಜು.06): ‘ಭಾರತದ ಸಂವಿಧಾನವು ಶೋಷಣೆಯನ್ನು ಮನ್ನಿಸುವುದರ ಜೊತೆಗೆ, ದೇಶದ ಜನರನ್ನು ಲೂಟಿ ಹೊಡೆಯುವುದಕ್ಕೆ ನೆರವು ನೀಡುತ್ತದೆ’ ಎಂದು ಕೇರಳದ ಮೀನುಗಾರಿಕೆ ಮತ್ತು ಸಂಸ್ಕೃತಿ ಖಾತೆ ಸಚಿವ ಶಾಜಿ ಚೆರಿಯನ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಈ ಹೇಳಿಕೆಯನ್ನು ಗಂಭೀರ ಅಪರಾಧ ಎಂದು ಬಣ್ಣಿಸಿರುವ ವಿಪಕ್ಷಗಳಾದ ಕಾಂಗ್ರೆಸ್‌ ಮತ್ತು ಬಿಜೆಪಿ, ಸಚಿವ ಶಾಜಿ ಅವರನ್ನು ವಜಾ ಮಾಡುವಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರನ್ನು ಒತ್ತಾಯಿಸಿದೆ.

ಮಲ್ಲಪ್ಪಲ್ಲಿ ಎಂಬಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಶಾಜಿ, ‘ನಾವೆಲ್ಲರೂ ಭಾರತೀಯ ಸಂವಿಧಾನವನ್ನು ಸುಂದರವಾಗಿ ರಚಿಸಲಾಗಿದೆ ಎಂದು ಹೇಳುತ್ತೇವೆ. ಆದರೆ, ನನ್ನ ಅಭಿಪ್ರಾಯದಲ್ಲಿ ಈ ಸುಂದರ ಸಂವಿಧಾನ ಬಹಳಷ್ಟುಜನರನ್ನು ಲೂಟಿ ಮಾಡಲು ನೆರವಾಗಬಲ್ಲದಷ್ಟೇ. 75 ವರ್ಷಗಳಿಂದ ದೇಶದಲ್ಲಿ ಜಾರಿಯಲ್ಲಿರುವ ಈ ಸಂವಿಧಾನವನ್ನು ಕ್ರೋಡೀಕರಿಸಿದ್ದು ಬ್ರಿಟೀಷರು. ಆದರೆ ಇದನ್ನು ಭಾರತೀಯರು ಬರೆದಂತೆ ಬಿಂಬಿಸಲಾಗಿದೆ’ ಎಂದು ಹೇಳಿದ್ದಾರೆ.

‘ಜಾತ್ಯತೀತತೆ ಮತ್ತು ಪ್ರಜಾಪ್ರಭುತ್ವ ಹಾಗೂ ಸುತ್ತಿಗೆ ಮತ್ತು ಚಕ್ರವನ್ನು ಸುಮ್ಮನೆ ಅದರ ಬದಿಯಲ್ಲಿ ಸೇರಿಸಲಾಗಿದೆ. ನಮ್ಮ ದೇಶದ ಕಾರ್ಮಿಕರ ಹೋರಾಟವನ್ನು ಒಪ್ಪಿಕೊಳ್ಳುವುದಿಲ್ಲ, ಭಾರತೀಯ ಸಂವಿಧಾನ ಶೋಷಣೆಯನ್ನು (ಕಾರ್ಮಿಕರ ಶೋಷಣೆಯನ್ನು) ಮನ್ನಿಸುತ್ತದೆ. ಈ ಕಾರಣಕ್ಕಾಗಿಯೇ ದೇಶದ ಕಾರ್ಪೊರೆಟ್‌ ವಲಯದಲ್ಲಿನ ಕೆಲ ಕೋಟ್ಯಾಧೀಶರು ಮತ್ತಷ್ಟುಸಿರಿವಂತರಾಗಿದ್ದಾರೆ’ ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?