ಪ್ರಿಯಾಂಕಾ ಕೊಟ್ಟ ಸಾವಿರದಲ್ಲಿ 297 ಬಸ್‌ಗಳಿಗೆ ಫಿಟ್ನೆಸ್‌ ಸರ್ಟಿಫಿಕೆಟೇ ಇಲ್ಲ!

Published : May 20, 2020, 10:37 PM ISTUpdated : May 20, 2020, 10:38 PM IST
ಪ್ರಿಯಾಂಕಾ ಕೊಟ್ಟ ಸಾವಿರದಲ್ಲಿ 297 ಬಸ್‌ಗಳಿಗೆ ಫಿಟ್ನೆಸ್‌ ಸರ್ಟಿಫಿಕೆಟೇ ಇಲ್ಲ!

ಸಾರಾಂಶ

ಮುಗಿಯದ ಪ್ರಿಯಾಂಕಾ ಬಸ್ ಸುದ್ದಿ/ 297 ಬಸ್ ಗಳಿಗೆ ಫಿಟ್ ನೆಸ್ ಸರ್ಟಿಫೀಕೆಟ್ ಇಲ್ಲ/ ರಾಜಸ್ಥಾನ ಪಾಸಿಂಗ್ ಬಸ್ ಗಳು/ ವಲಸೆ ಕಾರ್ಮಿಕರ ನೆರವಿಗೆ ಬಸ್ ಬಿಡತ್ತೇನೆ ಎಂದಿದ್ದ ಕಾಂಗ್ರೆಸ್  

ಲಕ್ನೋ(ಮೇ 20) ಪ್ರಿಯಾಂಕಾ 1000 ಬಸ್ ಗಳನ್ನು ವಲಸೆ ಕಾರ್ಮಿಕರಿಗೆ ಬಿಡುತ್ತೇನೆ ಇದಕ್ಕೆ ಸರ್ಕಾರ ಅನುಮತಿ ನೀಡಬೇಕು ಎಂದು ಕೇಳಿಕೊಂಡಿದ್ದರು. ಇದಕ್ಕೆ ಸಿಎಂ ಯೋಗಿ ಸಹ ಸ್ಪಂದಿಸಿದ್ದರು. 

ಆದರೆ ಅಸಲಿ ಸಂಗತಿಗಳೇ ಬೇರೆ. ಪ್ರಿಯಾಂಕಾ ಕೊಟ್ಟ ಲಿಸ್ಟ್ ನಲ್ಲಿ ಆಟೋಗಳು, ದ್ವಿಚಕ್ರ ವಾಹನದ ಸಂಖ್ಯೆಯೂ ಸೇರಿತ್ತು ಎಂಬ ಮಾಹಿತಿ ಬಹಿರಂಗವಾಗಿತ್ತು. ಈಗ ಮತ್ತೊಂದು ಸುದ್ದಿಯೂ ಬಂದಿದೆ.

ಪ್ರಿಯಾಂಕಾ ಹೇಳಿರುವ 1000 ಬಸ್ ಗಳು ಸಮಸ್ಯೆಗಳ ತಾಣ.  ರಾಜಸ್ಥಾನ ಪಾಸಿಂಗ್ ನ 297 ಬಸ್ ಗಳಿಗೆ ಫಿಟ್ ನೆಸ್ ಸರ್ಟಿಫಿಕೇಟ್ ಇಲ್ಲ. 98 ಮೂರು ಚಕ್ರದ ವಾಹನಗಳು, ಮೂರು ದ್ವಿಷಕ್ರ ವಾಹನಗಳು, 68 ಕಾರು ಮತ್ತು ಆಂಬುಲೆನ್ಸ್ ಗಳು ಇದರಲ್ಲಿ ಸೇರಿವೆ ಎಂದು ಉತ್ತರ ಪ್ರದೇಶ ಡಿಸಿರಂ ದಿನೇಶ್ ಶರ್ಮಾ ತಿಳಿಸಿದ್ದಾರೆ.

ಪ್ರಿಯಾಂಕಾ ಮಾತಿಗೆ ಯೋಗಿ ಮಣೆ.. ಒಳ್ಳೆ ಕೆಲಸಕ್ಕೆ ಸ್ವಾಗತ!

ಜನರ ಸಹಾಯಕ್ಕೆ ಯಾರೇ ನಿಂತರೂ ಅದನ್ನು ಸ್ವಾಗತ ಮಾಡಬೇಕು ಎಂದು ರಾಜಸ್ಥಾನ ಡಿಸಿಎಂ ಸಚಿನ್ ಪೈಲಟ್ ಹೇಳಿದ್ದಕ್ಕೂ ಟಾಂಗ್ ನೀಡಿದ್ದಾರೆ.   ವಲಸೆ ಕಾರ್ಮಿಕರು ಮನೆ ತಲುಪಲು 1,000 ಬಸ್ಸುಗಳನ್ನು ಕಾಂಗ್ರೆಸ್ ವತಿಯಿಂದ ಓಡಿಸಲು ಅನುಮತಿ ಕೋರಿ ಪ್ರಿಯಾಂಕಾ ಗಾಂಧಿ ವಾದ್ರಾ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಲ್ಲಿ ಮನವಿ ಮಾಡಿಕೊಂಡಿದ್ದರು.

ಯೋಗಿ ಆದಿತ್ಯನಾಥ್‌ಗೆ ಪ್ರಿಯಾಂಕ ಗಾಂಧಿ  ವಾದ್ರಾ ಅವರಿಗೆ ಪತ್ರ ಬರೆದು ವಿಚಾರ ತಿಳಿಸಿದ್ದಾರೆ.  ವಲಸೆ ಕಾರ್ಮಿಕರಿಗಾಗಿ ಕಾಂಗ್ರೆಸ್ ವತಿಯಿಂದ ಬಸ್ಸುಗಳನ್ನು ಓಡಿಸಲು ಅನುಮತಿ ನೀಡುವಂತೆ ಕೋರಿ ಪ್ರಿಯಾಂಕಾ ಗಾಂಧಿ ವಾದ್ರಾ ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದರು. ಬಾಡಿಗೆ ಪಡೆದಿರುವ ಬಸ್ಸುಗಳ ವಿಡಿಯೋ ಕೂಡ ಪೋಸ್ಟ್ ಮಾಡಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಟಿಹಾರ್ ಜಂಕ್ಷನ್‌ನಲ್ಲಿ ಮಹಿಳೆಯ ಭಯಾನಕ ಅನುಭವ: 30-40 ಪುರುಷರು ನುಗ್ಗಲು ಯತ್ನ, ಶೌಚಾಲಯದಲ್ಲಿ ಸಿಲುಕಿದ ಮಹಿಳೆ!
ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!