ಕಾಂಗ್ರೆಸ್‌ಗೆ ಭಾರೀ ಆಘಾತ, 199 ಕೋಟಿ ತೆರಿಗೆ ಪ್ರಕರಣದಲ್ಲಿ ವಿನಾಯಿತಿ ಇಲ್ಲವೆಂದ ನ್ಯಾಯಮಂಡಳಿ

Published : Jul 22, 2025, 07:34 PM IST
Congress flag

ಸಾರಾಂಶ

ಕಾಂಗ್ರೆಸ್ ಪಕ್ಷದ ₹199.15 ಕೋಟಿ ತೆರಿಗೆ ವಿನಾಯಿತಿ ಮೇಲ್ಮನವಿಯನ್ನು ITAT ವಜಾಗೊಳಿಸಿದೆ. ಗಡುವಿನ ನಂತರ ರಿಟರ್ನ್ ಸಲ್ಲಿಕೆ ಮತ್ತು ನಗದು ದೇಣಿಗೆ ನಿಯಮ ಉಲ್ಲಂಘನೆ ಪ್ರಮುಖ ಕಾರಣಗಳು.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ಆದಾಯ ತೆರಿಗೆ (congress income tax case) ಮೇಲ್ಮನವಿ ನ್ಯಾಯಮಂಡಳಿಯಿಂದ ದೊಡ್ಡ ಹಿನ್ನಡೆಯುಂಟಾಗಿದೆ. 2018-19ರ ಮೌಲ್ಯಮಾಪನ ವರ್ಷದ ಒಳಗಾಗಿ ₹199.15 ಕೋಟಿ ಆದಾಯಕ್ಕೆ ತೆರಿಗೆ ವಿನಾಯಿತಿ ನೀಡಬೇಕೆಂದು ಕಾಂಗ್ರೆಸ್ ಸಲ್ಲಿಸಿದ್ದ ಮೇಲ್ಮನವಿಯನ್ನು ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (ITAT) ವಜಾಗೊಳಿಸಿ  ಸುಮಾರು ₹199.15 ಕೋಟಿ ರೂ. ತೆರಿಗೆ ಬೇಡಿಕೆಯನ್ನು ಎತ್ತಿಹಿಡಿದಿದೆ. ಸೋಮವಾರ ಹೊರಡಿಸಿದ ಸುದೀರ್ಘ ಆದೇಶದಲ್ಲಿ ಇಬ್ಬರು ಸದಸ್ಯರ ಪೀಠವು ಈ ತೀರ್ಪು ನೀಡಿದೆ ಎಂದು ಬಾರ್ ಅಂಡ್ ಬೆಂಚ್ ವರದಿ ಮಾಡಿದೆ.

ಪಕ್ಷವು ವಿನಾಯಿತಿಗೆ ಅರ್ಹವಲ್ಲ

ನ್ಯಾಯಮಂಡಳಿಯ ತೀರ್ಪು ಪ್ರಕಾರ, ಕಾಂಗ್ರೆಸ್ ಪಕ್ಷವು ತೆರಿಗೆ ವಿನಾಯಿತಿಗೆ ಅರ್ಹತೆ ಪಡೆಯಲು ಅಗತ್ಯವಿರುವ ಪ್ರಮುಖ ಷರತ್ತುಗಳನ್ನು ಪೂರೈಸಲು ವಿಫಲವಾಗಿದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 13A ಅಡಿಯಲ್ಲಿ ನೀಡಲ್ಪಡುವ ಷರತ್ತುಗಳನ್ನು ಪಾಲಿಸಿಲ್ಲ. ವಿಶೇಷವಾಗಿ, ಪಕ್ಷವು ಆರ್ಥಿಕ ವರ್ಷಕ್ಕೆ ಸಂಬಂಧಪಟ್ಟ ಆದಾಯ ತೆರಿಗೆ ರಿಟರ್ನ್‌ಗಳನ್ನು ನಿರ್ದಿಷ್ಟ ಅವಧಿಗೆ ಒಳಗಾಗಿ ಸಲ್ಲಿಸದಿರುವುದನ್ನು ನ್ಯಾಯಮಂಡಳಿ ಗಂಭೀರವಾಗಿ ಪರಿಗಣಿಸಿದೆ. ವಿಶೇಷವಾಗಿ, ಪಕ್ಷವು ತಮ್ಮ ಆದಾಯ ತೆರಿಗೆ ರಿಟರ್ನ್ ಅನ್ನು ಡಿಸೆಂಬರ್ 31, 2018 ರ ಅಂತಿಮ ಗಡುವಿನ ನಂತರ ಫೆಬ್ರವರಿ 2, 2019 ರಂದು ಸಲ್ಲಿಸಿತ್ತು. ಈ ವಿಳಂಬಿತ ಸಲ್ಲಿಕೆಗಾಗಿ ಪಕ್ಷವು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 13A ಅಡಿಯಲ್ಲಿ ವಿನಾಯಿತಿಗೆ ಅರ್ಹವಲ್ಲ ಎಂದು ತೀರ್ಪು ನೀಡಲಾಗಿದೆ.

ಕಾಂಗ್ರೆಸ್ ಪಕ್ಷದ ವಾದ ಒಪ್ಪದ ನ್ಯಾಯಮಂಡಳಿ

ಅಲ್ಲದೆ, ಕಾಂಗ್ರೆಸ್ ತನ್ನ ರಿಟರ್ನ್‌ನಲ್ಲಿ "ಯಾವುದೇ ಆದಾಯವಿಲ್ಲ" ಎಂದು ಘೋಷಿಸಿದರೂ, ನಂತರ ₹199.15 ಕೋಟಿ ರೂ.ಗಳ ಆದಾಯಕ್ಕಾಗಿ ವಿನಾಯಿತಿ ಕೇಳುತ್ತಿರುವುದೇ ಸರಿಯಲ್ಲ. ಇದರಿಂದ, ಈ ಮಾರ್ಗಸೂಚಿಗಳ ಉಲ್ಲಂಘನೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ವಿನಾಯಿತಿ ಅರ್ಜಿ ತಿರಸ್ಕೃತವಾಗಿದೆ. ನ್ಯಾಯಮಂಡಳಿಯು ಕಾಂಗ್ರೆಸ್ ಪಕ್ಷದ ವಾದವನ್ನು ಒಪ್ಪಿಲ್ಲ ಎಂಬುದು ಸ್ಪಷ್ಟವಾಗಿ ಹೇಳಿದೆ.

ಇನ್ನು ಮುಂದೆ, ಸೆಕ್ಷನ್ 13A ಅಡಿಯಲ್ಲಿ ರಾಜಕೀಯ ಪಕ್ಷಗಳು ತೆರಿಗೆ ವಿನಾಯಿತಿಗೆ ಅರ್ಹರಾಗಬೇಕಾದರೆ, ತಮ್ಮ ಆದಾಯ ತೆರಿಗೆ ರಿಟರ್ನ್‌ಗಳನ್ನು ಗಡುವಿನೊಳಗೆ ಸಲ್ಲಿಸಬೇಕು. ಸೆಕ್ಷನ್ 12A ಅಡಿಯಲ್ಲಿ ಚಾರಿಟಬಲ್ ಟ್ರಸ್ಟ್‌ಗಳಿಗೆ ಅನ್ವಯಿಸುವ ನಿಯಮಗಳನ್ನು ರಾಜಕೀಯ ಪಕ್ಷಗಳಿಗೂ ಅನ್ವಯಿಸಬೇಕೆಂದು ಕಾಂಗ್ರೆಸ್ ವಾದಿಸಿದ್ದರೂ, ITAT ಆ ವಾದವನ್ನು ತಿರಸ್ಕರಿಸಿದೆ.

ನಿಗದಿತ ಷರತ್ತುಗಳಿಗೆ ವಿರುದ್ಧವಾದ ದೇಣಿಗೆ

ಇನ್ನೊಂದು ಗಂಭೀರ ಉಲ್ಲಂಘನೆಯೆಂದರೆ, ಮೌಲ್ಯಮಾಪನದ ವೇಳೆ ಒಟ್ಟು ₹14.49 ಲಕ್ಷ ನಗದು ದೇಣಿಗೆಗಳು ಗುರುತಿಸಲ್ಪಟ್ಟಿವೆ. ಪ್ರತಿಯೊಂದು ದೇಣಿಗೆಯ ಮೊತ್ತವೂ ಅನುಮತಿಸಲಾದ ₹2,000 ಮಿತಿಯನ್ನು ಮೀರಿದ್ದು, ಇದು ಸೆಕ್ಷನ್ 13A(ಡ) ಅಡಿಯಲ್ಲಿ ನಿಗದಿತ ಷರತ್ತುಗಳಿಗೆ ವಿರುದ್ಧವಾಗಿದೆ. ಇದರ ಹಿನ್ನೆಲೆಯಲ್ಲಿ ನ್ಯಾಯಮಂಡಳಿ, ಈ ದೇಣಿಗೆಯ ಸ್ವೀಕೃತಿಯು ನಿಷಿದ್ಧವಾಗಿದೆ ಎಂಬ ನಿಗದಿಯನ್ನು ಮತ್ತೆ ದೃಢಪಡಿಸಿದೆ. ಈ ತೀರ್ಪು, ರಾಜಕೀಯ ಪಕ್ಷಗಳು ತೆರಿಗೆ ವಿನಾಯಿತಿಗಾಗಿ ಸಲ್ಲಿಸುವ ಅರ್ಜಿಗಳಲ್ಲಿ ನಿಯಮಾನುಸಾರ ಮತ್ತು ಸಮಯಪಾಲನೆಯ ಮಹತ್ವವನ್ನು ಮತ್ತೊಮ್ಮೆ ಎತ್ತಿಹಿಡಿದಿದೆ.

ಮುಖ್ಯಾಂಶಗಳು

ಕಾಂಗ್ರೆಸ್ ಪಕ್ಷದ ತೆರಿಗೆ ವಿನಾಯಿತಿ ಮೇಲ್ಮನವಿಗೆ ITAT ನಕಾರ

ಗಡುವಿನ ನಂತರ ರಿಟರ್ನ್ ಸಲ್ಲಿಕೆ, ನಗದು ದೇಣಿಗೆಗಳ ಉಲ್ಲಂಘನೆ ಪ್ರಮುಖ ಕಾರಣ

₹199.15 ಕೋಟಿ ತೆರಿಗೆ ಬೇಡಿಕೆ ಮುಂದುವರಿಕೆ

ರಾಜಕೀಯ ಪಕ್ಷಗಳ ಪಾಲಿಗೆ ಕಾನೂನು ಪಾಲನೆಯ ಮಹತ್ವ ಮತ್ತೊಮ್ಮೆ ಎತ್ತಿಹಿಡಿದ ತೀರ್ಪು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್