ಚೀನಾ ಮತ್ತೆ ಕುತಂತ್ರ: ಶಾಂತಿ ಮಂತ್ರ ಪಠಿಸುತ್ತಲೇ ಹೆಲಿಪ್ಯಾಡ್‌ ನಿರ್ಮಾಣ!

Published : Jun 28, 2020, 08:41 AM ISTUpdated : Jun 28, 2020, 10:17 AM IST
ಚೀನಾ ಮತ್ತೆ ಕುತಂತ್ರ: ಶಾಂತಿ ಮಂತ್ರ ಪಠಿಸುತ್ತಲೇ ಹೆಲಿಪ್ಯಾಡ್‌ ನಿರ್ಮಾಣ!

ಸಾರಾಂಶ

ಚೀನಾ ಮತ್ತೆ ಕುತಂತ್ರ| ಶಾಂತಿ ಮಂತ್ರ ಪಠಿಸುತ್ತಲೇ ಭಾರಿ ಯೋಧರ ನಿಯೋಜನೆ| ಗಡಿಯಲ್ಲ ಹಿಂದೆ ಸರಿಯಲ್ಲ ಎಂದು ನೆರೆ ದೇಶದ ದಬ್ಬಾಳಿಕೆ

ನವದೆಹಲಿ(ಜೂ.28): ಮಾತುಕತೆ ಮೂಲಕ ಶಾಂತಿಯುತ ಮಾರ್ಗದಲ್ಲಿ ಭಾರತದ ಜತೆಗಿನ ಗಡಿ ಸಂಘರ್ಷ ಬಗೆಹರಿಸಿಕೊಳ್ಳುವ ಮಾತುಗಳನ್ನು ಒಂದೆಡೆ ಆಡುತ್ತಿರುವ ಚೀನಾ ಮತ್ತೊಂದೆಡೆ ತನ್ನ ಕುತಂತ್ರಿ ಬುದ್ಧಿ ತೋರಿಸಿದೆ. ಪ್ಯಾಂಗಾಂಗ್‌ ಸರೋವರದ ದಕ್ಷಿಣ ದಂಡೆಯಲ್ಲಿನ ಭಾರತಕ್ಕೆ ಸೇರಿದ ಜಾಗದಲ್ಲಿ ಹೆಲಿಪ್ಯಾಡ್‌ ನಿರ್ಮಾಣ ಮಾಡುತ್ತಿದೆ. ಭಾರಿ ಸಂಖ್ಯೆಯ ಯೋಧರನ್ನೂ ನಿಯೋಜನೆ ಮಾಡಿದೆ. ಇದು ಎರಡೂ ದೇಶಗಳ ನಡುವಣ ಸಂಘರ್ಷಕ್ಕೆ ಮತ್ತಷ್ಟುತುಪ್ಪ ಸುರಿದಿದೆ.

ಚೀನಾ ವಸ್ತು ಬಹಿಷ್ಕರಿಸಲು ಭಾರತದ ಆಟೋಮೊಬೈಲ್ ಕ್ಷೇತ್ರ ಹಿಂದೇಟು!

ಬಾಲಿವುಡ್‌ನ ‘3 ಈಡಿಯಟ್ಸ್‌’ ಸಿನಿಮಾ ಕ್ಲೈಮಾಕ್ಸ್‌ ಚಿತ್ರೀಕರಣ ನಡೆದಿರುವ ಪ್ಯಾಂಗಾಂಗ್‌ ಸರೋವರದಲ್ಲಿ ಒಟ್ಟು 8 ‘ಫಿಂಗರ್‌’ (ಕಡಿದಾದ ಜಾಗ)ಗಳಿವೆ. 8ನೇ ಫಿಂಗರ್‌ನಿಂದಾಚೆಗೆ ಚೀನಾದ ಗಡಿ ಆರಂಭವಾಗುತ್ತದೆ. ಆದರೆ 2ನೇ ಫಿಂಗರ್‌ವರೆಗೂ ತನ್ನ ಜಾಗ ಇದೆ ಎಂದು ಚೀನಾ ಮೊಂಡು ವಾದ ಮಾಡುತ್ತಲೇ ಬಂದಿತ್ತು. ಮೇ ಆರಂಭದಲ್ಲಿ ಭಾರತದ ಜತೆ ಬೇಕಂತಲೇ ಸಂಘರ್ಷ ತೆಗೆದ ಚೀನಾ, ಪಾಂಗಾಂಗ್‌ ಸರೋವರದ 4ನೇ ಫಿಂಗರ್‌ ಬಳಿ ನೆಲೆಗಳನ್ನು ಸ್ಥಾಪಿಸಿಕೊಂಡಿತ್ತು. ಇದೀಗ ಅದೇ ಜಾಗದಲ್ಲಿ ಹೆಲಿಪ್ಯಾಡ್‌ ನಿರ್ಮಾಣ ಆರಂಭಿಸಿದೆ.

ಭಾರತ ಜೊತೆ ಸಂಘರ್ಷ: ಮಡಿದ ಸೈನಿಕರಿಗೆ ಚೀನಾ ಪತ್ರಿಕೆ ಕಂಬನಿ!

ಏಪ್ರಿಲ್‌ನಲ್ಲಿ ಯಾವ ಪರಿಸ್ಥಿತಿ ಇತ್ತೋ ಅದೇ ಸ್ಥಿತಿಯನ್ನು ಕಾಯ್ದುಕೊಳ್ಳಬೇಕು ಎಂಬುದು ಭಾರತದ ಆಗ್ರಹ. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜನೆಗೊಂಡಿರುವ ಚೀನಿ ಸೈನಿಕರು, ವಾಪಸ್‌ ಹೋಗುವ ಪ್ರಶ್ನೆಯೇ ಇಲ್ಲ ಎಂಬ ಧಿಮಾಕು ಮೆರೆಯುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!