ಟಿಬೆಟ್‌ ಗಡಿಭಾಗದಲ್ಲಿ ಚೀನಾ ಭಾರೀ ಸಿದ್ಧತೆ, ಆತಂಕಕಾರಿ ವಿಚಾರ ಬೆಳಕಿಗೆ!

Published : Jun 02, 2021, 07:36 AM ISTUpdated : Jun 02, 2021, 09:42 AM IST
ಟಿಬೆಟ್‌ ಗಡಿಭಾಗದಲ್ಲಿ ಚೀನಾ ಭಾರೀ ಸಿದ್ಧತೆ, ಆತಂಕಕಾರಿ ವಿಚಾರ ಬೆಳಕಿಗೆ!

ಸಾರಾಂಶ

* ಗಡಿಯಲ್ಲಿ ಚೀನಾ ಚಟುವಟಿಕೆ ಹೆಚ್ಚಳ * ಮೂಲಭೂತ ಸೌಕರ‍್ಯ ಹೆಚ್ಚಿಸಿಕೊಳ್ಳುತ್ತಿರುವ ಚೀನಾ * ಭಾರತಕ್ಕಿಂತ ಅನುಕೂಲಕರ ಸ್ಥಳದಲ್ಲಿ ಸೇನಾ ಪೋಸ್ಟ್‌ ಸ್ಥಾಪಿಸುವ ಹುನ್ನಾರ * ಗಡಿ ಪ್ರದೇ​ಶ​ಗ​ಳಿಗೆ ಭೇಟಿ ನೀಡಿದ ಹಿಮಾ​ಚಲ ಸಿಎಂ ಮಾಹಿ​ತಿ * ಈ ಎಲ್ಲಾ ಮಾಹಿತಿ ಕೇಂದ್ರಕ್ಕೂ ರವಾ​ನೆ: ಜೈರಾಂ ಠಾಕೂರ್‌

ಶಿಮ್ಲಾ(ಜೂ.02): ಇತ್ತ ಭಾರತದಲ್ಲಿ ಕೊರೋನಾ 2ನೇ ಅಲೆ ಹಾವಳಿ ಇರುವ ಸಂದ​ರ್ಭ​ದಲ್ಲೇ, ಅತ್ತ ಗಡಿ​ಯಲ್ಲಿ ಚೀನಾ ಮೂಲ​ಭೂತ ಸೌಕ​ರ್ಯ​ಗ​ಳನ್ನು ಹೆಚ್ಚಿ​ಸಿ​ಕೊ​ಳ್ಳು​ತ್ತಿದೆ ಎಂಬ ಆತಂಕ​ಕಾರಿ ಸಂಗತಿ ಬೆಳ​ಕಿಗೆ ಬಂದಿದೆ.

ಚೀನಾ ಜೊತೆ ಗಡಿ ಹಂಚಿ​ಕೊ​ಳ್ಳುವ ಕಿನ್ನಾರ್‌ ಮತ್ತು ಲಹಾಲ್‌ ಸ್ಪಿತಿ ಜಿಲ್ಲೆಯ ಗಡಿ ಪ್ರದೇ​ಶ​ಗ​ಳಿಗೆ ಭೇಟಿ ನೀಡಿದ ಹಿಮಾ​ಚಲ ಪ್ರದೇಶ ಮುಖ್ಯ​ಮಂತ್ರಿ ಜೈರಾಮ್‌ ಠಾಕೂರ್‌ ಅವರು ಈ ವಿಷಯ ಬಹಿರಂಗಪಡಿಸಿದ್ದಾರೆ.

ಚೀನಾದಲ್ಲಿ ಹಕ್ಕಿ ಜ್ವರದ ರೂಪಾಂತರಿ ವೈರಸ್ ಪತ್ತೆ, ಕೋಳಿ ಮಾಂಸವೇ ಮೂಲ

‘ಟಿಬೆಟ್‌ ಪ್ರಾಂತ್ಯ​ದ​ಲ್ಲಿ ಚೀನಾ ಮೂಲ​ಭೂತ ಸೌಕ​ರ್ಯದ ಅಭಿ​ವೃ​ದ್ಧಿಯನ್ನು ಭಾರೀ ಪ್ರಮಾ​ಣ​ದಲ್ಲಿ ತ್ವರಿ​ತ​ಗೊ​ಳಿ​ಸಿದೆ. ಟಿಬೆಟ್‌ ಪ್ರಾಂತ್ಯ​ದಲ್ಲಿ ಭಾರ​ತದ ಪೋಸ್ಟ್‌​ಗಳಿ​ಗಿಂತಲೂ ಉತ್ತ​ಮ​ ಅಥವಾ ಅನು​ಕೂ​ಲ​ಕ​ರ​ವಾದ ಸ್ಥಳ​ವನ್ನು ಶೋಧಿ​ಸಲು ಚೀನಾ ಯತ್ನಿ​ಸು​ತ್ತಿದೆ’ ಎಂದು ಅವರು ಹೇಳಿದ್ದಾರೆ.

‘ಚೀನಾದ ಅಭಿ​ವೃದ್ಧಿ ಕಾರ್ಯ​ಗಳು ಚೀನಾದ ಗಡಿ ವ್ಯಾಪ್ತಿ​ಯಲ್ಲೇ ಇವೆ. ಈ ಕುರಿ​ತಾದ ಮಾಹಿ​ತಿ​ಯನ್ನು ಕೇಂದ್ರ ಸರ್ಕಾ​ರಕ್ಕೆ ರವಾ​ನಿ​ಸ​ಲಾ​ಗು​ತ್ತದೆ. ಇಂಥ ಸಂಕ​ಷ್ಟ​ದ ಅವ​ಧಿ​ಯಲ್ಲೂ ಭಾರ​ತೀಯ ಯೋಧರು ಚೀನಾ​ದ ಸಮ​ರ್ಥ​ವಾಗಿ ಕಾರ್ಯ ನಿರ್ವ​ಹಿ​ಸು​ತ್ತಿ​ದ್ದಾರೆ. ಅವ​ರಿಗೆ ನೈತಿಕ ಧೈರ್ಯ ತುಂಬು​ವುದು ನನ್ನ ಆದ್ಯ ಕರ್ತ​ವ್ಯ​ವಾ​ಗಿದೆ’ ಎಂದಿ​ದ್ದಾರೆ.

ಗಲ್ವಾನ್‌ ಸಂಘರ್ಷಕ್ಕೆ ಒಂದು ವರ್ಷ: ಚೀನಾ, ಭಾರತ ಸಂಬಂಧಕ್ಕೆ ತಿರುವು ಕೊಟ್ಟ ಹೋರಾಟ!

ಇತ್ತೀ​ಚೆ​ಗಷ್ಟೇ ಗಡಿ ಪ್ರದೇ​ಶ​ಗ​ಳಿಗೆ ಭೇಟಿ ನೀಡಿ​ರುವ ಮುಖ್ಯ​ಮಂತ್ರಿ ಜೈರಾಮ್‌ ​ಠಾ​ಕೂರ್‌ ಅವರು ಅಲ್ಲಿನ ವಾಸ್ತವ ಸ್ಥಿತಿ​ಯ ಮಾಹಿ​ತಿಯನ್ನು ರಾಜ್ಯದ ಜನ​ತೆ ಮುಂದಿ​ಡ​ಬೇಕು ಎಂದು ಹಿಮಾ​ಚಲ ಕಾಂಗ್ರೆಸ್‌ ಆಗ್ರ​ಹಿ​ಸಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Actress Assault Case: ಆರು ಆರೋಪಿಗಳಿಗೆ 20 ವರ್ಷ ಜೈಲು ಶಿಕ್ಷೆ ಘೋಷಿಸಿದ ಕೇರಳ ಕೋರ್ಟ್‌
ಎರಡು ಹಂತಗಳಲ್ಲಿ ನಡೆಯಲಿದೆ ಜನಗಣತಿ, 11,718 ಕೋಟಿ ಮೀಸಲಿಟ್ಟ ಸರ್ಕಾರ; ಇದೇ ಮೊದಲ ಬಾರಿಗೆ ಡಿಜಿಟಲ್‌ ಮೂಲಕ ಗಣತಿ!