
ಅರುಣಾಚಲ ಪ್ರದೇಶ(ಸೆ.12): ಲಡಾಖ್ ಗಡಿ ಸಂಘರ್ಷದ ಬೆನ್ನಲ್ಲೇ ಅರುಣಾಚಲ ಪ್ರದೇಶದ ಅಪ್ಪರ್ ಸುಬಾನ್ಸಿರಿ ಗಡಿಭಾಗದಲ್ಲಿ ಉದ್ವಿಘ್ನ ವಾತಾವರಣ ನಿರ್ಮಾಣವಾಗಿತ್ತು. ಸೆಪ್ಟೆಂಬರ್ 2 ರಂದು ಐವರು ಭಾರತೀಯರು ಅರಿವಿಲ್ಲದೆ ಚೀನಾ ಗಡಿ ಪ್ರವೇಶಿಸಿ ಕಾಣೆಯಾಗಿದ್ದರು. ಈ ಕುರಿತು ಭಾರತೀಯ ಸೇನೆ ಐವರು ಭಾರತೀಯರನ್ನು ಬಿಡುಗಡೆ ಮಾಡುವಂತೆ ಚೀನಾ ಸೇನೆಗೆ ಒತ್ತಾಯ ಮಾಡಿತ್ತು. ಭಾರತದ ಸತತ ಪ್ರಯತ್ನದ ಫಲವಾಗಿ ಇದೀಗ ಐವರು ಭಾರತೀಯನ್ನು ಚೀನಾ ಸೇನೆ ಹಸ್ತಾಂತರಿಸಿದೆ.
ಲಡಾಖ್ ಬೆನ್ನಲ್ಲೇ ಅರುಣಾಚಲ ಪ್ರದೇಶ ನಮ್ಮದು ಎಂದು ಚೀನಾ; ಮತ್ತೆ ಶುರುವಾಯ್ತು ಕಿರಿಕ್!...
"
ಚೀನಾ ಸೇನೆ ಐವರು ಭಾರತೀಯರನ್ನು ವಶಕ್ಕೆ ಪಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದರು. ತಕ್ಷಣವೇ ಭಾರತೀಯ ಸೇನೆ ಉನ್ನತ ಮಟ್ಟದಲ್ಲಿ ಚೀನಾ ಸೇನೆ ಮೇಲೆ ಒತ್ತಾಯ ಹಾಕಿತ್ತು. ಇನ್ನು ಸೆಪ್ಟೆಂಬರ್ 8 ರಂದು ಚೀನಾ ಸೇನೆ ಐವರು ಭಾರತೀಯರು ಚೀನಾ ಗಡಿ ಪ್ರವೇಶಿಸಿದ ಕಾರಣ ತಮ್ಮ ವಶದಲ್ಲಿರುವುದಾಗಿ ಹಾಟ್ಲೈನ್ ಸಂದೇಶ ಕಳುಹಿಸಿತ್ತು.
ಇಂದು(ಸೆ.12) ಚೀನಾ ಸೇನೆ ಕಿಬಿತ್ತು ಗಡಿ ಮೂಲಕ ಐವರು ಭಾರತೀಯರನ್ನು ಭಾರತೀಯ ಸೇನೆಗೆ ಹಸ್ತಾಂತರಿಸಿದೆ. ಸದ್ಯ ಭಾರತಕ್ಕೆ ಮರಳಿರುವ ಐವರು ಭಾರತೀಯರನ್ನು 14 ದಿನ ಕ್ವಾರಂಟೈನ್ಗೆ ಒಳಪಡಿಸಲಾಗಿದೆ. 14 ದಿನದ ಬಳಿಕ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗುವುದು ಎಂದು ಸೇನೆ ಹೇಳಿದೆ.
ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪ್ರೇಮಾ ಖಂಡು ಈ ಕುರಿತು ಟ್ವೀಟ್ ಮೂಲಕ ಸಂತಸ ಹಂಚಿಕೊಂಡಿದ್ದಾರೆ. ಭಾರತೀಯ ಸೇನೆಗೆ ಹಾಗೂ ಅಧಿಕಾರಿಗಳ ಧನ್ಯವಾದ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ