ಬಿಜೆಪಿಯಷ್ಟು ಬಲಿಷ್ಠ ಸಂಘಟಿತ ಪಕ್ಷ ಇನ್ನೊಂದಿಲ್ಲ : ಚಿದಂಬರಂ | ಕಾಂಗ್ರೆಸ್‌ಗೆ ಭವಿಷ್ಯವಿಲ್ಲ ರಾಹುಲ್ ಆಪ್ತರಿಗೂ ಗೊತ್ತು: ಬಿಜೆಪಿ

Published : May 17, 2025, 07:15 AM IST
ಬಿಜೆಪಿಯಷ್ಟು ಬಲಿಷ್ಠ ಸಂಘಟಿತ ಪಕ್ಷ ಇನ್ನೊಂದಿಲ್ಲ : ಚಿದಂಬರಂ | ಕಾಂಗ್ರೆಸ್‌ಗೆ ಭವಿಷ್ಯವಿಲ್ಲ ರಾಹುಲ್ ಆಪ್ತರಿಗೂ ಗೊತ್ತು: ಬಿಜೆಪಿ

ಸಾರಾಂಶ

ಎನ್‌ಡಿಎ ವಿರುದ್ಧ ರಚನೆಯಾದ ಇಂಡಿ ಕೂಟದಲ್ಲಿ ಮೊದಲಿನಷ್ಟು ಮೈತ್ರಿ ಉಳಿದಿದೆಯೋ ಇಲ್ಲವೋ’ ಎಂದು ಹಿರಿಯ ಕಾಂಗ್ರೆಸ್‌ ನಾಯಕ ಪಿ. ಚಿದಂಬರಂ ಅನುಮಾನ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಬಿಜೆಪಿಯ ಸಧೃಡ ಸಂಘಟನೆಯನ್ನು ಪ್ರಶಂಸಿಸಿದ್ದಾರೆ.

ನವದೆಹಲಿ (ಮೇ.17): ‘ಎನ್‌ಡಿಎ ವಿರುದ್ಧ ರಚನೆಯಾದ ಇಂಡಿ ಕೂಟದಲ್ಲಿ ಮೊದಲಿನಷ್ಟು ಮೈತ್ರಿ ಉಳಿದಿದೆಯೋ ಇಲ್ಲವೋ’ ಎಂದು ಹಿರಿಯ ಕಾಂಗ್ರೆಸ್‌ ನಾಯಕ ಪಿ. ಚಿದಂಬರಂ ಅನುಮಾನ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಬಿಜೆಪಿಯ ಸಧೃಡ ಸಂಘಟನೆಯನ್ನು ಪ್ರಶಂಸಿಸಿದ್ದಾರೆ.

ಕಾಂಗ್ರೆಸ್‌ ನಾಯಕರಾದ ಮೃತ್ಯುಂಜಯ್ ಸಿಂಗ್ ಯಾದವ್ ಮತ್ತು ಸಲ್ಮಾನ್‌ ಖುರ್ಷಿದ್‌ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಚಿದಂಬರಂ ‘ಇಂಡಿ ಕೂಟದ ಭವಿಷ್ಯ ಉಜ್ವಲವಾಗಿಲ್ಲ. ನನ್ನ ಅನುಭವ ಮತ್ತು ಓದಿದ ಇತಿಹಾಸದ ಪ್ರಕಾರ, ಯಾವುದೇ ರಾಜಕೀಯ ಪಕ್ಷವು ಬಿಜೆಪಿಯಷ್ಟು ಬಲಿಷ್ಠವಾಗಿ ಸಂಘಟಿತವಾಗಿಲ್ಲ’ ಎಂದಿದ್ದಾರೆ. ಇದೇ ವೇಳೆ, ‘ಇಂಡಿ ಕೂಟಕ್ಕೆ ಮತ್ತೆ ಜೀವ ಮತ್ತು ಶಕ್ತಿ ತುಂಬಬಹುದು. ಇನ್ನೂ ಕಾಲ ಮಿಂಚಿಲ್ಲ’ ಎಂಬ ಆಶಾದಾಯಕ ಮಾತುಗಳನ್ನೂ ಆಡಿದ್ದಾರೆ. ಅಂತೆಯೇ, 2029ರ ಚುನಾವಣೆಯನ್ನು ದೇಶದ ಪ್ರಜಾಪ್ರಭುತ್ವದ ಮಹಾ ತಿರುವು ಎಂದು ಕರೆದಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಸೈನ್ಯವನ್ನೂ ನಂಬುತ್ತಿಲ್ಲ, ಪಾಕಿಸ್ತಾನ ಧ್ವನಿಯಾಗಿ ಮಾತನಾಡುತ್ತಿದೆ: ಕೇಂದ್ರ ಸಚಿವ ಜೋಶಿ ಗರಂ

ಬಿಜೆಪಿ ಪ್ರತಿಕ್ರಿಯೆ:

ಚಿದಂಬರಂ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿಯ ರಾಷ್ಟ್ರೀಯ ವಕ್ತಾರ ಪ್ರದೀಪ್‌ ಭಂಡಾರಿ, ‘ಕಾಂಗ್ರೆಸ್‌ಗೆ ಭವಿಷ್ಯವಿಲ್ಲ ಎಂಬುದು ರಾಹುಲ್‌ ಗಾಂಧಿಯವರ ಆಪ್ತರಿಗೂ ಗೊತ್ತು’ ಎಂದು ಕಾಲೆಳೆದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಡಿಗೋ ವಿಮಾನ ರದ್ದಾಗಿ ಪರದಾಡುತ್ತಿರುವ ಪ್ರಯಾಣಿಕರ ನೆರವಿಗೆ ಧಾವಿಸಿದ ಭಾರತೀಯ ರೈಲ್ವೆ
ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ