ನಿವೃತ್ತ ಸಿಜೆಐ ಚಂದ್ರಚೂಡ್‌ ಮನೆ ಖಾಲಿ ಮಾಡಿಸಿ : ಕೇಂದ್ರಕ್ಕೆ ಪತ್ರ

Kannadaprabha News   | Kannada Prabha
Published : Jul 07, 2025, 05:01 AM IST
Justice DY Chandrachud

ಸಾರಾಂಶ

ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ನಿವೃತ್ತಿ ಬಳಿಕವೂ 8 ತಿಂಗಳಿಂದ ತಮಗೆ ಈ ಹಿಂದೆ ನೀಡಿದ್ದ ಅಧಿಕೃತ ಸರ್ಕಾರಿ ವಾಸದಲ್ಲಿ ವಾಸವಿದ್ದು ಅವರನ್ನು ತೆರವುಗೊಳಿಸುವಂತೆ ಸುಪ್ರೀಂಕೋರ್ಟ್‌ನ ಆಡಳಿತ ವಿಭಾಗ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ.

ನವದೆಹಲಿ: ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ನಿವೃತ್ತಿ ಬಳಿಕವೂ 8 ತಿಂಗಳಿಂದ ತಮಗೆ ಈ ಹಿಂದೆ ನೀಡಿದ್ದ ಅಧಿಕೃತ ಸರ್ಕಾರಿ ವಾಸದಲ್ಲಿ ವಾಸವಿದ್ದು ಅವರನ್ನು ತೆರವುಗೊಳಿಸುವಂತೆ ಸುಪ್ರೀಂಕೋರ್ಟ್‌ನ ಆಡಳಿತ ವಿಭಾಗ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ.

2022ರ ನವೆಂಬರ್‌ ನಿಂದ 2024ರ ನವೆಂಬರ್‌ವರೆಗೆ ನ್ಯಾ. ಚಂದ್ರಚೂಡ್‌ ಭಾರತದ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು. ಈ ವೇಳೆ ಅವರಿಗೆ ದೆಹಲಿಯ ಲ್ಯುಟನ್ಸ್‌ ಪ್ರದೇಶದ ನ. 5, ಕೃಷ್ಣ ಮೆನನ್‌ ಮಾರ್ಗದಲ್ಲಿ ಅಧಿಕೃತ ಮನೆ ನೀಡಲಾಗಿತ್ತು. ಆದರೆ ನಿವೃತ್ತಿ ಬಳಿಕ ಇನ್ನೂ 6 ತಿಂಗಳು ಮನೆಯಲ್ಲೇ ಇರಲು ಅವಕಾಶ ನೀಡುವಂತೆ ತಮ್ಮ ನಂತರ ಸಿಜೆಐ ಹುದ್ದೆ ಏರಿದ್ದ ನ್ಯಾ.ಸಂಜೀವ್‌ ಖನ್ನಾಗೆ ಮನವಿ ಮಾಡಿದ್ದರು. ನ್ಯಾ.ಖನ್ನಾ ಕೂಡಾ ತಾವು ಹಿಂದೆ ಇದ್ದ ಮನೆ ತೊರೆದು ಸಿಜೆಐಗಳಿಗೆ ನೀಡುವ ಮನೆಗೆ ಬರಲು ನಿರಾಕರಿಸಿದ್ದರು. ಹೀಗಾಗಿ ನ್ಯಾ.ಚಂದ್ರಚೂಡ್‌ ಮನವಿಯನ್ನು ಕೇಂದ್ರ ಸರ್ಕಾರ ಪುರಸ್ಕರಿಸಿತ್ತು.

ಈ ನಡುವೆ ಚಂದ್ರಚೂಡ್‌ ಕೋರಿಕೆಯಂತೆ ಬಾಡಿಗೆಗೆ ಕೇಂದ್ರ ಸರ್ಕಾರ ಮತ್ತೊಂದು ಮನೆ ನೀಡಿತ್ತು. ಆದರೆ ಅದರ ದುರಸ್ತಿಗೆ ಸಮಯ ಬೇಕಾದ ಕಾರಣ, ಈ ಹಿಂದೆ ಹೇಳಿದಂತೆ 2025ರ ಏಪ್ರಿಲ್‌ನಲ್ಲಿ ಸಿಜೆಐ ಮನೆ ಖಾಲಿ ಮಾಡಲು ಚಂದ್ರಚೂಡ್‌ ವಿಫಲರಾಗಿದ್ದರು. ಈ ಹಿನ್ನೆಲೆಯಲ್ಲಿ ಮತ್ತೆ ಅವರು ಹಾಲಿ ಸಿಜೆಐ ಬಿ.ಆರ್‌.ಗವಾಯಿ ಅವರಿಗೆ ಪತ್ರ ಬರೆದು ಇನ್ನಷ್ಟು ದಿನ ಉಳಿಯಲು ಅವಕಾಶ ಕೋರಿದ್ದರು. ಅದರಂತೆ ಮೇ 31ರಂದು ಚಂದ್ರಚೂಡ್‌ ಮನೆ ಖಾಲಿ ಮಾಡಬೇಕಿತ್ತು. ಆದರೆ ಈ ಅವಧಿಯಲ್ಲು ಅವರು ಮನೆ ಖಾಲಿ ಮಾಡದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ನ ಆಡಳಿತ ವಿಭಾಗ ನ್ಯಾ. ಚಂದ್ರಚೂಡ್‌ ಅವರ ತೆರವು ಕೋರಿ ನಗರಾಭಿವೃದ್ಧಿ ಸಚಿವಾಲಯಕ್ಕ ಪತ್ರ ಬರೆದಿದೆ.

ಈ ನಡುವೆ ತಮಗೆ ಪರ್ಯಾಯವಾಗಿ ನೀಡಿರುವ ಮನೆಯ ದುರಸ್ತಿ ಕಾರ್ಯ ನಡೆಯುತ್ತಿದೆ. ಆ ಮನೆಯನ್ನು ತಮ್ಮ ಇಬ್ಬರು ವೈದ್ಯಕೀಯ ಸಮಸ್ಯೆಯಿಂದ ಬಳುತ್ತಿರುವ ಮಕ್ಕಳಿಗೆ ಅನುಕೂಲವಾಗುತ್ತಿರುವ ರೀತಿಯಲ್ಲಿ ಪರಿವರ್ತಿಸಲಾಗುತ್ತಿದೆ. ಈಗಾಗಲೇ ಅಲ್ಲಿಗೆ ತೆರಳಲು ಎಲ್ಲಾ ಸಿದ್ಧತೆ ನಡೆಸಲಾಗಿದೆ. ಕೆಲವೇ ದಿನಗಲ್ಲಿ ನಾವು ಅಲ್ಲಿಗೆ ತೆರಳಲಿದ್ದೇವೆ ಎಂದು ನ್ಯಾ.ಚಂದ್ರಚೂಡ್‌, ಸುಪ್ರೀಂಕೋರ್ಟ್‌ನ ಆಡಳಿತ ವಿಭಾಗಕ್ಕೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌
ಜಾಲತಾಣಗಳಲ್ಲಿ ಮಕ್ಕಳ ಬಳಕೆ ನಿರ್ಬಂಧಿಸಿ: ಸುಧಾ ಮೂರ್ತಿ