ಬೆಂಗಳೂರು(ಜ.12): ಜನರು ತಮ್ಮ ಮಾತೃಭಾಷೆಯ ಬಗ್ಗೆ ಹೆಮ್ಮೆ ಪಡುವುದು ತಮ್ಮ ಬೇರೆ ಭಾಷೆಯ ಸ್ನೇಹಿತರೊಂದಿಗೆ ಆ ಬಗ್ಗೆ ಚರ್ಚೆ ನಡೆಸುವುದು. ಮತ್ತು ಆನ್ಲೈನ್ನಲ್ಲಿ ತಮ್ಮ ಭಾಷೆಯ ಬಗ್ಗೆ ಹೆಮ್ಮೆ ಪಟ್ಟು ಕಿತ್ತಾಡುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಆದರೆ ಕರ್ನಾಟಕ ಸಂಗೀತಗಾರ ಪ್ರಿನ್ಸ್ ರಾಮ ವರ್ಮಾ ಅವರು ದಕ್ಷಿಣ ಭಾರತದ ಶಾಸ್ತ್ರೀಯ ಸಂಗೀತಕ್ಕೆ ಯಾವ ಭಾಷೆ ಹೆಚ್ಚು ಹೊಂದುತ್ತದೆ ಎಂಬುದರ ಕುರಿತು ತಮ್ಮ ಅಭಿಪ್ರಾಯವನ್ನು ಹಾಸ್ಯಮಯವಾಗಿ ವರ್ಣಿಸಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜೊತೆಗೆ ಪ್ರಿನ್ಸ್ ರಾಮ ವರ್ಮಾ ಅವರ ವರ್ಣನೆ ನೆಟ್ಟಿಗರನ್ನು ನೆಗೆಗಡಲಲ್ಲಿ ತೇಲಿಸಿದೆ.
ವೈರಲ್ ವೀಡಿಯೊವೊಂದರಲ್ಲಿ, ವರ್ಮಾ ಎಲ್ಲಾ ನಾಲ್ಕು ದಕ್ಷಿಣ ಭಾರತದ ಭಾಷೆಗಳಾದ ಕನ್ನಡ, ತಮಿಳು ಮಲೆಯಾಲಂ ಹಾಗೂ ತೆಲುಗು ಭಾಷೆಗಳಲ್ಲಿ ನೀವು ದಪ್ಪವಾಗಿದ್ದೀರಿ ಎಂಬ ವಾಕ್ಯಕ್ಕಾಗಿ ಸ್ವರಕ್ಷರಂ ಅಥವಾ ಏಳು ಸಂಗೀತದ ಟಿಪ್ಪಣಿಗಳನ್ನು ಬಳಸಿದ್ದಾರೆ. ಯಾವುದೇ ಕೇಳುಗರು ಊಹಿಸದ ರೀತಿಯಲ್ಲಿ ಅವರು ಅದನ್ನು ಹಾಸ್ಯಮಯವಾಗಿ ಮುಕ್ತಾಯಗೊಳಿಸುತ್ತಾರೆ.
ನಮ್ಮ ದಕ್ಷಿಣ ಭಾರತದಲ್ಲಿ ನಾಲ್ಕು ಭಾಷೆಗಳಿವೆ. ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ. ಆದರೆ ಯಾವ ಭಾಷೆ ಹೆಚ್ಚು ಮಧುರವಾಗಿದೆ? ತೆಲುಗರು, ಸುಂದರ ತೆಲುಗು ಎನ್ನುತ್ತಾರೆ. ತಮಿಳು ಜನರು ಸೇನ್ ತಮಿಳ್ ಎಂದು ಹೇಳುತ್ತಾರೆ. ಮಲಯಾಳಂ ಸಂಸ್ಕೃತ ಮತ್ತು ತಮಿಳಿನ ಸುಂದರ ಸಂಯೋಜನೆಯಾಗಿದೆ ಎಂದು ಅವರು ಹೇಳುತ್ತಾರೆ.
ಆದರೆ ನಮ್ಮ ದಕ್ಷಿಣ ಭಾರತದ ಶಾಸ್ತ್ರೀಯ ಸಂಗೀತಕ್ಕೆ ಯಾವ ಭಾಷೆ ಹೆಚ್ಚು ಸರಿಹೊಂದುತ್ತದೆ ಎಂದು ನೋಡೋಣ. ಆದ್ದರಿಂದ ನಾವು ಒಂದು ವಾಕ್ಯವನ್ನು ತೆಗೆದುಕೊಳ್ಳೋಣ ಎನ್ನುವ ಅವರು, ನೀವು ದಪ್ಪವಾಗಿದ್ದೀರಿ ಎಂಬ ವಾಕ್ಯವನ್ನು ಬೇರೆ ಬೇರೆ ಭಾಷೆಯಲ್ಲಿ ಹೇಗೆ ಹೇಳುತ್ತಾರೆ ಎಂಬುದನ್ನು ವಿವರಿಸುತ್ತಾರೆ. ನೀವು ಮಲಯಾಳಂನಲ್ಲಿ ದಪ್ಪವಾಗಿದ್ದೀರಿ ಎಂದು ಹೇಳಲು 'ನಿಂಗಲ್ ಥಡಿಯನ್ ಆನ್' ಎಂದು ಹೇಳುತ್ತಾರೆ. ಆದರೆ ಅದು ಚೆನ್ನಾಗಿಲ್ಲ. ನೀವು ತೆಲುಗಿನಲ್ಲಿ 'ಮಿರು ಲವುಗ ಉನ್ನಾರು' ಅಂತಲೇ ಹೇಳುತ್ತೀರಿ. 'ಲವುಗ ಉನ್ನಾರು' ಸ್ವಲ್ಪ ಓಕೆ ಅನ್ನಿಸುತ್ತದೆ ಹಾಗೆಯೇ ತಮಿಳಿನಲ್ಲಿ, 'ನಿಂಗ ರೊಂಬ ಗುಂಡಾರುಕೆ ಎನ್ನುತ್ತಾರೆ. ಗುಂಡು ಎಂಬ ಪದವು ಮುದ್ದಾಗಿದೆ. ಆದರೆ ಕನ್ನಡದಲ್ಲಿ ಅದು ಹೇಗೆ ಧ್ವನಿಸುತ್ತದೆ. ಕನ್ನಡದಲ್ಲಿ ಕೊಬ್ಬು ಎಂದರೆ ದಪ್ಪ. ಆದ್ದರಿಂದ ನೀವು ದಪ್ಪವಾಗಿದ್ದೀರಿ ಎಂದು ಹೇಳಲು ಅದು 'ನೀ ಧಾ ಪಾ' ಆಗಿರುತ್ತದೆ.
ಪಾರ್ಕಿನಲ್ಲಿ ಗಿಟಾರ್ ನುಡಿಸುವ ಹುಡುಗಿ, ಜಿಂಕೆಗಳು ಬರುತ್ತವೆ ಓಡೋಡಿ
ಹೀಗೆ ಅವರು ಕನ್ನಡ ಪದಗುಚ್ಛಕ್ಕೆ ಸಂಗೀತದ ಧ್ವನಿಯನ್ನು ನೀಡುತ್ತಾರೆ ನಿಮ್ಮ ತಂದೆ ದಪ್ಪ ಎಂಬುದನ್ನು 'ನಿಮಪಾ ಧಾ ಪಾ, ನಿಮ್ಮ ತಾಯಿ ದಪ್ಪ, ಎಂಬುದನ್ನು 'ನಿಮಮ ಧಾ ಪಾ', ನಿಮ್ಮ ಮಗ ದಪ್ಪ, 'ನಿಮಗ ಧಾ ಪಾ' ಎಂದೂ ಹೇಳಬಹುದು. ಹೀಗಾಗಿ ಇದು ಕನ್ನಡಕ್ಕೆ ಹೆಚ್ಚು ಸರಿ ಹೊಂದಬಲ್ಲದು. ಆದುದರಿಂದಲೇ ನಾವೆಲ್ಲರೂ ದಕ್ಷಿಣ ಭಾರತದ ಶಾಸ್ತ್ರೀಯ ಸಂಗೀತವನ್ನು ಹಾಡುತ್ತೇವೆ ಹಾಗೂ ಅದನ್ನು ಕರ್ನಾಟಕ ಸಂಗೀತ ಎಂದು ಕರೆಯಲಾಗುತ್ತದೆ ಎಂದು ಹಾಸ್ಯಮಯವಾಗಿ ವರ್ಣಿಸಿದರು.
ಕಳೆದ ವರ್ಷ ಅಕ್ಟೋಬರ್ನಲ್ಲಿ ಪೋಸ್ಟ್ ಮಾಡಲಾದ ಈ ವೀಡಿಯೊವನ್ನು ಟ್ವಿಟರ್ ಬಳಕೆದಾರರಾದ ರಾಮನಾಥ್ ಅವರು ರಿಟ್ವಿಟ್ ಮಾಡಿದ್ದು. ಸುಮಾರು ಎರಡು ನಿಮಿಷಗಳ ಈ ವಿಡಿಯೋವನ್ನು ಇದುವರೆಗೆ 1 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ರಾಮ ವರ್ಮಾ ಅವರ ಈ ಹಾಸ್ಯ ಲೇಪಿತ ಮಾತು ಕೇಳಿ ನೆಟ್ಟಿಗರು ಖುಷಿಯಾಗಿದ್ದಾರೆ.
ಬಾಳೆಹೊನ್ನೂರಲ್ಲಿ ಮಳೆ ಸುರಿದರೂ ಹಾಡಿದ್ದ ಎಸ್ಪಿಬಿ
ತಿರುವಾಂಕೂರಿನ ರಾಜಮನೆತನದವರಾಗಿರುವ ವರ್ಮಾ ಅವರು ಸಂಗೀತ ಶಿಕ್ಷಕ, ಸಂಗೀತಶಾಸ್ತ್ರಜ್ಞ, ಬರಹಗಾರ ಮತ್ತು ವಾಗ್ಮಿಯಾಗಿ ಬಹುಮುಖ ಪ್ರತಿಭೆಗೆ ಹೆಸರುವಾಸಿಯಾಗಿದ್ದಾರೆ. ಅವರು ಯೂಟ್ಯೂಬ್ ಚಾನೆಲ್ ಮ್ಯೂಸಿಕ್ಬಾಕ್ಸ್ ಮೂಲಕ ಕರ್ನಾಟಕ ಸಂಗೀತದ ಬಗ್ಗೆ ತಮ್ಮ ಜ್ಞಾನದಿಂದ ನೆಟ್ಟಿಗರಿಗೆ ಮನರಂಜನೆ ಮತ್ತು ಶಿಕ್ಷಣವನ್ನು ನೀಡುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ