
ದೆಹಲಿ(ಜು.09): ಒಂದೆಡೆ ಕೊರೋನಾ ವೈರಸ್ ಹೋರಾಟವಾದರೆ ಮತ್ತೊಂದೆಡೆ ಆರ್ಥಿಕ ಹೊಡೆತದಿಂದ ಜನರು, ಸರ್ಕಾರ ಹೈರಾಣಾಗಿದೆ. ಇದರ ನಡುವೆ ನಾರ್ತ್ ಬ್ಲಾಕ್ನಲ್ಲಿರುವ ಕ್ಯಾಬಿನೆಟ್ ಕಾರ್ಯದರ್ಶಿಗಳ ಕಚೇರಿ ಮೆಲ್ಚಾವಣಿ ಕುಸಿದಿರುವ ಘಟನೆ ನಡೆದಿದೆ. ಮೆಲ್ಚಾವಣಿ ಕುಸಿತದಲ್ಲಿ ಓರ್ವ ಸಿಬ್ಬಂದಿಗೆ ಗಾಯವಾಗಿದೆ.
ಅಂಧನಿಗಾಗಿ ಓಡೋಡಿ ಬಂದು ಬಸ್ ನಿಲ್ಲಿಸಿದ ಮಹಿಳೆ, ಮಾನವೀಯತೆಗೆ ಸಲಾಂ ಎಂದ ಜನ!.
ಕುಸಿತದಿಂದ ಗಾಯಗೊಂಡ ಸಿಬ್ಬಂದಿಗೆ ಇತರ ಸಿಬ್ಬಂದಿಗಳು ಪ್ರಥಮ ಚಿಕಿತ್ಸೆ ನೀಡುತ್ತಿರುವ ವಿಡಿಯೋ ವೈರಲ್ ಆಗಿದೆ. ಮೇಲ್ಚಾವಣಿ ಕುಸಿತದಿಂದ ಕಚೇರಿ ಕಂಪ್ಯೂಟರ್, ಮೇಜು, ಕುರ್ಚಿಗಳು ಪುಡಿ ಪುಡಿಯಾಗಿದೆ.
ಬುಧವಾರ(ಜು.08) ಈ ಘಟನೆ ನಡೆದಿದೆ. ಆದರೆ ಕುಸಿತದ ಕುರಿತು ಪೊಲೀಸ್ ಅಥಾವ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿಲ್ಲ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ದೆಹಲಿ ಪೊಲೀಸ್ ಹಾಗೂ ಅಗ್ನಿಶಾಮಕ ದಳ ಜಂಟಿಯಾಗಿ ಕಾರ್ಯಚರಣೆ ನಡೆಸಿ ದಾಖಲೆಗಳನ್ನು ಇತರ ಸಾಮಾಗ್ರಿಗಳನ್ನು ಹೊರತಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ