ಮೋದಿ ಸಂಪುಟ ಸೇರಿದ ನೂತನ ಸಚಿವರಿಗೆ ಖಾತೆ ಹಂಚಿಕೆ; ಶಾಗೆ ಹೆಚ್ಚುವರಿ ಸಹಕಾರ ಸಚಿವಾಲಯ!

Published : Jul 07, 2021, 11:26 PM ISTUpdated : Jul 08, 2021, 10:07 AM IST
ಮೋದಿ ಸಂಪುಟ ಸೇರಿದ ನೂತನ ಸಚಿವರಿಗೆ ಖಾತೆ ಹಂಚಿಕೆ; ಶಾಗೆ ಹೆಚ್ಚುವರಿ ಸಹಕಾರ ಸಚಿವಾಲಯ!

ಸಾರಾಂಶ

ಕೇಂದ್ರ ಸಂಪುಟ ಸೇರಿದ 43 ಸಚಿವರಿಗೆ ಖಾತೆ ಹಂಚಿಕೆ ಹೊಸದಾಗಿ ರಚಿಸಿದ ಸಹಕಾರ ಸಚಿವಾಲಯ ಅಮಿತ್ ಶಾ ಹೆಗಲಿಗೆ ಕರ್ನಾಟಕದ ನಾಲ್ವರಿಗೆ ಪ್ರಮುಖ ಖಾತೆ

ನವದೆಹಲಿ(ಜು.07): ಕೇಂದ್ರ ಸಚಿವ ಸಂಪುಟ ಪುನಾರಚನೆ, ಪ್ರಮಾಣ ವಚನ ಹಾಗೂ ಖಾತೆ ಹಂಚಿಕೆ ಸೂಪರ್ ಫಾಸ್ಟ್ ರೀತಿಯಲ್ಲಿ ನಡೆದಿದೆ. ಇಂದು ಸಂಜೆ ಮೋದಿ ಸಂಪುಟ ಸೇರಲಿರುವ 43 ನೂತನ ಸಚಿವರ ಪಟ್ಟಿ ಬಿಡುಗಡೆಯಾಗಿತ್ತು. ಇನ್ನು 6 ಗಂಟೆಗೆ ಪ್ರಮಾಣ ವಚನ ಸ್ವೀಕಾರವೂ ನಡೆದಿತ್ತು. ಇದೀಗ ನೂತನ ಸಚಿವರಿಗೆ ಖಾತೆ ಹಂಚಿಕೆಯೂ ನಡೆದಿದೆ. ವಿಶೇಷ ಅಂದರೆ ಹೊಸದಾಗಿ ರಚಿಸಲಾದ ಸಹಕಾರ ಸಚಿವಾಲಯ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೆಗಲಿಗೆ ಬಿದ್ದಿದೆ.

"

ಮೋದಿ ಸಂಪುಟದಲ್ಲಿ 11 ಮಹಿಳಾ ಸಚಿವರು; ಹೊಸ ಅಧ್ಯಾಯ ಆರಂಭ!.

ಕರ್ನಾಟಕದ ನಾಲ್ವರು ಸಚಿವರ ಖಾತೆ(ಮಿನಿಸ್ಟರ್ ಆಫ್ ಸ್ಟೇಟ್) :
ರಾಜೀವ್ ಚಂದ್ರಶೇಕರ್:  ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ರಾಜ್ಯ ಸಚಿವರು,
ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ರಾಜ್ಯ ಸಚಿವ

ಶೋಭಾ ಕರಂದ್ಲಾಜೆ: ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ರಾಜ್ಯ ಸಚಿವರು

ಎ ನಾರಾಯಣಸ್ವಾಮಿ: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ರಾಜ್ಯ ಸಚಿವ

ಭಗವಂತ್ ಖೂಬಾ:  ನವೀಕರಿಸಬಹುದಾದ ಇಂಧನ ಸಚಿವಾಲಯದಲ್ಲಿ ರಾಜ್ಯ ಸಚಿವ,ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದಲ್ಲಿ ರಾಜ್ಯ ಸಚಿವರು

ಸಮೃದ್ಧ, ಶಕ್ತಿಶಾಲಿ ಭಾರತ ನಿರ್ಮಾಣಕ್ಕೆ ಪಣ; 43 ನೂತನ ಸಚಿವರಿಗೆ ಪ್ರಧಾನಿ ಮೋದಿ ಕಿವಿಮಾತು!.

ಪ್ರಮಾಣ ವಚನ ಸ್ವೀಕರಿಸಿದ ನೂತನ ಸಚಿವರ ಖಾತೆ ಹಂಚಿಕೆ ವಿವರ(ಕ್ಯಾಬಿನೆಟ್ ಮಿನಿಸ್ಟರ್):

  • ನಾರಾಯಣ ತಾಟು ರಾಣೆ:  ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ ಸಚಿವ
  • ಸರ್ಬಾನಂದ್ ಸೋನೋವಾಲ್: ಬಂದರು, ಹಡಗು ಮತ್ತು ಜಲಮಾರ್ಗ ಸಚಿವ ಹಾಗೂ ಆಯುಷ್ ಸಚಿವ
  • ಡಾ.ವಿರೇಂದ್ರ ಕುಮಾರ್: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ
  • ಜ್ಯೋತಿರಾದಿತ್ಯ ಸಿಂಧಿಯಾ: ನಾಗರಿಕ ವಿಮಾನಯಾನ ಸಚಿವ
  • ರಾಮಚಂದ್ರ ಪ್ರಸಾದ್ ಸಿಂಗ್: ಉಕ್ಕು ಸಚಿವ
  • ಅಶ್ವಿನಿ ವೈಷ್ಣವ್: ರೈಲ್ವೆ , ಸಂವಹನ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ
  • ಪಶು ಪತಿ ಕುಮಾರ್ ಪರಾಸ್: ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವ
  • ಕಿರನ್ ರಿಜಿಜು: ಕಾನೂನು ಮತ್ತು ನ್ಯಾಯ ಸಚಿವ
  • ರಾಜ್ ಕುಮಾರ್ ಸಿಂಗ್: ವಿದ್ಯುತ್ ಸಚಿವ ಹಾಗೂ ನವೀಕರಿಸಬಹುದಾದ ಇಂಧನ ಸಚಿವ
  • ಹರ್ದಿಪ್ ಸಿಂಗ್ ಪುರಿ: ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಹಾಗೂ ವಸತಿ ಮತ್ತು ನಗರ ವ್ಯವಹಾರಗಳ ಸಚಿವ
  • ಮನ್ಸುಕ್ ಮಾಂಡವಿಯಾ: ಆರೋಗ್ಯ -ಕುಟುಂಬ ಕಲ್ಯಾಣ ಸಚಿವ ಹಾಗೂ ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವ
  • ಭೂಪೇಂದ್ರ ಯಾದವ್: ಪರಿಸರ, ಅರಣ್ಯ- ಹವಾಮಾನ ಬದಲಾವಣೆ  ಹಾಗೂ ಕಾರ್ಮಿಕ ಮತ್ತು ಉದ್ಯೋಗ ಸಚಿವ
  • ಪರಶೋತ್ತಮ್ ರೂಪಾಲ: ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ
  • ಜಿ ಕಿಶನ್ ರೆಡ್ಡಿ: ಸಂಸ್ಕೃತಿ ಸಚಿವ, ಪ್ರವಾಸೋದ್ಯಮ ಸಚಿವ ಹಾಗೂ ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವ
  • ಅನುರಾಗ್ ಠಾಕೂರ್: ಮಾಹಿತಿ ಮತ್ತು ಪ್ರಸಾರ ಸಚಿವ ಮತ್ತು ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ
  •  

ಮಿನಿಸ್ಟರ್ ಆಫ್ ಸ್ಟೇರ್ :

  • ಪಂಕಜ್ ಚೌಧರಿ;  ಹಣಕಾಸು ಸಚಿವಾಲದ ರಾಜ್ಯ ಸಚಿವ
  • ಅನುಪ್ರಿಯಾ ಸಿಂಗ್ ಪಟೇಲ್; ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ರಾಜ್ಯ ಸಚಿವ
  • ಡಾ. ಸತ್ಯಪಾಲ್ ಸಿಂಗ್ ಬಘೇಲ್; ಕಾನೂನು ಮತ್ತು ನ್ಯಾಯ ಸಚಿವಾಲಯದ ರಾಜ್ಯ ಸಚಿವ
  • ಭಾನು ಪ್ರತಾಪ್ ಸಿಂಗ್ ವರ್ಮಾ:  ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ರಾಜ್ಯ ಸಚಿವ
  • ದರ್ಶನಾ ವಿಕ್ರಮ ಜರ್ದೋಶ್;  ಜವಳಿ  ಮತ್ತು ರೈಲ್ವೆ ಸಚಿವಾಲಯದ ರಾಜ್ಯ ಸಚಿವೆ
  • ಮಿನಾಕ್ಷಿ ಲೇಖಿ; ವಿದೇಶಾಂಗ ಮತ್ತು ಸಂಸ್ಕೃತಿ ಸಚಿವಾಲಯದಲ್ಲಿ ರಾಜ್ಯ ಸಚಿವ
  • ಅನ್ನಪೂರ್ಣ ದೇವಿ; ಶಿಕ್ಷಣ ಸಚಿವಾಲಯದ ರಾಜ್ಯ ಸಚಿವೆ
  • ಕೌಶಾಲ್ ಕಿಶೋರ್; ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವ
  • ಅಜಯ್ ಭಟ್;  ರಕ್ಷಣಾ  ಮತ್ತು ಪ್ರವಾಸೋದ್ಯಮ ಸಚಿವಾಲಯದ ರಾಜ್ಯ ಸಚಿವ
  • ಬಿಎಲ್ ವರ್ಮಾ; ಈಶಾನ್ಯ ಪ್ರದೇಶದ ಅಭಿವೃದ್ಧಿ ಮತ್ತು ಸಹಕಾರ ಸಚಿವಾಲಯದ ರಾಜ್ಯ ಸಚಿವ
  • ಅಜಯ್ ಕುಮಾರ್; ಗೃಹ ಸಚಿವಾಲಯದ ರಾಜ್ಯ ಸಚಿವ
  • ಚವ್ಹಾಣ್ ದೇವುಸಿನ್ಹ; ಸಂವಹನ ಸಚಿವಾಲಯದ ರಾಜ್ಯ ಸಚಿವ
  • ಕಪಿಲ್ ಮೋರೇಶ್ವರ್ ಪಾಟೀಲ್; ಪಂಚಾಯತಿ ರಾಜ್ ಸಚಿವಾಲಯದ ರಾಜ್ಯ ಸಚಿವ 
  • ಪ್ರತಿಮಾ ಭೌಮಿಕ್; ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ರಾಜ್ಯ ಸಚಿವ
  • ಡಾ. ಸುಭಾಷ್ ಸರ್ಕಾರ್; ಶಿಕ್ಷಣ ಸಚಿವಾಲಯದ  ರಾಜ್ಯ ಸಚಿವ
  • ಡಾ.ಭಗವತ್ ಕಿಶನ್‌ರಾವ್ ಕರದ್; ಹಣಕಾಸು ಸಚಿವಾಲಯದ ರಾಜ್ಯ ಸಚಿವ
  • ಡಾ.ರಾಜ್‌ಕುಮಾರ್ ರಂಜನ್ ಸಿಂಗ್; ವಿದೇಶಾಂಗ ಮತ್ತು ಶಿಕ್ಷಣ ಸಚಿವಾಲಯದ ರಾಜ್ಯ ಸಚಿವ
  • ಡಾ.ಭಾರತಿ ಪ್ರವೀಣ್ ಪವಾರ್; ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ರಾಜ್ಯ ಸಚಿವ 
  • ಬಿಶ್ವೇಶ್ವರ ತುಡು; ಬುಡಕಟ್ಟು ವ್ಯವಹಾರ ಮತ್ತು ಜಲಶಕ್ತಿ ಸಚಿವಾಲಯದ ರಾಜ್ಯ ಸಚಿವ
  • ಶಂತನೂ ಠಾಕೂರ್; ಬಂದರು, ಹಡಗು ಮತ್ತು ಜಲಮಾರ್ಗ ಸಚಿವಾಲಯದ ರಾಜ್ಯ ಸಚಿವ 
  • ಡಾ. ಮನುಜಪರ ಮಹೇಂದ್ರಬಾಯಿ; ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ  ಮತ್ತುಆಯುಷ್ ಸಚಿವಾಲಯದ ರಾಜ್ಯ ಸಚಿವ
  • ಜಾನ್ ಬಾರ್ಲ: ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವ
  • "

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮನೆ ಮುಂದೆ ದನ ಸೆಗಣಿ ಹಾಕಿದ್ದಕ್ಕೆ ಯುವಕನ ಕೊಲೆ
ಗಂಡ ಉಳಿಯಲಿಲ್ಲ, ಎಗ್ಸಾಂ ಬರೆಯಲಿಲ್ಲ, ಕ್ಯಾನ್ಸಲ್ ಆಗಿದ್ದು ಬರೀ ಫ್ಲೈಟ್ ಅಲ್ಲ ನೂರಾರು ಮಂದಿ ಕನಸು