ಸಂಸದರ ವೇತನ ಕಟ್: ಕ್ಯಾಬಿನೆಟ್ ನಿರ್ಧಾರ ಸ್ವಾಗತಿಸಿದ ಕಾಂಗ್ರೆಸ್!

By Suvarna NewsFirst Published Apr 6, 2020, 5:17 PM IST
Highlights

ಕೊರೋನಾ ವೈರಸ್‌ ನಿಯಂತ್ರಿಸುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್‌ಡೌನ್| ಲಾಕ್‌ಡೌನ್‌ನಿಂದ ಹದಗೆಟ್ಟ ಆರ್ಥಿಕ ಪರಿಸ್ಥಿತಿ| ಸಂಸದರ ವೇತನ ಕಡಿಮೆ ಮಾಡಲು ಕ್ಯಾಬಿನೆಟ್‌ ನಿರ್ಧಾರ| ಎರಡು ವರ್ಷ ಸಂಸದರ ನಿಧಿಗೂ ಕತ್ತರಿ

ನವದೆಹಲಿ(ಏ.06): ಕೊರೋನಾ ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ದೇಶದಾದ್ಯಂತ ಲಾಕ್‌ಡೌನ್ ಘೋಷಿಸಲಾಗಿದೆ. ಹಹೀಗಿದ್ದರೂ ಕಳೆದ ಐದು ದಿನಗಳಿಂದ ಪರಿಸ್ಥಿತಿ ಕೊಂಚ ಹದಗೆಟ್ಟಿದ್ದು, ಸೋಂಕಿತರ ಹಾಗೂ ಮೃತರ ಸಂಖ್ಯೆ ಹೆಚ್ಚಲಾರಂಭಿಸಿದೆ. ಹೀಗಿರುವಾಗ ಮುಂದಿನ ಒಂದು ವರ್ಷ ಸಂಸತ್ತು ಸದಸ್ಯರ ವೇತನವನ್ನು ಶೇ. 30 ರಷ್ಟು ಇಳಿಸಲು ಸುಗ್ರೀವಾಜ್ಞೆ ಹೊರಡಿಸಲಾಗಿದೆ. 

approves Ordinance amending the Salary, Allowances and Pension of Members of Parliament Act, 1954 reducing 'salary' by 30% w.e.f. 1st April, 2020 for a year. pic.twitter.com/kZzO8RiLve

— Prakash Javadekar (@PrakashJavdekar)

ಸುದ್ದಿಗೋಷ್ಟಿ ನಡೆಸಿ ಈ ಮಾಹಿತಿ ನೀಡಿದ ಸಚಿವ ಪ್ರಕಾಶ್ ಜಾವ್ಡೇಕರ್ ಸಂಸದರ ವೇತನ ಕಡಿತಗೊಳಿಸುವುದರೊಂದಿಗೆ, ಅವರ ಕ್ಷೇತ್ರಾಭಿವೃದ್ಧಿಗೆಂದು ಮೀಸಲಾಗಿಡುವ ಸಂಸದರ ನಿಧಿಯನ್ನು ಮುಂದಿನ ಎರಡು ವರ್ಷ 2020-21 ಹಾಗೂ 2021-22 ತಾತ್ಕಾಲಿಕವಾಗಿ ಅಮಾನತ್ತುಗೊಳಿಸಲಾಗುತ್ತದೆ ಎಂದಿದ್ದಾರೆ. ಸಂಸದರ ನಿಧಿಗೆ ಮೀಸಲಾಗಿಡುವ 7900 ಕೋಟಿ ರೂ. ಮುಂದಿನ ಎರಡು ವರ್ಷದವರೆಗೆ ಭಾರತ ಸರ್ಕಾರದ ಕ್ರೋಡೀಕೃತ ಖಾತೆಗೆ ಹಾಕಲಾಗುತ್ತದೆ ಎಂದು ತಿಳಿಸಿದ್ದಾರೆ.

कैबिनेट ने देश भर में के प्रभाव को कम करने और स्वास्थ्य प्रबंधन को मजबूत करने के लिए 2020-21 और 2021-22 के दौरान के अस्थायी निलंबन को मंजूरी दी।

राष्ट्रपति, उपराष्ट्रपति, राज्यपालों ने भी स्वेच्छा से वेतन कटौती का फैसला किया है। pic.twitter.com/0GqicQtuQN

— Prakash Javadekar (@PrakashJavdekar)

ಇನ್ನು ರಾಷ್ಟ್ರಪತಿ, ಉಪ ರಾಷ್ಟ್ರಪತಿ ಹಾಗೂ ಎಲ್ಲಾ ರಾಜ್ಯಗಳ ರಾಜ್ಯಪಾಲರು ಈಗಾಗಲೇ ತಮ್ಮ ವೇತನದಲ್ಲಿ ಒಂದು ಭಾಗವನ್ನು ಸಾಮಾಜಿಕ ಅಭಿವೃದ್ಧಿಗೆ ಬಳಸುವಂತೆ ಸೂಚಿಸಿದ್ದು, ಈ ಹಣವೂ ಭಾರತ ಸರ್ಕಾರದ ಕ್ರೋಡೀಕೃತ ಖಾತೆಗೆ ಹಾಕಲಾಗುತ್ತದೆ ಎಂದು ಜಾವ್ಡೇಕರ್ ತಿಳಿಸಿದ್ದಾರೆ. 

ಕ್ಯಾಬಿನೆಟ್‌ ನಿರ್ಧಾರಕ್ಕೆ ಕಾಂfಗ್ರೆಸ್ ಬೆಂಬಲ

Dear PM,

INC supports the salary cut for MP’s!

Please note that MPLAD is meant to execute developmental works in the constituency.

Suspending it is a huge disservice to the constituents & will undermine the role & functions of MP.https://t.co/kg2W55yeux

— Randeep Singh Surjewala (@rssurjewala)

ಇನ್ನು ಕ್ಯಾಬಿನೆಟ್‌ ತೆಗೆದುಕೊಂಡ ಈ ನಿರ್ಧಾರವನ್ನು ಕಾಂಗ್ರೆಸ್ ಸ್ವಾಗತಿಸಿದೆ. ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್ ಪಕ್ಷದ ವಕ್ತಾರ ರಣ್ದೀಪ್ ಸುರ್ಜೇವಾಲಾ 'ಪ್ರಧಾನಿಯವರೇ, ಸಂಸದರ ವೇತನ ಕಡಿತಗೊಳಿಸುವ ನಿರ್ಧಾರವನ್ನು ಕಾಂಗ್ರೆಸ್ ಸ್ವಾಗತಿಸುತ್ತದೆ. ಆದರೆ ದಯವಿಟ್ಟು ಗಮನಿಸಿ, ಸಂಸದರ ನಿಧಿ ಇರುವುದು ಕ್ಷೇತ್ರದ ಅಭಿವೃದ್ಧಿಗಾಗಿ. ಇದನ್ನು ತತಾತ್ಕಾಲಿಕವಾಗಿ ಸ್ಥಗಿತಗೊಳಿಸಿದರೆ ಕ್ಷೇತ್ರಾಭಿವೃದ್ಧಿ ಕಾರ್ಯಗಳು ನಿಲ್ಲುತ್ತವೆ' ಎಂದಿದ್ದಾರೆ.

click me!